ಮಲೆಕುಡಿಯ ಸಮಾಜ ಬಾಂಧವರ ವತಿಯಿಂದ ನಾಳೆ (ಆ .3) ಆಟಿಡೊಂಜಿ ಕೆಸರ್ದ ಗೊಬ್ಬು ಕಾರ್ಯಕ್ರಮವು ಕಟ್ಟೆಬೈಲ್ ಮುಳ್ಳೂರು-ಮಾಳದ ಗಣೇಶ್ ಶೆಟ್ಟಿಗಾರ್ ಗದ್ದೆಯಲ್ಲಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. .
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕೆರ್ವಾಶೆ ಪ್ರಗತಿ ಪರ ಕೃಷಿಕ ಬೋಜ ಗೌಡ ಬೆರ್ಕಳ ನಡೆಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ವಿ.ಸುನಿಲ್ ಕುಮಾರ್, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಮುನಿಯಾಲು ಉದಯ್ ಶೆಟ್ಟಿ, ರಾಜ್ಯ ಮಲೆಕುಡಿಯ ಸಂಘದ ಅಧ್ಯಕ್ಷ ಶ್ರೀಧರ್ ಗೌಡ ಈದು, ಮಾಳ ಪಂಚಾಯತ್ ಅಧ್ಯಕ್ಷ ಉಮೇಶ್ ಪೂಜಾರಿ ಆಗಮಿಸಲಿದ್ದಾರೆ.
ಅತಿಥಿಗಳಾಗಿ ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಗಂಗಾಧರ ಗೌಡ, ಮಲೆಕುಡಿಯ ಕ್ರೀಡಾಕೂಟ ಸಮಿತಿ ಉಡುಪಿ ಜಿಲ್ಲೆ ಇದರ ಅಧ್ಯಕ್ಷ ಕರ್ಣ ನೂರಾಳ ಬೆಟ್ಟು, ಕೇಂದ್ರಿಯ ನಾಟಿ ಸಂಗ್ರಹಾಲಯ ಹಾರ್ದಲ್ಲಿ ಮಂಡಳಿ ಕುಂದಾಪುರ ಇದರ ಅರಣ್ಯ ರಕ್ಷಕ ರಾಜು ಗೌಡ, ಗೋವಿಂದ ಗೌಡ ಹೇರಾಂಡೆ, ಪ್ರಗತಿ ಪರ ಕೃಷಿಕರು, ಮಲ್ಲಾರು ಮಾಳ, ನಿತೀಶ್, ಅರಣ್ಯ ವೀಕ್ಷಕರು, ಕುದುರೆಮುಖ ವನ್ಯಜೀವಿ ವಿಭಾಗ, ಗಣೇಶ್ ಶಿರ್ವ, ಉದ್ಯಮಿಗಳು, ಕಲ್ಯಾಣಿ ಆಗೋ ಕೆಮಿಕಲ್ಸ್ ಪಂಚಾಯತ್ ಸಂಕೀರ್ಣ, ಹರಿಶ್ಚಂದ್ರ ತೆಂಡುಲ್ಕರ್, ಉದ್ಯಮಿಗಳು, ಮಾಳ, ಅಜಿತ್ ಹೆಗ್ಡೆ ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತ್ ಮಾಳ, ಸುಶೀಲ ಶೆಟ್ಟಿಗಾರ್, ಕಟ್ಟೆಬೈಲು (ಕೋಂಕ) ಮುಳ್ಳೂರು-ಮಾಳ
ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮದಲ್ಲಿ ಕಂಬಳ ಕ್ಷೇತ್ರದ ಸಾಧಕ ಬಂಗಾಡಿ ಪರಂಬೇರು ನಾರಾಯಣ ಮಲೆಕುಡಿಯ ಹಾಗೂ ಆ ಮನೆತನದ ಮುದ್ದಿನ ಕೋಣ ರಾಜ್ಯ ರಾಜಧಾನಿ ಬೆಂಗಳೂರು ಕಂಬಳದ ನೇಗಿಲು ಹಿರಿಯ ವಿಭಾಗದ ರಾಜ ಕಿರೀಟ ಪಡೆದ ಬಂಗಾಡಿ ಗುಂಡು ಕೋಣನಿಗೆ ಮತ್ತು ಇದೇ ಫೆಬ್ರವರಿ ತಿಂಗಳಲ್ಲಿ ಕೆಫೇ ಕಾಫಿ ಡೇ ಮಾಲೀಕರಾದ
ಬಿ. ವಿ. ಸಿದ್ಧಾರ್ಥ ಹೆಗ್ಡೆಯವರ ಭಾವಚಿತ್ರವನ್ನು ಕಾಫಿ ಹಣ್ಣಿನಲ್ಲಿ ರಚಿಸಿ WORLD WIDE BOOK OF RECORD ನಲ್ಲಿ ತಮ್ಮ ಹೆಸರನ್ನು ಗಿಟ್ಟಿಸಿಕೊಂಡ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ವಿನಯ್ ಕುಮಾರ್ ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಹಲವು ಆಟೋಟ ಸ್ಪರ್ಧೆಗಳು ನಡೆಯಲಿದ್ದು, ಉಡುಪಿ, ದಕ್ಷಿಣ ಕನ್ನಡ, ಕೊಡಗು ಚಿಕ್ಕಮಗಳೂರು ಜಿಲ್ಲೆ ಹಾಗೂ ಕೇರಳ ರಾಜ್ಯದ ಸ್ವಜಾತಿ ಬಾಂಧವರಿಗೆ ಮುಕ್ತ ಆಹ್ವಾನವಿದೆಯೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.