ಹೆಬ್ರಿ: ಹಾವು ಕಚ್ಚಿ ಬಾಲಕಿ ಸಾವು

0
ಸಾಂಧರ್ಬಿಕ ಚಿತ್ರ

ತಂದೆಯ ಜೊತೆ ತೋಟದಲ್ಲಿದ್ದ ವೇಳೆ, ವಿಷಕಾರಿ ಹಾವು ಕಚ್ಚಿ ಎಂಟು ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಹೆಬ್ರಿಯ ಶೇಡಿಮನೆ ಗ್ರಾಮದಲ್ಲಿ ನಡೆದಿದೆ.

ಶೇಡಿಮನೆಯ ಶ್ರೀಧರ ಎಂಬವರ ಪುತ್ರಿ ಸನ್ನಿಧಿ(8) ಮೃತ ಬಾಲಕಿ. ಶಾಲೆಗೆ ರಜೆಯಿದ್ದ ಕಾರಣ, ತಂದೆಯ ಜೊತೆ ತೋಟದಲ್ಲಿದ್ದಾಗ ಯಾವುದೋ ವಿಷಕಾರಿ ಹಾವು ಕಚ್ಚಿದ್ದಾಗಿ ತಿಳಿಸಿದ್ದಾಳೆ. ತಕ್ಷಣ ಕಾಲಿನಲ್ಲಿ ಗಾಯ ಗಮನಿಸಿದ ಬಾಲಕಿಯ ತಂದೆ ಕೂಡಲೇ ಹೆಬ್ರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು,ಆದರೆ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

LEAVE A REPLY

Please enter your comment!
Please enter your name here