Saturday, January 24, 2026
Google search engine
Homeಕಾರ್ಕಳಮುನಿಯಾಲು:ಹಾಡು ಹಗಲೇ ಕಾಣಿಕೆ ಡಬ್ಬಿಯಿಂದ ಹಣ ಕದಿಯಲು ಯತ್ನ

ಮುನಿಯಾಲು:ಹಾಡು ಹಗಲೇ ಕಾಣಿಕೆ ಡಬ್ಬಿಯಿಂದ ಹಣ ಕದಿಯಲು ಯತ್ನ

 

ಅಪರಿಚಿತ ವ್ಯಕ್ತಿಯೊರ್ವನು ಮುನಿಯಾಲು ಮಾರಿಯಮ್ಮ ದೇವಸ್ಥಾನದ ಕಾಣಿಕೆ ಡಬ್ಬದಿಂದ ಹಣ ಕಳವು ಮಾಡಲು ಯತ್ನಿಸಿ ಸಿಕ್ಕಿಬಿದ್ದ ಘಟನೆ ನಡೆದಿದೆ.

ಮಾರಿಯಮ್ಮ ದೇವಸ್ಥಾನದ ಸಹಾಯಕ ಅರ್ಚಕ ಮಂಗಳವಾರ ಮಧ್ಯಾಹ್ನ ದೇವಸ್ಥಾನದ ಆವರಣದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಯಾಗ ಮಂಟಪದ ಬಳಿಯಿಂದ ಶಬ್ದ ಬಂದಿದ್ದು, ಹೋಗಿ ಗಮನಿಸಿದಾಗ ಓರ್ವ ವ್ಯಕ್ತಿ ವಿಪರೀತ ಮದ್ಯ ಸೇವಿಸಿ ದೇವಸ್ಥಾನದ ಕಾಣಿಕೆ ಡಬ್ಬಿಯನ್ನು ಕದಿಯಲು ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ. ತಕ್ಷಣ ಅವನನ್ನು ಹಿಡಿದು ವಿಚಾರಿಸಿದಾಗ ತನ್ನ ಹೆಸರು ರಾಘವೇಂದ್ರ ಎಂದು ತಿಳಿಸಿದ್ದಾನೆ.

ಈ ಬಗ್ಗೆ ದೇವಸ್ಥಾನದ ಸಹಾಯಕ ಅರ್ಚಕ ವಿಘ್ನೇಶ್ವರ ರವರು ನೀಡಿದ ದೂರಿನ ಅನ್ವಯ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments