ಕಾರ್ಕಳ: ಶಿಕ್ಷಣದಿಂದ ಗುಣಾತ್ಮಕ ಸಮಾಜ ನಿರ್ಮಾಣ : ರಿಯಾಜ್ ರಾನ್

0

 

‘ಶಿಕ್ಷಣದಿಂದ ವಿದ್ಯಾರ್ಥಿ ಗಳ ಭವಿಷ್ಯ ಬೆಳಗಬೇಕು. ಹೆತವರು ಮತ್ತು ಪೋಷಕರು ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ಕರ್ತವ್ಯವನ್ನು ತಿಳಿಸಿಕೊಡುವ ಪ್ರಯತ್ನ ಮಾಡಬೇಕು. ವಿದ್ಯಾರ್ಥಿಗಳು ಸಮಾಜದ ಒಳಿತನ್ನು ಬಯಸುವ ವಾಹಕಗಳಗಾಗಬೇಕು ಮತ್ತು ಕೆಡುಕುಗಳನ್ನು ಮೆಟ್ಟಿನಿಲ್ಲುವ ಧ್ವನಿಗಳಾಗಬೇಕು. ಹೆತವರು ವಿದ್ಯಾರ್ಥಿಗಳಿಗೆ ಹೆಚ್ಚಿನ ಒತ್ತಡ ನೀಡಬಾರದು. ಮಕ್ಕಳು ವಿದ್ಯೆಯೊಂದಿಗೆ ಒಳ್ಳೆಯ ಗುಣಗಳನ್ನು ಹೊಂದಿ ಸಮಾಜಮುಖಿಗಳಾಗಬೇಕು’ ಎಂದು ಕೆ.ಎಮ್. ಇ. ಎಸ್ ವಿದ್ಯಾಸಂಸ್ಥೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಕರ್ನಾಟಕ ರಾಜ್ಯದ ಮುಸ್ಲಿಂ ಬೋರ್ಡಿನ ಕಾರ್ಯದರ್ಶಿಯಾಗಿರುವ ರಿಯಾಜ್ ರಾನ್ ಅಭಿಪ್ರಾಯಪಟ್ಟರು.

ಕಾಲೇಜು ಪ್ರಾಂಶುಪಾಲರಾದ ಕೆ. ಬಾಲಕೃಷ್ಣ ರಾವ್ ಇವರು ಮಾತನಾಡಿ ‘ಎಲ್ಲಾ ಧರ್ಮದ ಸಾರ ಮತ್ತು ಗುರಿಯೊಂದೆ. ಕೆ.ಎಮ್.ಇ.ಎಸ್. ವಿದ್ಯಾಸಂಸ್ಥೆ ಗುಣಮಟ್ಟದ ವಿದ್ಯಾಭ್ಯಾಸವನ್ನು ನೀಡುತ್ತಾ ಬಂದಿದೆ’ ಎಂದು ಅಧ್ಯಕ್ಷ ಭಾಷಣದಲ್ಲಿ ಹೇಳಿದರು.

ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಲೋಳಿತ ಡಿ ಸಿಲ್ವರವರು ಮಾತನಾಡಿ ‘ನಮ್ಮ ಸಂಸ್ಥೆಯಲ್ಲಿ ಉತ್ತಮ ಶಿಸ್ತು ಇದ್ದು ಉತ್ತಮ ವಿದ್ಯಾಭ್ಯಾಸ ನಡೆಯುತಿದೆ’ ಎಂದರು.

ಇಸ್ಲ್ಯಾಮಿಕ್ ಶಿಕ್ಷಣದ ಅಧ್ಯಾಪಕಿ ಆಸ್ಮಿನ್ ಇವರು ಮಕ್ಕಳಿಂದ ಕುರಾನ್ ಫಠಣ ಮಾಡಿಸಿದರು. ಶಿಕ್ಷಕಿ ರೇಷ್ಮ ಕಾರ್ಯಕ್ರಮ ನಿರ್ವಹಿಸಿದರು. ಅತಿಥಿಗಳಾದ ರಿಹಾನ ಇಕ್ಬಾಲ್, ಮೊಹಮ್ಮದ್ ಅಕ್ರಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮದ ಯಶಶ್ವಿಗೆ ಕಾರಣರಾದರು.

LEAVE A REPLY

Please enter your comment!
Please enter your name here