Wednesday, February 4, 2026
Google search engine
Homeಕಾರ್ಕಳಗಣೇಶೋತ್ಸವದಿಂದ ಸಂಘಟನೆ ಮತ್ತು ಸಾಮರಸ್ಯ ಸಾಧ್ಯ-ಕೆ.ಬಾಲಕೃಷ್ಣ ರಾವ್

ಗಣೇಶೋತ್ಸವದಿಂದ ಸಂಘಟನೆ ಮತ್ತು ಸಾಮರಸ್ಯ ಸಾಧ್ಯ-ಕೆ.ಬಾಲಕೃಷ್ಣ ರಾವ್

ಗಣೇಶೋತ್ಸವದಿಂದ ಸಂಘಟನೆ ಮತ್ತು ಸಾಮರಸ್ಯ ಸಾಧ್ಯ-ಕೆ.ಬಾಲಕೃಷ್ಣ ರಾವ್

“ಲೋಕಮಾನ್ಯ ಭಾಲಗಂಗಾಧರ ತಿಲಕ್ ರವರು ಆರಂಭಿಸಿದ ಗಣೇಶೋತ್ಸವ ಇಂದು ಲೋಕಾವ್ಯಾಪಿಯಾಗಿದೆ. ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಲು ಆರಂಭಿಸಿದ ಗಣೇಶೋತ್ಸವ ಮೊದಲು ಮುಂಬೈ ಹತ್ತಿರದ ಪುಣೆ ಯಲ್ಲಿನಡೆಯಿತು.ಕಾರ್ಕಳದ ಜೋಡುರಸ್ತೆ ಯಲ್ಲಿ ಆರಂಭಿಸಿದ ಗಣೇಶೋತ್ಸವಕ್ಕೆ ಈಗ 42 ವರ್ಷ ಆದರೆ ಈ ವರ್ಷದ ವಿಶೇಷ ವೇನಂದರೆ ಗಣೇಶ ದೇವರಿಗೆ ಬೆಳ್ಳಿಯ ಪ್ರಭಾವಳಿಯ ಸಮರ್ಪಣೆ. ಐದು ದಿನಗಳ ವರೆಗೆ ನಡೆದ ಗಣೇಶೋ ತ್ಸವದ ಲ್ಲಿ ದಿನ ವೂ ತ್ರಿಕಾಲ ಪೂಜೆ, ಭಜನೆಕುಣಿತ, ಯಕ್ಷಗಾನ ತಾಳಮದ್ದಳೆ, ಸಾಕ್ಸೋ ಫೋನ್ ವಾದನ, ಪ್ರತಿಭಾ ಪುರಸ್ಕಾರ, ವಿವಿಧ ಕ್ರಿಡೆಗಳಲ್ಲಿ ಭಾಗವಹಿಸಿದ ಕ್ರೀಡಾ ಪಟುಗಳಿ ಗೆ ಬಹುಮಾನ ವಿತರಣೆ, ರೋ ಗಿಗಳಿಗೆ ಧನಸಹಾಯ, ದಾನಿಗಳಿಗೆ ಸನ್ಮಾನ, ಅಧಿಕ ಅಂಕಗಳನ್ನು ಪಡೆದ ಕುಕ್ಕುಂದೂರು ಗ್ರಾಮದ ಮೂರು ಶಾಲೆಯ ವಿದ್ಯಾರ್ಥಿ ಗಳಿಗೆ ಸನ್ಮಾನ, ಈ ರೀತಿ ಹತ್ತು ಹಲವು ರಂಗಗಳಲ್ಲಿ ಸಾಧನೆ ಮಾಡಿದ ಗ್ರಾಮಸ್ತರಿಗೆ ಸನ್ಮಾನ, ಇವುಗಲೆಲ್ಲವೂ ಪ್ರಶಂಶನಿಯ. 25 ಲಕ್ಷಗಳು ಬೆಲೆ ಬಾಳುವ ದೇವರಿಗೆ ಅರ್ಪಿ ತವಾದ ಬೆಳ್ಳಿಯ ಪ್ರಾಭಾವಳಿ ಕಾರ್ಯಕರ್ತರಾದ, ಗಣೇಶೋತ್ಸವದ ಸಮಿತಿಯ ಅಧ್ಯಕ್ಷರಾದ ಸಂತೋಷ್ ರಾವ್ ಅಭಿನಂದನಾರ್ಹರು.” ಎಂದು ಕೆ. ಎಮ್. ಇ. ಎಸ್ ಸಂಸ್ತೆ ಯ ಪ್ರಿನ್ಸಿಪಾಲ್ ಮತ್ತು ಸಾಹಿತಿ ಯಾಗಿರುವ ಕೆ. ಬಾಲಕೃಷ್ಣ ರಾವ್ ರವರು ತಮ್ಮ ಅಧ್ಯಕ್ಷ ಭಾಷಣ ದ ಲ್ಲಿ ಹೇಳಿದರು.

ಸೌ.ಅಶ್ವಿನಿ ನಾಯಕ್ ರವರು ಮಾತನಾಡಿ “ಭಾರತದಲ್ಲಿ ಸನಾತನ ಧರ್ಮ ಉಳಿದರೆ ದೇಶ ಉಳಿಯುವುದು. ಇಂದು ಗಣೇಶನನ್ನ ಪ್ರತಿಯೊಬ್ಬರು ಪೂಜಿಸುತಾರೆ. ಗಣೇಶನ ವಿಗ್ರಹದ ಪ್ರತಿಯೊಂದು ಅಂಗಾಗಗಳಿಗೂ ವಿಶೇಷ ಅರ್ಥ ಇದೆ ” ಎಂದರು.

ಮತೋರ್ವ ಮುಖ್ಯ ಅತಿಥಿ ಶಾಂತಾ. ಪಿ. ಸಾಲಿಯಾನ್ ಮಾತನಾಡಿ “42 ವರುಷಗಳಿಂದ ನಿರಂತರವಾಗಿ ಇದೇ ಸ್ಥಳದಲ್ಲಿ ಗಣೇಶೋತ್ಸವ ಆಚರಣೆಯನ್ನು ಮಾಡುವುದು ಪ್ರಶಂಸನೀಯ. ಎಲ್ಲರಿಗೂ ಆ ದೇವರ ಅನುಗ್ರಹ ನಿರಂತರವಾಗಿ ಇರಲಿ ” ಎಂದು ಹಾರೈಸಿದರು.

ಮತೋರ್ವ ಮುಖ್ಯ ಅತಿಥಿ ದೀಪ. ಕೆ. ವಿಶ್ವನಾಥ್ ಮಾತನಾಡಿ ” ನನ್ನನ್ನು ಬೆಂಗಳೂರಿನಿಂದ ಇಲ್ಲಿವರೆಗೆ ಕರೆಯಿಸಿ ಸಮಾರಂಭದಲ್ಲಿ ಭಾಗವಹಿಸುವಂತೆ ಮಾಡಿದ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಸಂತೋಷ್ ರಾವ್ ಅವರಿಗೆ ಧನ್ಯವಾದಗಳು ” ಎಂದು ಹೇಳಿದರು.

ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಸಂತೋಷ್ ರಾವ್ ರವರು ಸ್ವಾಗತಿಸಿದರು. ಕೋಶಧಿಕಾರಿ ಕಿಶೋರ್ ಕುಮಾರ್ ಧನ್ಯವಾದ ಸಮರ್ಪಣೆ ಮಾಡಿದರು. ರವಿ ಶೆಟ್ಟಿಯವರು ಬಹುಮಾನ ಪಡೆದವರ ಪಟ್ಟಿಯನ್ನು ಓದಿದರು. ಪ್ರಧಾನ ಕಾರ್ಯದರ್ಶಿ ಪ್ರಸಾದ್ ಐಸಿರ ಕಾರ್ಯಕ್ರಮದ ನಿರೂಪಣೆ ಮಾಡಿದರು.
ದೇವರಿಗೆ ಮಹಾಪೂಜೆ ನಡೆದ ಬಳಿಕ ಬಂಡಿಮಠದ ವರೆಗೆ ಅದ್ದೂರಿಯ ಭವ್ಯ ಮೆರವಣಿಗೆ ನಡೆಯಿತು. ನಂತರ ಜೋಗಿನಕೆರೆಯಲ್ಲಿ ಗಣಪತಿ ವಿಗ್ರಹದ ವಿಸರ್ಜನೆ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತಭಿಮಾನಿಗಳು ಮೆರವಣಿಗೆಯಲ್ಲಿ ಭಾಗವಹಿಸಿದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments