
‘ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಒಬ್ಬರು ಅಪ್ರತಿಮ ಶಿಕ್ಷಕರಾಗಿದ್ದರು, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷರಾಗಿದ್ದರು. ವಾಗ್ಮಿಯೂ, ತತ್ವಶಾಸ್ತ್ರಜ್ಞರಾಗಿದ್ದು, ಆಕ್ಸಫರ್ಡ್ ಯೂನಿವರ್ಸಿಟಿಯ ವಿಸಿಟಿಂಗ್ ಪ್ರೊಫೆಸರ್ ಆಗಿದ್ದು, ಮುಂದಕ್ಕೆ ಭಾರತದ ರಾಷ್ಟ್ರಪತಿಯಾದರು. ಅವರ ಆದರ್ಶವನ್ನು ಎಲ್ಲಾ ಶಿಕ್ಷಕರು ಇಂದು ಪಾಲಿಸುವ ಅವಶ್ಯಕತೆಯಿದೆ. ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡರೆ ಯಾವುದನ್ನೂ ಸಾಧಿಸಬಹುದು. ವಿದ್ಯಾರ್ಥಿದೆಸೆಯಲ್ಲಿ ಕಷ್ಟಪಟ್ಟರೆ ಮುಂದಿನ ಜೀವನ ಸುಖಮಯವಾಗುವುದರಲ್ಲಿ ಸಂದೇಹವಿಲ್ಲ. ಕೆ. ಎಮ್. ಎಸ್. ವಿದ್ಯಾಸಂಸ್ಥೆಯವರು ನನ್ನನ್ನು ಸನ್ಮಾನಿಸಿದ್ಫು ನನಗೆ ಅತೀವ ಸಂತೋಷವನ್ನು ತಂದುಕೊಟ್ಟಿದೆ.’ ಎಂದು ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎಸ್. ಜಿ. ಪ್ರಭುರವರು ಹೇಳಿದರು.
ಪ್ರೌಢಶಾಲಾ ಮುಖ್ಯಸ್ಥೆ ಶ್ರೀಮತಿ ಪ್ರಾಸ್ತವಿಕ ಭಾಷಣ ಮಾಡಿದರು. ಪ್ರಾಥಮಿಕ ಶಾಲಾ ಮುಖ್ಯಸ್ತೆ ಮಾತನಾಡಿ “ಎಸ್. ಜಿ. ಪ್ರಭುರವರು ನನ್ನ ಗುರುಗಳು ಎಂದು ಹೇಳಲು ನನಗೆ ಹೆಮ್ಮೆಯನಿಸುತಿದೆ. ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಪಾಲಿಸಬೇಕು ‘ ಎಂದರು.
ಕಾಲೇಜಿನ ಪ್ರಾಂಶುಪಾಲ ಕೆ. ಬಾಲಕೃಷ್ಣ ರಾವ್ ರವರು ಮಾತನಾಡಿ “ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅಪಾರ ದೇಶ ಭಕ್ತರಾಗಿದ್ದು, ಭಾರತದ ಶಿಕ್ಷಣದ ರಾಯಭಾರಿಯಾಗಿದ್ದರು. ಮೈಸೂರು ಬಿಟ್ಟು ಹೋದಾಗ, ಅವರನ್ನು ಮೈಸೂರಿನಿಂದ ರೈಲ್ವೆ ಸ್ಟೇಷನ್ನವರೆಗೆ ಸಾರೋಟ್ ನಲ್ಲಿ ಕುಳ್ಳಿರಿಸಿ, ವಿದ್ಯಾರ್ಥಿಗಳು ಸ್ವತಃ ತಾವೇ ಅವರು ಕೂತುಕೊಂಡಿದ್ದ ಸಾರೋಟನ್ನು ಎಳೆದುಕೊಂಡು ರೈಲ್ವೆ ಸ್ಟೇಷನ್ ರವರೆಗೆ ಹೋಗಿ ತಲುಪುವಂತೆ ಮಾಡಿದರು. ಇದು ವಿದ್ಯಾರ್ಥಿಗಳಿಗೆ ಅವರ ಮೇಲೆ ಇದ್ದ ಪ್ರೀತಿ, ವಿಶ್ವಾಸವನ್ನು ಗೌರವವನ್ನೂ ಸೂಚಿಸುತ್ತದೆ ‘ಎಂದರು.
ವಿಶ್ರಾಂತ ಪ್ರಾಂಶುಪಾಲ ಎಸ್. ಜಿ. ಪ್ರಭುರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು ಮತ್ತು ಅವರಿಗೆ ಸ್ಮರಣಿಕೆಯನ್ನು ನೀಡಲಾಯಿತು.
ದೀಕ್ಷಾ ಸ್ವಾಗತಿಸಿದರೆ ಅಕ್ಷತಾ ಧನ್ಯವಾದ ಸಮರ್ಪಣೆಗೈದರು.ಶೈಫಾ ಮತ್ತು ಅನಿಶ್ ಕಾರ್ಯಕ್ರಮ ನಿರ್ವಹಿಸಿದರು. ಎಲ್ಲಾ ಉಪನ್ಯಾಸಕರು, ಶಿಕ್ಷಕರು, ಕಚೇರಿ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.













