ಕಾರ್ಕಳ : ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನ ಎನ್.ಎಸ್.ಎಸ್. ಘಟಕದ ಉದ್ಘಾಟನಾ ಸಮಾರಂಭ

0

 

ಕಾರ್ಕಳ ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಉದ್ಘಾಟನಾ ಸಮಾರಂಭವು ಸೆ. 17 ರಂದು ನಡೆಯಿತು.

ಕಾರ್ಯಕ್ರಮವನ್ನು ಡಾ| ಕಾರ್ತಿಕ್ ರಾವ್ ಎನ್. ವೈದ್ಯರು ಕಾರ್ಕಳ ಉದ್ಘಾಟಿಸಿ, ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಯಲ್ಲಿ ಪಾತ್ರ ವಹಿಸಬೇಕು. ಧರ್ಮ, ಸಂಸ್ಕೃತಿ, ಅನುಸರಿಸಿ ಭಾರತ ವಿಶ್ವಗುರುವಾಗಿ ಇರಲು ಸಹಕರಿಸಬೇಕು ಎಂದು ಸಂದೇಶ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಗೀತಾ. ಜಿ ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶ್ವೇತಾ ಇವರು ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ನಾಯಕಿಯರಾದ ಪೂಜಾ, ಅನನ್ಯ , ಪ್ರತಿಜ್ಞಾ , ಅಂಕಿತ ಉಪಸ್ಥಿತರಿದ್ದರು. ಅನನ್ಯ ಅಂತಿಮ ಬಿ.ಕಾಂ ವಂದಿಸಿದರು. ಅಂತಿಮ ಬಿ.ಎ ಯ ಶ್ರೀನಿಧಿ ಕಾರ್ಯಕ್ರಮ ನಿರೂಪಿಸಿದರು.

   

LEAVE A REPLY

Please enter your comment!
Please enter your name here