
ಜೇಸಿಐ ಕಾರ್ಕಳ ರೂರಲ್ ಹಾಗೂ ಎಸ್.ಡಿ.ಎಂ.ಸಿ. ಯ ಸಹಯೋಗದೊಂದಿಗೆ ಸುಂದರ ಪುರಾಣಿಕ ಸಂಯುಕ್ತ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ನ್ಯಾಯಾಲಯದ ವಿವಿಧ ಅಂಗಗಳು ಹಾಗೂ ಕಾರ್ಯ ವೈಖರಿ ಪರಿಚಯಿಸುವ ಕಾರ್ಯಕ್ರಮವು ಕಾರ್ಕಳದ ನ್ಯಾಯಾಲಯದ ಸಂಕೀರ್ಣ ದಲ್ಲಿ ಯಶಸ್ವಿಯಾಗಿ ನಡೆಯಿತು.
10ನೇ ತರಗತಿಯ ಸುಮಾರು 100 ವಿದ್ಯಾರ್ಥಿಗಳಿಗೆ ಹಿರಿಯ ವಕೀಲರಾದ ಸನತ್ ಕುಮಾರ್ ಜೈನ್ ರವರು ಕಾನೂನಿನ ಬಗ್ಗೆ ಅರಿವು ಮೂಡಿಸಿದರು.
ಈ ಕಾರ್ಯಕ್ರಮದಲ್ಲಿ ಜೆಸಿಐ ಕಾರ್ಕಳ ರೂರಲ್ ನ ಅಧ್ಯಕ್ಷರಾದ ಜೆಸಿ ಅರುಣ್ ಪೂಜಾರಿ ಮಾಂಜ, ಎಸ್ ಡಿ ಎಂ ಸಿ ಯ ಉಪಾಧ್ಯಕ್ಷರು ಹಾಗೂ ಪೂರ್ವಧ್ಯಕ್ಷರಾದ ಜೆಸಿ ವೀಣಾ ರಾಜೇಶ್, ಹಿರಿಯ ವಕೀಲರಾದ ಸನತ್ ಕುಮಾರ್ ಜೈನ್, ಎಸ್ ಡಿ ಎಂ ಸಿ ಅಧ್ಯಕ್ಷರಾದ ಆನoದ್ರಾಯ ನಾಯಕ್ ,ಮುಖ್ಯೋಪಾಧ್ಯಾಯರಾದ ದಿವಾಕರ್ ಪಟ್ಲ, ಶಿಕ್ಷಕರಾದ ಪ್ರತಿಮಾ ನಾಯಕ್, ಸುಪ್ರಿಯಾ, ಜೆಜೆಸಿ ರಿಯಾ ಹಾಗೂ ಜೆಸಿಐ ಸದಸ್ಯರು ಉಪಸ್ಥಿತರಿದ್ದರು.













