Tuesday, February 3, 2026
Google search engine
Homeಕಾರ್ಕಳಉಡುಪಿ: 'ಗಿರಿಜಾ ಸರ್ಜಿಕಲ್ಸ್' ನೂತನ ಶೋ ರೂಂ ಉದ್ಘಾಟನೆ

ಉಡುಪಿ: ‘ಗಿರಿಜಾ ಸರ್ಜಿಕಲ್ಸ್’ ನೂತನ ಶೋ ರೂಂ ಉದ್ಘಾಟನೆ

 

ಉಡುಪಿಯ ಜೋಡುಕಟ್ಟೆ ಬಳಿಯ ಆಶ್ರಯ ಟವರ್ಸ್‌ ನೆಲ ಮಹಡಿಯಲ್ಲಿ ಸ್ಥಳಾಂತರಗೊಂಡ ನೂತನ ‘ಗಿರಿಜಾ ಸರ್ಜಿಕಲ್ಸ್’ ಶೋ ರೂಂ ರವಿವಾರ ಉದ್ಘಾಟನೆಗೊಂಡಿತು.

ಮಾಜಿ ಉಪಕುಲಪತಿ ಡಾ.ಎಚ್.ಎಸ್.ಬಲ್ಲಾಳ್, ಶಾಸಕರಾದ ಯತ್ನಾಲ್ ಸುವರ್ಣ ಮತ್ತು ಗುರ್ಮೆ ಸುರೇಶ್ ಶೆಟ್ಟಿ ಅವರು ರಿಬ್ಬನ್ ಕತ್ತರಿಸಿ, ದೀಪ ಬೆಳಗಿಸುವ ಮೂಲಕ ಶೋ ರೂಂ ಅನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಎಚ್.ಎಸ್. ಬಲ್ಲಾಳ್, ಗಿರಿಜಾ ಸರ್ಜಿಕಲ್ಸ್ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ ಮಾಲೀಕ ರವೀಂದ್ರ ಶೆಟ್ಟಿ ಅವರನ್ನು ಶ್ಲಾಘಿಸಿದರು. ಈ ಶೋರೂಂನಲ್ಲಿ ಉತ್ತಮ ದರ್ಜೆಯ ಹೆಲ್ತ್ ಕೇರ್ ಉತ್ಪನ್ನಗಳನ್ನು ಒಂದೇ ಸೂರಿನಡಿ ಸಿಗುತ್ತದೆ. ಇದು ವಿಶೇಷವಾಗಿ ವೃದ್ಧರಿಗೆ ಪ್ರಯೋಜನಕಾರಿಯಾಗಿದೆ ಎಂದರು. COVID-19 ಸಾಂಕ್ರಾಮಿಕ ಸಮಯದಲ್ಲಿ ಸಾಮಾಜಿಕ ಬದ್ರತೆಯ ಕೆಲಸ ಸಂಸ್ಥೆಯು ಮತ್ತಷ್ಟು ಗ್ರಾಹಕ ಸ್ನೇಹಿ ಆಗುವಂತೆ ಮಾಡಿದೆ ಎಂದು ಹೇಳಿದರು.

ಕಂಪನಿಯು ಹಿರಿಯ ನಾಗರಿಕರಿಗೆ ಮತ್ತು ಸಾಮಾನ್ಯ ಜನರಿಗೆ ಅಗತ್ಯವಿರುವ ಎಲ್ಲಾ ಉತ್ಪನ್ನಗಳನ್ನು ಹಲವು ವರ್ಷಗಳಿಂದ ಜನಸಾಮಾನ್ಯರಿಗೆ ನೀಡುತ್ತಿದೆ. “ವಿಶೇಷವಾಗಿ ಮಧುಮೇಹ ರೋಗಿಗಳಿಗೆ ಅಗತ್ಯವಿರುವ ಉತ್ಪನ್ನಗಳಾದ ನೀರಿನ ಹಾಸಿಗೆ, ಮಧುಮೇಹ ಪಾದರಕ್ಷೆಗಳು ಇಲ್ಲಿ ಲಭ್ಯವಿದೆ. ಕೆಲವು ಶಸ್ತ್ರಚಿಕಿತ್ಸಾ ವಸ್ತುಗಳು ದುಬಾರಿಯಾಗಿರುತ್ತವೆ. ಆದ್ದರಿಂದ ಕಂಪನಿಯು ಬಾಡಿಗೆ ಆಧಾರದ ಬಳಕೆಯನ್ನು ಪರಿಚಯಿಸಿದೆ. ಇದು ತುಂಬಾ ಆದರ್ಶ ಪರಿಕಲ್ಪನೆಯಾಗಿದೆ” ಎಂದು ಅವರು ಹೇಳಿದರು.

ಜಿ ಶಂಕ‌ರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ.ಜಿ ಶಂಕರ್ ಮಾತನಾಡಿ ‘ರವೀಂದ್ರ ಶೆಟ್ಟಿ ಎರಡು ಜಿಲ್ಲೆಗಳಲ್ಲಿ ಐದು ಶಾಖೆಗಳನ್ನು ತೆರೆದಿದ್ದಾರೆ. ಇದು ಶ್ಲಾಘನೀಯ ಸಾಧನೆಯಾಗಿದೆ. ಗಿರಿಜಾ ಹೆಲ್ತ್ಕರ್ ಮತ್ತು ಸರ್ಜಿಕಲ್ಸ್ ಅತ್ಯಂತ ಸ್ಪರ್ಧಾತ್ಮಕ ದರಗಳಲ್ಲಿ ಸೇವೆಗಳನ್ನು ಒದಗಿಸುತ್ತಿದೆ. ಮಾಲೀಕ ರವೀಂದ್ರ ಶೆಟ್ಟಿ ತಮ್ಮ ಗ್ರಾಹಕ ಸ್ನೇಹಿ ವಿಧಾನದಿಂದ ಗ್ರಾಹಕರನ್ನು ಆಕರ್ಷಿಸುತ್ತಾರೆ. ವ್ಯವಹಾರದಲ್ಲಿ ಅವರಿಗೆ ಹೆಚ್ಚಿನ ಯಶಸ್ಸು ಸಿಗಲಿ ಎಂದು ಹಾರೈಸಿದರು.

ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಉಜ್ವಲ್ ಡೆವಲಪರ್ಸ್ ಪ್ರವರ್ತಕ ಪುರುಷೋತ್ತಮ ಶೆಟ್ಟಿ, ಕಿದಿಯೂರು ಹೋಟೆಲ್ ಮಾಲೀಕ ಭುವನೇಂದ್ರ ಕಿದಿಯೂರು, ಸಮಾಜ ಸೇವಕಿ ಐ.ನಿರುಪಮಾ ಪ್ರಸಾದ್ ಮತ್ತು ಇತರರು ಹಾಜರಿದ್ದು ಶುಭ ಹಾರೈಸಿದರು.

ಕರಾವಳಿ ಕರ್ನಾಟಕದ ಅತಿದೊಡ್ಡ ವೈದ್ಯಕೀಯ ಸಲಕರಣೆಗಳ ಮಳಿಗೆ ಗಿರಿಜಾ ಸರ್ಜಿಕಲ್ಸ್ ಗ್ರಾಹಕರು ಖರೀದಿಸುವ ಮೊದಲು ವೈಯಕ್ತಿಕವಾಗಿ ವೈದ್ಯಕೀಯ ಉತ್ಪನ್ನಗಳ ಗುಣಮಟ್ಟವನ್ನು ಪರಿಶೀಲಿಸಬಹುದಾದ ಮತ್ತು ಖಚಿತಪಡಿಸಿಕೊಳ್ಳಬಹುದಾದ ವಿಶಿಷ್ಟ ಅನುಭವವನ್ನು ನೀಡಲು ಬದ್ಧವಾಗಿದೆ.
ಹೊಸ ಶೋರೂಮ್‌ನಲ್ಲಿ ಕುಟುಂಬ ಆರೋಗ್ಯ ಸಾಧನಗಳು, ನೆಬ್ಯುಲೈಸರ್ಗಳು ಪಲ್ಸ್ ಆಕ್ಸಿಮೀಟರ್ಗಗಳು, ಶಿಶು ಆರೈಕೆ ಮತ್ತು ಚರ್ಮದ ಆರೈಕೆ ಉತ್ಪನ್ನಗಳು, COVID ಮತ್ತು ಸುರಕ್ಷತಾ ಅಗತ್ಯ ವಸ್ತುಗಳು, ಜೆನೆರಿಕ್ ಔಷಧಿಗಳು ಮತ್ತು ಶಸ್ತ್ರಚಿಕಿತ್ಸಾ ಉಪಕರಣಗಳು ಸೇರಿದಂತೆ ವಿವಿಧ ರೀತಿಯ ಪ್ರಮಾಣೀಕೃತ ಮತ್ತು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಒಂದೇ ಸೂರಿನಡಿ ನೀಡುತ್ತದೆ.

ಮಾಲೀಕ ರವೀಂದ್ರ ಶೆಟ್ಟಿ ಎಲ್ಲಾ ಗಣ್ಯರು ಮತ್ತು ಹಿತೈಷಿಗಳಿಗೆ ಅವರ ಬೆಂಬಲಕ್ಕಾಗಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ರಾಘವೇಂದ್ರ ಪ್ರಭು ನಿರೂಪಿಸಿದರು. ರವೀಂದ್ರ ಶೆಟ್ಟಿ, ಸುರೇಖಾ ಶೆಟ್ಟಿ, ಹರೀಶ್ ಕುಮಾರ್, ಪಾಲುದಾರರು, ಸ್ನೇಹಿತರು, ಕುಟುಂಬ ಮತ್ತು ಹಿತೈಷಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments