
ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿ ಸಹಿತ 7 ಮಂದಿಗೆ ಹತ್ತಕ್ಕೂ ಹೆಚ್ಚು ಬೀದಿ ನಾಯಿಗಳು ದಾಳಿ ಮಾಡಿದ ಘಟನೆ ಹಾಸನದ ಬೇಲೂರಿನಲ್ಲಿ ನಡೆದಿದೆ.
ದಾಳಿ ನಡೆಸಿದ ನಾಯಿಗಳ ಪೈಕಿ 2 ನಾಯಿಗಳನ್ನು ಸ್ಥಳೀಯರೇ ಹೊಡೆದು ಕೊಂದಿದ್ದಾರೆ. ಬೇಲೂರಿನ ಜೈ ಭೀಮ್ ನಗರದ ನವೀನ್ ಅವರ ಮನೆಯಲ್ಲಿ ಗಣತಿಗೆ ಹೋಗಿದ್ದಾಗ ಬೀದಿಯಲ್ಲಿದ್ದ 10ಕ್ಕೂ ಹೆಚ್ಚು ಬೀದಿನಾಯಿಗಳು ಶಿಕ್ಷಕಿ, ಅವರ ಪತಿ ಮೇಲೆ ದಾಳಿ ಮಾಡಿವೆ. ರಕ್ಷಣೆಗೆ ಮುಂದಾದವರ ಮೇಲೆಯೂ ದಾಳಿ ಮಾಡಿವೆ. ರಕ್ಷಣೆಗೆ ಮುಂದಾದವರ ಮೇಲೂ ದಾಳಿ ಮಾಡಿವೆ. ಅಲ್ಲಿಯೇ ಇದ್ದ 5 ವರ್ಷದ ಕಿಶನ್ ಎಂಬಾ ಬಾಲಕನ ಮೇಲೂ ದಾಳಿ ಮಾಡಿದ್ದೂ, ಗಾಯಾಳುಗಳು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ತೀವ್ರವಾಗಿ ಗಾಯಗೊಂಡಿರುವ ಶಿಕ್ಷಕಿ ಚಿಕ್ಕಮ್ಮ ಅವರನ್ನು ಬೇಲೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಶಾಸಕರು ಬಂದು ಗಾಯಾಳುಗಳನ್ನು ವಿಚಾರಿಸಿ ಸಾಂತ್ವನ ತಿಳಿಸಿದರು.












