ಅಹಿಂಸೆಯಿಂದ ಸಾರ್ಥಕ ಬದುಕು ಸಾಧ್ಯ: ಬಾಲಕೃಷ್ಣ ರಾವ್

0

 

ಅಹಿಂಸೆ ಮತ್ತು ಸತ್ಯಪಾಲನೆಯಿ೦ದ ಬದುಕಿನ ಸಾರ್ಥಕತೆ ಸಾಧ್ಯ ಎ೦ದು ಪ್ರಿನ್ಸಿಪಾಲ್ ಕೆ.ಬಾಲಕೃಷ್ಣ ರಾವ್ ಅಭಿಪ್ರಾಯ ಪಟ್ಟರು. ಅವರು ಕೆ.ಎಮ್.ಇ.ಎಸ್. ವಿದ್ಯಾ ಸಂಸ್ಥೆಯಲ್ಲಿ ಗಾಂಧಿ ಜಯಂತಿ ಆತರಣೆಯ ಸಂದರ್ಭದಲ್ಲಿ ಮಹಾತ್ಮ ಗಾ೦ಧೀಜಿಯವರ ಭಾವಚಿತ್ರಕ್ಕೆ ಪುಷ್ಪಾಂಜಲಿಯನ್ನು ಅರ್ಪಿಸುತ್ತಾ ಮಾತನಾಡಿದರು. ಗಾಂಧಿಜಿಯರ ತತ್ವಗಳು ಸರ್ವಕಾಲೀಕ. ಗಾ೦ಧೀಜಿಯವರ ಆದರ್ಶ ವಿಶ್ವವಿಖ್ಯಾತಿಯನ್ನು ಪಡೆದಿದ್ದು, ಪ್ರಪ೦ಚದಾದ್ಯ೦ತ ಅವರ ಅನುಯಾಯಿಗಳಿದ್ದಾರೆ. ಕಾನೂನು ಪದವಿ ಪಡೆದು ಭಾರತೀಯ ಪ್ರಜೆಗಳಲ್ಲಿ ಸ್ವಾತಂತ್ಯದ ಕಿಡಿಯನ್ನು ಹೊತ್ತಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದರು.

ಅಸ್ಪಶ್ರತೆಯನ್ನು ನಿವಾರಿಸುವ ಪಣ ತೊಟ್ಟು ಎಲ್ಲಾ ಜಾತಿ ಧರ್ಮದವರನ್ನು ಸಮಾನವಾಗಿ ಕಂಡರು.” ಎಂದು ತಮ್ಮ ಭಾಷಣದಲ್ಲಿ ನುಡಿದರು.

ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಲೊಲಿಟ ಡಿ’ಸಿಲ್ವ ಸ್ವಾಗತಿಸಿದರು. ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕಿ ನಿವೇದಿತ ಧನ್ಯವಾದ ಸಮರ್ಪಿಸಿದರು. ಸಂಸ್ಥೆಯ ಉಪನ್ಯಾಸಕರು, ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಂಸ್ಥೆಯ ಆವರಣವನ್ನು ಸ್ವಚ್ಛಗೊಳಿಸಿ ಶ್ರಮದಾನ ಮಾಡಿದರು.

   

LEAVE A REPLY

Please enter your comment!
Please enter your name here