
ಜೆಸಿಐ ಬೆಳ್ಮಣ್ ಘಟಕಕ್ಕೆ ಅತ್ಯುತ್ತಮ ಘಟಕ ವಿನ್ನರ್ ಪ್ರಶಸ್ತಿ.
ಜೆಸಿಐ ಬೆಳ್ಮಣ್ ಘಟಕಕ್ಕೆ ಈ ವಾರಾಂತ್ಯದಲ್ಲಿ ಮಂಗಳೂರಿನಲ್ಲಿ ನಡೆದ ವಲಯ ಸಮ್ಮೇಳನದಲ್ಲಿ ವಲಯ 15ರ ವ್ಯಾಪ್ತಿಯ ಅತ್ಯುತ್ತಮ ಘಟಕ ವಿನ್ನರ್ ಪ್ರಶಸ್ತಿಯು ದೊರೆತಿದೆ. ಈ ವಲಯ 15ರ ವ್ಯಾಪ್ತಿಯಲ್ಲಿ 70ಕ್ಕಿಂತ ಅಧಿಕ ಕ್ರಿಯಾಶೀಲ ಘಟಕಗಳು ಇದ್ದು ಜೆಸಿ ಪ್ರದೀಪ್ ಶೆಟ್ಟಿ ನೇತೃತ್ವದ ಜೇಸಿಐ ಬೆಳ್ಮಣ್ ಸಂಸ್ಥೆಯು 2025ರ ವರ್ಷದಲ್ಲಿ ಮಾಡಿದ ಅತ್ಯುತ್ತಮ ಕಾರ್ಯಕ್ರಮಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಅದರ ಜೊತೆಗೆ ಅತ್ಯುತ್ತಮ ವ್ಯಕ್ತಿತ್ವ ವಿಕಸನ ವಿನ್ನರ್, ವೀರೇಂದ್ರ ಆರ್ ಕೆ ಅವರಿಗೆ ಅತ್ಯುತ್ತಮ ಕಾರ್ಯದರ್ಶಿ ರನ್ನರ್ ಪ್ರಶಸ್ತಿ, ನಾಗೇಶ್ ಆಚಾರ್ಯ ಅವರಿಗೆ ಅತ್ಯುತ್ತಮ ನವ ಜೇಸಿಐ ಸದಸ್ಯ ವಿನ್ನರ್, ಸೌಜನ್ಯ ಸತೀಶ್ ಕೋಟ್ಯಾನ್ ಅವರಿಗೆ ಅತ್ಯುತ್ತಮ ಮಹಿಳಾ ಜೆಸಿಐ ಸದಸ್ಯೆ ರನ್ನರ್ ಪ್ರಶಸ್ತಿಗಳು ದೊರೆತಿವೆ.
ಮಂಗಳೂರಿನಲ್ಲಿ ನಡೆದ ಕಹಳೆ ಹೆಸರಿನ ವಲಯದ ಸಮ್ಮೇಳನದಲ್ಲಿ ಈ ಪ್ರಶಸ್ತಿಗಳನ್ನು ವಲಯಾಧ್ಯಕ್ಷ ಅಭಿಲಾಷ್ ಬಿ ಏ ಅವರು ಹಸ್ತಾಂತರ ಮಾಡಿ ಅಭಿನಂದಿಸಿದರು. ವಲಯ ಉಪಾಧ್ಯಕ್ಷ ಪ್ರಶಾಂತ್ ಕುಮಾರ್, ವಲಯದ ಮೊದಲ ಮಹಿಳೆ ಶೀಲಾ ಮತ್ತು ಜೆಸಿಐ ಬೆಳ್ಮಣ್ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಟಿತರಿದ್ದರು.












