
ಬಾರ್ ನಲ್ಲಿ ಗಣೇಶ್ ಪೂಜಾರಿ ಎಂಬಾತನು ಮದ್ಯ ಸೇವಿಸಿ ಬಳಿಕ ಪಕ್ಕದಲ್ಲಿ ಕುಳಿತ ಗ್ರಾಹಕರಿಗೆ ಅನಗತ್ಯ ತೊಂದರೆ ಕೊಡುತ್ತಿದ್ದನ್ನು ಪ್ರಶ್ನಿಸಿ, ತಡೆದಿದ್ದಕ್ಕೆ ಅವಾಚ್ಯವಾಗಿ ನಿಂದಿಸಿದ ಘಟನೆ ಬೈಲೂರಿನಲ್ಲಿ ನಡೆದಿದೆ.
ಆರೋಪಿಯು ಬಾರ್ ನಿಂದ ಹೊರಬಂದು ತನ್ನ ಕಾರನ್ನು ವೇಗವಾಗಿ ಚಲಾಯಿಸಿ ಬಾರ್ ನ ಜಗಲಿ ಮೇಲೆ ಸಿಲುಕಿದ್ದ, ಬಳಿಕ ಮಾಲಕರನ್ನು ಬೆದರಿಸಿ ತೆರಳಿದ್ದಾನೆ.
ಈ ಬಗ್ಗೆ ಬಾರ್ ಮಾಲಕ ಚಂದ್ರಶೇಖರ ಮಾಡ ನೀಡಿದ ದೂರಿನ ಅನ್ವಯ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಹೀರಾತು




