ಹೆಬ್ರಿ : ಹೆಬ್ರಿಯ ತಾಲ್ಲೂಕು ಕಚೇರಿಯ ಸಮೀಪದಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ಸಕಲ ವ್ಯವಸ್ಥೆಯ ಸುಸಜ್ಜಿತ ಆಸ್ಪತ್ರೆಯ ಭೂಮಿಪೂಜೆಯು ಭಾನುವಾರ ನೆರವೇರಿತು.
ವೇದಮೂರ್ತಿ ಎಣ್ಣೆಹೊಳೆ ಅರುಣ್ ಭಟ್ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಡಾ.ಉತ್ಸವ್ ಶೆಟ್ಟಿ, ಡಾ.ಶಹರಿ ಹೆಗ್ಡೆ, ಚಂದ್ರಶೇಖರ ಶೆಟ್ಟಿ, ಶರಾವತಿ ಶೆಟ್ಟಿ, ಉಮನ್ ದೇಶದ ಉದ್ಯಮಿ ರಜಿತ್ ಕುಮಾರ್ ಶೆಟ್ಟಿ, ಆಸ್ಪತ್ರೆಯ ಗುತ್ತಿಗೆದಾರ ಚಾರ ಹರೀಶ ಶೆಟ್ಟಿ, ಸ್ಥಳೀಯ ಗಣ್ಯರು, ಮುಖಂಡರು ಉಪಸ್ಥಿತರಿದ್ದರು.