ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಪದಾಧಿಕಾರಿಗಳ ನೇಮಕಾತಿ ಆದೇಶ ಪತ್ರ ಹಸ್ತಾಂತರ

0

 

ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಪದಾಧಿಕಾರಿಗಳ ನೇಮಕಾತಿ ಆದೇಶ ಪತ್ರವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆಯವರು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ಅಲೆವೂರು ಹರೀಶ್ ಕಿಣಿಯವರಿಗೆ ಹಸ್ತಾಂತರಿಸಿದರು.

ಬೆಂಗಳೂರಿನ ಕ್ರೀನ್ಸ್ ರಸ್ತೆಯಲ್ಲಿರುವ ಕೆ.ಪಿ.ಸಿ.ಸಿ ಕಛೇರಿಯಲ್ಲಿ ನಡೆದ ವಿವಿಧ ಜಿಲ್ಲಾದ್ಯಕ್ಷರುಗಳ ಮತ್ತು ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ರಾಜ್ಯ ಸಹ ಅಧ್ಯಕ್ಷರಾದ ಮಾಜಿ ರಾಜ್ಯ ಸಭಾ ಸದಸ್ಯ ಹನುಮಂತಯ್ಯ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಉಸ್ತುವಾರಿ,ರಾಜ್ಯ ಉಪಾಧ್ಯಕ್ಷ ಕಿಮ್ಮನೆ ರತ್ನಾಕರ್, ಇನ್ನೊರ್ವ ರಾಜ್ಯ ಉಪಾಧ್ಯಕ್ಷ (ಆಡಳಿತ)ಮುನೀರ್ ಜನ್ಸಾಲೆ ಮೊದಲಾದವರು ಉಪಸ್ಥಿತರಿದ್ದರು.

ನೂತನ ಪದಾಧಿಕಾರಿಗಳಲ್ಲಿ ಅಲೆವೂರು ಹರೀಶ್ ಕಿಣಿ ಅಧ್ಯಕ್ಷರು, ದಿನಕರ್ ಶೆಟ್ಟಿ ಸುಧಾಕರ್ ಪೂಜಾರಿ ಉಪಾಧ್ಯಕ್ಷರು, ಶ್ರೀಧರ್ ಪಿ.ಎಸ್, ಐಡಾ ಗಿಲ್ಬರ್ಟ್ ಡಿ ಸೋಜ, ಗಣೇಶ್ ರಾಜ್,ಅನಿಲ್ ಎಸ್. ಪೂಜಾರಿ ಜಿಲ್ಲಾ ಸಂಯೋಜಕರು, ಅನಿಲ್ ಶೆಟ್ಟಿ ಸರಸ್ಕೃತಿ ವಿನಾಯ್, ಸುಮನ ಎಸ್., ಅಭಿಷೇಕ್ ಎನ್.ಮೂರ್ತಿ ಜಂಟಿ ಸಂಯೋಜಕರಾಗಿ ಆಯ್ಕೆ ಗೊಂಡರೆ ದಯಾನಂದ ಡಿ. ಜಿಲ್ಲಾ ಖಜಾಂಚಿ, ಸದಸ್ಯರಾಗಿ ಗಣೇಶ್, ಬಿ. ಶ್ರೀಧರ್ ಶೇಟ್, ಯೋಗೀಶ್ ಆಚಾರ್ಯ,ಗೋವರ್ಧನ್ ಜೋಗಿ, ಇಕ್ಯಾಲ್ ಮನ್ನ ಸುಪ್ರೀತ್ ಶೆಟ್ಟಿ, ಜಯ ಶೇರಿಗಾರ್, ಪ್ರಭಾಕರ್ ಆಚಾರ್ಯ, ಆದರ್ಶ್ ಯು, ಚಂದ್ರಿಕಾ ಶೆಟ್ಟಿ,ಎಮ್ ಪ್ರೇಮಾನಂದ ಮಿನೇಜಸ್ ಆಗಿ ನೇಮಕಗೊಡರು.

   

LEAVE A REPLY

Please enter your comment!
Please enter your name here