Sunday, April 5, 2026
Google search engine
Homeಕಾರ್ಕಳಶಾಲಾ ವಾರ್ಷಿಕೋತ್ಸವದಲ್ಲಿ ಲವಲವಿಕೆಯಿಂದ ಭಾಗವಹಿಸಿದ್ದ 6 ಮಕ್ಕಳು, ತಡರಾತ್ರಿ ಹೊತ್ತಿಗೆ ಶವವಾಗಿ ಪತ್ತೆ 

ಶಾಲಾ ವಾರ್ಷಿಕೋತ್ಸವದಲ್ಲಿ ಲವಲವಿಕೆಯಿಂದ ಭಾಗವಹಿಸಿದ್ದ 6 ಮಕ್ಕಳು, ತಡರಾತ್ರಿ ಹೊತ್ತಿಗೆ ಶವವಾಗಿ ಪತ್ತೆ 

 ಮಹಾರಾಷ್ಟ್ರದಲ್ಲೊಂದು ಹೃದಯ ವಿದ್ರಾವಕ ಘಟನೆ

ಶಾಲಾ ವಾರ್ಷಿಕೋತ್ಸವದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿದ್ದ ಆರು ಮಂದಿ ಮಕ್ಕಳು, ತಡ ರಾತ್ರಿ ಹೊತ್ತಿಗೆ ಶವವಾದ ಹೃದಯ ವಿದ್ರಾವಕ ಘಟನೆಯೊಂದು ಮಹಾರಾಷ್ಟ್ರದ ದಿಂಡೋರಿಯಲ್ಲಿ ಶುಕ್ರವಾರ (ಏ.3) ನಡೆದಿದೆ.

ನಾಸಿಕ್‌ ನಗರದಿಂದ 20 ಕಿಲೋ ಮೀಟರ್ ದೂರದಲ್ಲಿರುವ ದಿಂಡೋರಿ ಪಟ್ಟಣದ ಶಿವಾಜಿನಗರ ಪ್ರದೇಶದಲ್ಲಿ ಮಕ್ಕಳು ಮತ್ತು ಅವರ ಪೋಷಕರು ಸಂಚರಿಸುತ್ತಿದ್ದ ವಾಹನ ತಡರಾತ್ರಿ ಬಾವಿಗೆ ಬಿದ್ದು ದುರ್ಘಟನೆ ಸಂಭವಿಸಿದೆ. ದುರಂತದಲ್ಲಿ ಮಕ್ಕಳು ಪೋಷಕರು ಸೇರಿ ಒಟ್ಟು 9 ಮಂದಿ ಸಾವಿಗೀಡಾಗಿದ್ದಾರೆ.

ಮೂರು ಆಂಬ್ಯುಲೆನ್ಸ್‌ಗಳಲ್ಲಿ ಮೃತರ ಶವಗಳನ್ನು ಅವರ ಸ್ವಗ್ರಾಮ ದಿಂಡೋರಿ ತಾಲೂಕಿನ ಇಂದೋರ್‌ಗೆ ಕೊಂಡೊಯ್ದು ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಮೃತರೆಲ್ಲರೂ, ಗ್ರಾಮದ ದುರ್ಗಾಡೆ ಎಂಬ ಕೃಷಿಕ ಕುಟುಂಬದವರು ಎಂದು ತಿಳಿದು ಬಂದಿದೆ.

ಒಟ್ಟು ನಾಲ್ಕು ಕುಟುಂಬಗಳ ಜನರು ಸಾವಿಗೀಡಾಗಿದ್ದಾರೆ. ಈ ಪೈಕಿ ಎರಡು ಕುಟುಂಬಗಳ ಯಜಮಾನರು ಅಣ್ಣ-ತಮ್ಮಂದಿರು. ಇನ್ನುಳಿದ ಎರಡು ಕುಟುಂಬಗಳ ಯಜಮಾನರು ಕೂಡ ಅಣ್ಣ-ತಮ್ಮಂದಿರು. ಅಲ್ಲದೆ, ಈ ಎರಡೂ ಗುಂಪುಗಳ ನಡುವೆಯೂ ಪರಸ್ಪರ ಸಂಬಂಧವಿತ್ತು.

ಪೋಷಕರು ಶಾಲಾ ವಾರ್ಷಿಕೋತ್ಸವದಲ್ಲಿ ಮಕ್ಕಳ ಕಾರ್ಯಕ್ರಮ ನೋಡಲು ಹೋಗಿದ್ದರು. ಕಾರ್ಯಕ್ರಮ ಮುಗಿಸಿ ಮನೆಗೆ ಮರಳುವಾಗ, ಅವರು ಸಂಚರಿಸುತ್ತಿದ್ದ ವಾಹನ ಬಾವಿಗೆ ಬಿದ್ದಿದೆ. ಅವಘಡದಲ್ಲಿ ಬದುಕುಳಿದ ಮಕ್ಕಳು ಆಘಾತಕ್ಕೊಳಗಾಗಿವೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್ ವರದಿ ಹೇಳಿದೆ.

ಹಸಿರು ಗದ್ದೆಗಳಿಂದ ಆವೃತವಾಗಿರುವ ಇಂದೋರ್ ಗ್ರಾಮದ ದುರ್ಗಾಡೆ ಕುಟುಂಬದ ಹೆಚ್ಚಿನ ಸದಸ್ಯರು ಕೃಷಿಕರು. ತಮ್ಮ ಮಕ್ಕಳೆಲ್ಲರಿಗೂ ಇಂಗ್ಲಿಷ್ ಶಿಕ್ಷಣ ಸಿಗುವಂತೆ ಅವರು ನೋಡಿಕೊಂಡಿದ್ದರು. ಮಕ್ಕಳು ಓದಿನಲ್ಲಿ ಉತ್ತಮವಾಗಿ ಪ್ರಗತಿ ಸಾಧಿಸುತ್ತಿದ್ದ ಬಗ್ಗೆ ಅವರಿಗೆ ಹೆಮ್ಮೆಯಿತ್ತು ಎಂದು ವರದಿ ಬಣ್ಣಿಸಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments