ಮಧ್ಯಪ್ರಾಚ್ಯ ಯುದ್ಧದಿಂದ ದೇಶದಲ್ಲಿ ಗ್ಯಾಸ್ ಅಭಾವದಿಂದ ವಲಸೆ ಕಾರ್ಮಿಕರಿಗೆ ತೊಂದರೆ ಆಗಬಾರದೆಂಬ ಉದ್ದೇಶ ದಿಂದ ಕಾರ್ಕಳದಲ್ಲಿ ನೆಲೆಸಿರುವ ವಲಸೆ ಕಾರ್ಮಿಕರಿಗೆ 5 ಕೆಜಿ ಗ್ಯಾಸ್ ವಿತರಣೆ ಸ್ಥಳೀಯ ಮಾರುತಿ ಗ್ಯಾಸ್ ವತಿಯಿಂದ ನಡೆಯಿತು.
ಪ್ರಧಾನ ಮಂತ್ರಿಯವರ ಆಶಯ ದಂತೆ ಇಲ್ಲಿ ವಾಸಿಸುವ ವಲಸೆ ಕಾರ್ಮಿಕ ರಿಗೆ, ಜೀವನ ಕಷ್ಟದ ಸಮಯದಲ್ಲಿ ಅಡುಗೆಗೆ ಸಂಕಷ್ಟ ಪಡುತ್ತಿರುವ ಈ ಸಮಯದಲ್ಲಿ, ಅವರು ಪುನಃ ತಮ್ಮ ರಾಜ್ಯಗಳಿಗೆ ಹೋಗಬಾರದು ಎನ್ನುವ ಉದ್ದೇಶದಿಂದ ಸಂಕಷ್ಟ ಅರಿತು 5 ಕೆಜಿಯ ಗ್ಯಾಸನ್ನು 181 ಕಾರ್ಮಿಕರಿಗೆ ವಿತರಿಸಲಾಯಿತು. ಎಚ್ಪಿ ಗ್ಯಾಸ್ ವಿತರಕ ಎಸ್.ನಿತ್ಯಾನಂದ ಪೈ, ಪ್ರಕಾಶ್,ಡೆಲಿವರಿ ಬಾಯ್ ಸಂತೋಷ್ ಮತ್ತು ಸಂಜಯ್ ಭಾಗವಹಿಸಿದ್ದರು.


















