ಕಾರ್ಕಳದಲ್ಲಿ ನ. 9 ರಂದು ನೂತನವಾಗಿ ನಿತ್ಯಾಧಾರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಶುಭಾರಂಭಗೊಳ್ಳಲಿದೆ.
ಕಾರ್ಕಳದ ಕ್ರೈಸ್ಟ್ ಕಿಂಗ್ ಮೈದಾನದಲ್ಲಿ ಸಂಸ್ಥೆಯ ಉದ್ಘಾಟನಾ ಸಭಾರಂಭ ಕಾರ್ಯಕ್ರಮ ನಡೆಯಲಿದ್ದು, ಅತ್ತೂರು ಸಂತ ಲಾರೆನ್ಸ್ ಬೆಸಿಲಿಕಾದ ಸಹಾಯಕ ಧರ್ಮ ಗುರು ವಂದನೀಯ ರೋಬಿನ್ ಸಾಂತುಮಾಯೆರ್ ರವರ ದಿವ್ಯ ಹಸ್ತದ ಮೂಲಕ ಉದ್ಘಾಟನೆ ನಡೆಯಲಿದೆ.
ನಿತ್ಯಾಧಾರ ಕೋ ಆಪರೇಟಿವ್ ಸೊಸೈಟಿ ನಿ. ಇದರ ಅಧ್ಯಕ್ಷ ಜೋಕಿಂ ಮೈಕಲ್ ಎಚ್. ಪಿಂಟೋ ಅಧ್ಯಕ್ಷತೆಯಲ್ಲಿ ಈ ಸಮಾರಂಭ ಕಾಯಕ್ರಮ ನಡೆಯಲಿದ್ದು, ಕಾಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಉಡುಪಿ ಜಿಲ್ಲಾ ಸಹಾಕಾರ ಸಂಘಗಳ ಉಪ ನಿಬಂಧಕರಾದ ಲಾವಣ್ಯ ಕೆ.ಆರ್., ಜೋನ್ ಡಿ’ಸಿಲ್ವಾ ವೆಟೆರೆನ್ ಕೋ ಆಪರೇಟಿವ್ ಬ್ಯಾಂಕರ್ ಕಾರ್ಕಳ, ಕಾರ್ಕಳ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ.ಪಿ. ಶೆಣೈ, ಕಾರ್ಕಳ ಬಂಟ್ಸ್ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಹಾಗೂ ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ (ರಿ) ಮುನಿಯಾಲು ಇದರ ಅಧ್ಯಕ್ಷರಾದ ಉದಯಕುಮಾರ್ ಶೆಟ್ಟಿ ಮುನಿಯಾಲು, ಎಸ್. ಜೆ. ಟ್ರಾವೆಲ್ಸ್ ಮಾಲಕ ವಾಲ್ಟರ್ ಡಿ’ಸೋಜಾ, ಕಾರ್ಕಳ ಘಟಕ ಜಮಿಯತುಲ್ ಫಲಾಹ್ ಅಧ್ಯಕ್ಷ ಮಹಮ್ಮದ್ ಗೌಸ್ ಮೊದಲಾದವರು ಉಪಸ್ಥಿತರಿರಲಿದ್ದಾರೆ.
ಕ್ರೈಸ್ಟ್ ಕಿಂಗ್ ಚರ್ಚ್ ನ ಸಹಾಯಕ ಧರ್ಮಗುರುಗಳಾದ ವಂದನೀಯ ಅವಿನಾಶ್ ಪಾಯ್ಸ್ ಅವರಿಂದ ಆಶೀರ್ವಚನ ನಡೆಯಲಿದೆ.
ಸಾರ್ವಜನಿಕರು ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸೊಸೈಟಿಯ ಸೌಲಭ್ಯ ಪಡೆದುಕೊಳ್ಳಬೇಕಾಗಿ ಸಂಸ್ಥೆಯು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

















