ಯಕ್ಷಾಕ್ಷರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ.) ಬೋಳ ಅಶ್ವತ್ಥ ನಾರಾಯಣ ಭಜನಾ ಮಂಡಳಿ ಬರಬೈಲು, ಬೋಳ ಇವರ ವತಿಯಿಂದ ಸುಪ್ರಸಿದ್ದ ಕಲಾವಿದರಿಂದ ವೀರಮಣಿ ಕಾಳಗ (ಕವಿ : ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ) ಯಕ್ಷಗಾನ ತಾಳಮದ್ದಳೆ ಆ. ೦9 ರಂದು ಭಾನುವಾರ ಮಧ್ಯಾಹ್ನ 2.00 ಗಂಟೆಗೆ ಅಶ್ವತ್ಥ ನಾರಾಯಣ ಭಜನಾ ಮಂದಿರ, ಬರಬೈಲು, ಬೋಳ ಇಲ್ಲಿ ನಡೆಯಲಿದೆ.
ಭಾಗವತರಾಗಿ ದೇವಿ ಪ್ರಸಾದ್ ಆಳ್ವ ತಲಪಾಡಿ, ಮದ್ದಳೆಯಲ್ಲಿ ಯೋಗೀಶ್ ಆಚಾರ್ಯ ಉಳೆಪಾಡಿ, ಚೆಂಡೆಯಲ್ಲಿ ಅಶೋಕ ಆಚಾರ್ಯ ಉಳೆಪಾಡಿ, ಚಕ್ರತಾಳದಲ್ಲಿ ರವಿಚಂದ್ರ ವಂಜಾರಕಟ್ಟೆ ಹಾಗೂ ಅರ್ಥದಾರಿಗಳಾಗಿ ಜಬ್ಬಾರ್ ಸಮೋ ಸಂಪಾಜೆ, ಸದಾಶಿವ ಆಳ್ವ ತಲಪಾಡಿ ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ಸತೀಶ ಮಾಣಿ ಇರಲಿದ್ದಾರೆ.


















