ಕಾರ್ಕಳ:ಜೈ ತುಳುನಾಡು ಕಾರ್ಲ ವಲಯ ಸಾಮಾನ್ಯ ಸಭೆ

0

ಕಾರ್ಕಳ:ಜೈ ತುಳುನಾಡು ಕಾರ್ಲ ವಲಯ ಸಾಮಾನ್ಯ ಸಭೆ

ಜೈ ತುಲುನಾಡ್ (ರಿ.) ಕಾರ್ಲ ವಲಯದ 2024-25 ಸಾಲಿನ ಸಾಮಾನ್ಯ ಸಭೆಯು ಕಾರ್ಕಳದ ಶ್ರೀ ಅನಂತ ಶಯನ ಕ್ಷೇತ್ರದಲ್ಲಿ ಜೈ ತುಲುನಾಡ್ (ರಿ.) ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಬಂಟ್ವಾಳ ಇವರ ನೇತೃತ್ವದಲ್ಲಿ ನಡೆಯಿತು.

ಕಾರ್ಲದಲ್ಲಿ ಜೈ ತುಲುನಾಡ್ (ರಿ.) ಸಂಘಟನೆಯ ಘಟಕದ ರಚನೆ ಹಾಗೂ ಕಾರ್ಲ ತಾಲೂಕಿನಲ್ಲಿ ತುಲು ಭಾಷೆ ಮತ್ತು ಲಿಪಿಯ ಬೆಳವಣಿಗೆಯ ಬಗ್ಗೆ ಯೋಜನೆಗಳನ್ನು ರೂಪಿಸಲಾಯಿತು.

ಜೈ ತುಲುನಾಡ್ (ರಿ.) ಸಂಘಟನೆಯ ಸದಸ್ಯರಾದ ರವಿಚಂದ್ರ ಕಾರ್ಲ, ಅಶ್ವಿನಿ ಕಾರ್ಲ, ಮಹೇಶ್ ಮೊಯ್ಲಿ, ನಿತಿನ್ ನಲ್ಲೂರು, ವೈಶಾಖ್ ಕಾರ್ಕಳ, ಶರತ್‌ರಾಜ್ ಕಡಬ, ಪ್ರಶಾಂತ್, ನಿಶಾ ಶೆಟ್ಟಿ, ಸುದಿತ್ ಶಿವಪುರ, ಸ್ಥಾಪಕ ಸಮಿತಿಯ ಸದಾಶಿವ ಮುದ್ರಾಡಿ, ಸುಮಂತ್ ಹೆಬ್ರಿ ಉಪಸ್ಥಿತರಿದ್ದರು.

   

LEAVE A REPLY

Please enter your comment!
Please enter your name here