ಈದು ಪಡ್ಯಾರಮನೆ ಅಶೋಕ್ ಕುಮಾರ್ ಜೈನ್ ರವರಿಗೆ ಮಿಯ್ಯಾರು ಕಂಬಳದಲ್ಲಿ ಸನ್ಮಾನ
ಈದು:17 ವರ್ಷಗಳ ಕಾಲ ಈದು ಗ್ರಾಮ ಪಂಚಾಯತ್ ಸದಸ್ಯರಾಗಿ, ಕಾರ್ಕಳ APMC ಉಪಾಧ್ಯಕ್ಷರಾಗಿ, ನೆಲ್ಲಿಕಾರು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ, ಹೊಸ್ಮಾರು ರಬ್ಬರ್ ಬೆಳೆಗಾರರ ಸಂಘದ ಅಧ್ಯಕ್ಷರಾಗಿ, ಈದು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿ, ನಾರಾವಿ ಜೈನ್ ಮಿಲನ್ ಅಧ್ಯಕ್ಷರಾಗಿ, ಈದು ಮುಜಿಲ್ನಾಯ ದೈವಸ್ಥಾನದ ಆಡಳಿತ ಮೊಕ್ತೆಸರರಾಗಿ, ಹತ್ತಾರು ಸಂಘ – ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಕೃಷಿ, ಕ್ರೀಡಾ ಕ್ಷೇತ್ರಗಳಲ್ಲಿ ಹಲವಾರು ಸಾಧನೆ ಮಾಡಿರುವ ಹಾಗೂ ಜನರ ನಡುವೆ ಬೆರೆತು ಜನಸ್ನೇಹಿಯಾಗಿ ಅಶೋಕ ಅಣ್ಣ ಎಂದೆ ಖ್ಯಾತರಾದ ಕಂಬಳ ಕ್ರೀಡೆಯಲ್ಲಿ ಸತತ 24 ವರ್ಷಗಳ ಕಾಲ ಭಾಗವಹಿಸಿ, ಈದು ಜಯ – ವಿಜಯ ಜೋಡುಕರೆ ಕಂಬಳದ ಸ್ಥಾಪಕರಾದ ಈದು ಪಡ್ಯಾರಮನೆ ಅಶೋಕ್ ಕುಮಾರ್ ಜೈನ್ ಇವರು ಮಾರ್ಚ್ 15ರಂದು ನಡೆಯಲಿರುವ ಮಿಯ್ಯಾರು ಲವ – ಕುಶ ಜೋಡುಕರೆ ಕಂಬಳದಲ್ಲಿ ಸನ್ಮಾನ ಸ್ವೀಕರಿಸಲಿದ್ದಾರೆ.