ಲಯನ್ಸ್ ಜಿಲ್ಲೆ 317c ಯ ಪ್ರಾಂತ್ಯ 3ರ ಪ್ರಾಂತಿಯ ಅಧ್ಯಕ್ಷರಾಗಿ ಗಿರೀಶ್ ರಾವ್ ಆಯ್ಕೆ

0

ಲಯನ್ಸ್ ಜಿಲ್ಲೆ 317c ಯ ಪ್ರಾಂತ್ಯ 3ರ ಪ್ರಾಂತಿಯ ಅಧ್ಯಕ್ಷರಾಗಿ ಗಿರೀಶ್ ರಾವ್ ಆಯ್ಕೆ

2025-26 ನೇ ಸಾಲಿನ ಲಯನ್ಸ್ ಜಿಲ್ಲೆ, 317 ಸಿ ಯ ಪ್ರಾಂತ್ಯ 3 ರ ಅಧ್ಯಕ್ಷರಾಗಿ ಲಯನ್ಸ್ ಗಿರೀಶ್ ರಾವ್ ರವರನ್ನು ನಿಯೋಜಿತ ಜಿಲ್ಲಾ ಗವರ್ನರ್ ಲಯನ್ ಸಪ್ನಾ ಸುರೇಶ್ ರವರು ಆಯ್ಕೆ ಮಾಡಿ ಘೋಷಿಸಿದ್ದಾರೆ.

ಲಯನ್ ಗಿರೀಶ್ ರಾವ್ ಇವರು ಮೆಸ್ಕಾಂ ಕಾರ್ಕಳ ವಿಭಾಗದ ಲೆಕ್ಕಾಧಿಕಾರಿಯಾಗಿ. ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೆಸರರಾಗಿ, ಛತ್ರಪತಿ ಫೌಂಡೇಶನ್ ಇದರ ಅಧ್ಯಕ್ಷರಾಗಿ, ಕ್ಷತ್ರಿಯ ಮರಾಠ ಸಮಾಜ ಇದರ ಉಡುಪಿ ಜಿಲ್ಲಾಧ್ಯಕ್ಷರಾಗಿ ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ.

ಭಾರತೀಯ ಜೆಸಿಸ್ ನಲ್ಲಿ ಸುಮಾರು 32 ವರ್ಷಗಳ ಕಾಲ ಸುದೀರ್ಘ ಅನುಭವ ಹೊಂದಿರುವ ಇವರು,ಅಧ್ಯಕ್ಷರಾಗಿ,ವಲಯ ಉಪಾಧ್ಯಕ್ಷರಾಗಿ, ರಾಷ್ಟ್ರೀಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿರುತ್ತಾರೆ.ಮೂರು ರಾಷ್ಟ್ರೀಯ ವೈಯಕ್ತಿಕ ಪ್ರಶಸ್ತಿಯನ್ನು ಪಡೆದ ಹಿರಿಮೆ ಇವರದು.ಲಯನ್ಸ್ ಸಂಸ್ಥೆಯಲ್ಲಿ ಕ್ಲಬ್ ನ ಅಧ್ಯಕ್ಷರಾಗಿ ವಲಯಧ್ಯಕ್ಷನಾಗಿ ಜಿಲ್ಲೆಯ ಸಂಪುಟ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುತ್ತಾರೆ.

   

LEAVE A REPLY

Please enter your comment!
Please enter your name here