ರಾಜ್ಯ ಸರಕಾರಿ ನೌಕರರ ಸಂಘ ಕಾರ್ಕಳ ಶಾಖೆ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಅಹ್ವಾನ
ಕರ್ನಾಟಕ ರಾಜ್ಯ ಸರ್ಕಾರೀ ನೌಕರರ ಸಂಘ ಕಾರ್ಕಳ ಶಾಖೆ ಇದರ ವತಿಯಿಂದ ಸರಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
2021-2022 ಮತ್ತು 2022-2023 ನೇ ಸಾಲಿನಲ್ಲಿ ಎಸೆಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ 95 ಕ್ಕಿಂತ ಮೇಲ್ಪಟ್ಟು ಮತ್ತು ಯಾವುದೇ ಪದವಿ ಅಂತಿಮ ಪರೀಕ್ಷೆಯಲ್ಲಿ ಶೇ. 75 ಪಡೆದ ಇಬ್ಬರಿಗೆ ನಗದು ಪುರಸ್ಕಾರದೊಂದಿಗೆ ಸನ್ಮಾನ ಇರುತ್ತದೆ.(ಸ್ನಾತಕೋತ್ತರ ಪದವಿ ಪಡೆದವರಿಗೆ ಅವಕಾಶಗಳಿರುವುದಿಲ್ಲ)
ಅರ್ಹ ವಿದ್ಯಾರ್ಥಿಗಳ ದೃಢೀಕರಣ ಅಂಕಪಟ್ಟಿ,ಮೊಬೈಲ್ ಸಂಖ್ಯೆ ಹಾಗೂ ಇತೀಚಿನ ಭಾವಚಿತ್ರ, ತಂದೆ ತಾಯಿ ಸರಕಾರಿ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ಕಚೇರಿಯಿಂದ ಸೇವಾ ದೃಡೀಕರಣದೊಂದಿಗೆ ಅರ್ಜಿ ಸಲ್ಲಿಸುವುದು.ವಿಶೇಷ ಸಾಧನೆ ಮಾಡಿದ ನೌಕರರಿಗೆ ಮತ್ತು ಅವರ ಮಕ್ಕಳಿಗೆ ಪುರಸ್ಕಾರ ಹಾಗೂ 2022 ಆಗಸ್ಟ್ ನಿಂದ ಮೇ 31 ರ ಒಳಗೆ ಸರಕಾರಿ ಸೇವೆಯಿಂದ ನಿವೃತ್ತರಾದ ನೌಕರರಿಗೆ ಸನ್ಮಾನ ಇರುವುದರಿಂದ ಇದಕ್ಕೆ ಸಂಬಂಧಿಸಿದ ನಿವೃತ್ತ ನೌಕರರ ವಿವರಗಳನ್ನು ಜೂನ್ 16 ರ ಒಳಗೆ ನೌಕರರ ಸಂಘದ ಪದಾಧಿಕಾರಿಗಳ ಗಮನಕ್ಕೆ ತರುವಂತೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಶಾಖೆಯ ಅಧ್ಯಕ್ಷ ಬಾಲಕೃಷ್ಣ ಎನ್ ತಿಳಿಸಿದ್ದಾರೆ.
ಜೂನ್ 2 ರಂದು ಬಂಡಿಮಾ ಸರ್ಕಾರೀ ನೌಕರರ ಸಭಾಭವನದಲ್ಲಿ ಬೆಳಿಗ್ಗೆ 10ಕ್ಕೆ ನೌಕರರ ಸಂಘದ ವಾರ್ಷಿಕ ಮಹಾಸಭೆ ನಡೆಯಲಿದೆ.