
ಕರ್ನಾಟಕ ಪಬ್ಲಿಕ್ ಸ್ಕೂಲ್ ಹೊಸ್ಮಾರು ಇಲ್ಲಿ OSAAT ಎಜುಕೇಷನ್ ಚಾರಿಟೇಬಲ್ ಬೆಂಗಳೂರು ಇವರ 119 ನೇ ಪ್ರಾಜೆಕ್ಟ್ ನ್ನು , ದಾನಿಗಳಾದ Rakuten India Enterprise pvt,Ltd Bangalore ಇವರ ನೆರವಿನೊಂದಿಗೆ 4 ತರಗತಿ ಕೋಣೆಗಳನ್ನು ನಿರ್ಮಿಸಲು ಭೂಮಿ ಪೂಜೆ ಯನ್ನು ನೆರವೇರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಜಗದೀಶ್ ಅಂಚನ್, ಈದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸದಾನಂದ ಪೂಜಾರಿ, ಕೆ.ಪಿ.ಎಸ್ ಉಪ ಪ್ರಾಂಶುಪಾಲರಾದ ದಿವಾಕರ ಹೆಗ್ಡೆ, ಪುರುಷೋತ್ತಮ ರಾವ್, ಪ್ರಾಥಮಿಕ ವಿಭಾಗದ ವಿಜಯ ಕುಮಾರ್ ಪಿ, ಭೌತಿಕ ಸೌಲಭ್ಯ ಸಮಿತಿಯ ಅಧ್ಯಕ್ಷರಾದ ರಮೇಶ್ ಕೋಟ್ಯಾನ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸಂತೋಷ್ ಕುಮಾರ್ ಹಾಗೂ ಎಸ್ ಡಿ ಎಂ ಸಿ ಸದಸ್ಯರು, ಪಂಚಾಯತ್ ಸದಸ್ಯರು, ಪೋಷಕರು, ಹಾಗೂ ಶಿಕ್ಷಕ ಬಂಧುಗಳು ಉಪಸ್ಥಿತರಿದ್ದರು.













