
ಲಯನ್ಸ್ ಜಿಲ್ಲಾ ಪ್ರಾಂತೀಯ 3 ರ ತರಬೇತಿ ಕಾರ್ಯಗಾರವನ್ನು ಲಯನ್ಸ್ ಭವನ ಮೂಡುಬೆಳ್ಳೆ ಇಲ್ಲಿ ಜರಗಿದ್ದು, ಈ ಕಾರ್ಯಾಗಾರವನ್ನು ಲಯನ್ಸ್ ಜಿಲ್ಲೆ 317 ಸಿ ಇದರ ಜಿಲ್ಲಾ ಗವರ್ನರ್ ಲಯನ್ ಸ್ವಪ್ನ ಸುರೇಶ್ ಅವರು ಉದ್ಘಾಟಿಸಿದರು.
ಲಯನ್ಸ್ ಅಂತರಾಷ್ಟ್ರೀಯ ಮಟ್ಟದಲ್ಲಿ ಆಗುವ ಹೊಸ ಹೊಸ ಬದಲಾವಣೆಗಳನ್ನು ಇಂತಹ ಪುನಶ್ಚೇತನ ಶಿಬಿರದ ಮೂಲಕ ಮನದಟ್ಟು ಮಾಡಿಕೊಂಡು ಲಯನ್ ಸಂಸ್ಥೆಯಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಲು ಸುವರ್ಣ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ತನ್ನ ಉದ್ಘಾಟನಾ ಮಾತುಗಳನ್ನಾಡಿದರು.
ಪ್ರಥಮ ಜಿಲ್ಲಾ ಉಪಗವರ್ನರ್ ಲಯನ್ ರಾಜೀವ್ ಕೋಟ್ಯಾನ್, ಜಿಲ್ಲಾ ಸಂಯೋಜಕ ಲಯನ್ ರಂಜನ್ ಕಲ್ಕೂರ ತನ್ನ ಅನುಭವದ ಮಾತುಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂತಿಯ ಅಧ್ಯಕ್ಷ ಲಯನ್ ಗಿರೀಶ್ ರಾವ್ ವಹಿಸಿದ್ದರು. ಮುಖ್ಯ ತರಬೇತುದರಾಗಿ ಲಯನ್ ಸುರೇಶ್ ಪ್ರಭು ಹಾಗೂ ಜೆಸಿ ಶ್ರೀಧರ್ ಭಾಗವಹಿಸಿದರು.
ವಲಯ ಅಧ್ಯಕ್ಷರಾದ ಲಯನ್ ಗೀತಾ ರಾವ್, ಲಯನ್ ರೋಷನ್ ಡಿಸಿಲ್ವಾ, ಲಯನ್ ವೇಲೇರಿಯನ್ ಲೋಬೊ ಉಪಸ್ಥಿತರಿದ್ದರು. ಪ್ರಾಂತ್ಯ ಕಾರ್ಯದರ್ಶಿ ವಿಜಯ ಧೀರಜ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.






































