Wednesday, February 4, 2026
Google search engine
Homeಕಾರ್ಕಳಬಿಜೆಪಿಯಿಂದ ಚಾಮುಂಡಿ ಚಲೊಗೆ ಚಿಂತನೆ; ಬಾನು ಮುಷ್ತಾಕ್ ರಿಂದ ದಸರಾ ಉದ್ಘಾಟನೆಗೆ ವಿರೋಧ

ಬಿಜೆಪಿಯಿಂದ ಚಾಮುಂಡಿ ಚಲೊಗೆ ಚಿಂತನೆ; ಬಾನು ಮುಷ್ತಾಕ್ ರಿಂದ ದಸರಾ ಉದ್ಘಾಟನೆಗೆ ವಿರೋಧ

 

ಕನ್ನಡ ತಾಯಿ ಭುವನೇಶ್ವರಿ ಹಾಗೂ ಕನ್ನಡ ಬಾವುಟದಲ್ಲಿ ಅರಶಿನ – ಕುಂಕುಮದ ಬಣ್ಣಕ್ಕೆ ಸಂಬಂಧಿಸಿ ಹೇಳಿಕೆ ನೀಡಿದ್ದ ಬಾನು ಮುಷ್ತಾಕ್ ರಿಂದ ದಸರಾ ಉದ್ಘಾಟನೆ ಮಾಡಿಸಬಾರದು ಎಂದು ಚಾಮುಂಡಿ ಚಲೋ ನಡೆಸಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ.

ಸೋಮವಾರ ಧರ್ಮಸ್ಥಳ ಯಾತ್ರೆ ನಡೆಸಲಿರುವ ನಾಯಕರು, ದಸರಾ ವೇಳೆಗೆ ನಡೆಸಲು ಉದ್ದೇಶಿಸಿರುವ ಚಾಮುಂಡಿ ಚಲೋ ಬಗ್ಗೆಯೂ ರೂಪುರೇಷೆ ಸಿದ್ಧಪಡಿಸಲು ಯೋಚಿಸಿದ್ದಾರೆ. ಧರ್ಮಸ್ಥಳದಿಂದ ಮರಳಿದ ಬಳಿಕ ಮೈಸೂರು ಜಿಲ್ಲಾ ಬಿಜೆಪಿ ನಾಯಕರು ಈ ಪ್ರಸ್ಥಾಪನೆಯನ್ನು ರಾಜ್ಯ ಬಿಜೆಪಿ ಘಟಕದ ಮುಂದಿಟ್ಟು, ಚಾಮುಂಡಿ ಚಲೋ ಬಗ್ಗೆ ಯೋಜಿಸುವ ಸಾಧ್ಯತೆ ಇದೆ.

ಈಗಾಗಲೇ ಬಜರಂಗ ಸೇನೆ ಚಾಮುಂಡಿ ಚಲೋ ಹಮ್ಮಿಕೊಳ್ಳುವುದಾಗಿ ಘೋಷಿಸಿದ್ದು, ಮೈಸೂರು ಜಿಲ್ಲಾ ಬಿಜೆಪಿ ಘಟಕದ ವತಿಯಿಂದಲೂ ಚಾಮುಂಡಿ ಬೆಟ್ಟಕ್ಕೆ ಯಾತ್ರೆ ಹೋಗುವ ಬಗ್ಗೆ ಚರ್ಚೆ ಆರಂಭವಾಗಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments