ಕಾರ್ಕಳ:ಬಿಜೆಪಿ ಪಕ್ಷದಿಂದ ಇಬ್ಬರ ಉಚ್ಚಾಟನೆ
ಕಾರ್ಕಳ:ಬಿಜೆಪಿ ಬೆಂಬಲಿತ ಇಬ್ಬರು ಗ್ರಾಮಪಂಚಾಯತ್ ಸದಸ್ಯರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ ತಿಳಿಸಿದ್ದಾರೆ.
ನಿಟ್ಟೆ ಗ್ರಾಮ ಪಂಚಾಯತ್ ಸದಸ್ಯ ಸುಭಾಷ್ ಚಂದ್ರ ಹೆಗ್ಡೆ ಮತ್ತು ಮುದ್ರಾಡಿ ಗ್ರಾಮ ಪಂಚಾಯತ್ ಸದಸ್ಯ ಶುಭದರ್ ಎಂಬುವವರನ್ನು ಉಚ್ಚಾಟಿಸಲಾಗಿದೆ.ಕಳೆದ ಚುನಾವಣೆಯ ಸಂದರ್ಭ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಮತಪ್ರಚಾರ ಮಾಡಿ ಪಕ್ಷಕ್ಕೆ ಅಗೌರವ ತೋರಿಸಿದ್ದಲ್ಲದೆ ಪಕ್ಷದ ನಿಯಮ ಉಲ್ಲಂಘನೆ ಮಾಡಿರುವುದೇ ಉಚ್ಚಾಟನೆಗೆ ಕಾರಣ ಎಂದು ತಿಳಿಸಿದ್ದಾರೆ.