ರೋಟರಿ ಕ್ಲಬ್ ಕಾರ್ಕಳಕ್ಕೆ ಜಿಲ್ಲಾ ಪ್ರಶಸ್ತಿ

0

 

ಉಡುಪಿ ಜಿಲ್ಲೆಯ ಸಾಸ್ಥಾನದಲ್ಲಿ ಏರ್ಪಡಿಸಿದ್ದ 2024- 25 ನೇ ಸಾಲಿನ ಉಡುಪಿ ,ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಕಂದಾಯ ಜಿಲ್ಲೆಗಳನ್ನು ಒಳಗೊಂಡ ರೋಟರಿ ಜಿಲ್ಲೆ 3182 ರ ಜಿಲ್ಲಾ ಪ್ರಶಸ್ತಿ ಪ್ರಧಾನ ಸಮಾರಂಭ “ಕಲ್ಯಾಣ ಸಂಗಮ” ದಲ್ಲಿ ರೋಟರಿ ಕ್ಲಬ್ ಕಾರ್ಕಳ ಸಾರ್ವಜನಿಕ ಸೇವೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

ವಿವಿಧ ವಿಭಾಗಗಳಲ್ಲಿ 30 ಪ್ರಶಸ್ತಿಗಳನ್ನು 24-25 ನೇ ಸಾಲಿನ ಅಧ್ಯಕ್ಷ ಇಕ್ಬಾಲ್ ಅಹ್ಮದ್ ರವರಿಗೆ ನೀಡಿ ಗೌರವಿಸಲಾಯಿತು . 24-25 ನೇ ಸಾಲಿನ ಎಕ್ಸಲೆನ್ಸಿ ಅವಾರ್ಡ್ ಅನ್ನು ಪಡೆಯಿತು. ಅಲ್ಲದೆ ಜಿಲ್ಲಾ ಮೆಂಬರ್ ಶಿಪ್ ವೈಸ್ ಚೇರ್ಮನ್ ಕಾರ್ಕಳ ಕ್ಲಬ್ಬಿನ ಸದಸ್ಯೆ ರೇಖಾ ಉಪಾಧ್ಯಾಯ ಇವರಿಗೆ ಸಮಾರಂಭದಲ್ಲಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ 24-25ನೇ ಸಾಲಿನ ಕಾರ್ಯದರ್ಶಿ ಗಣೇಶ ಸಾಲಿಯಾನ್, ಮಾಜಿ ಜಿಲ್ಲಾ ಗವರ್ನರ್ ಡಾ.ಭರತೇಶ್ ಆದಿರಾಜ್, ಮಾಜಿ ಸಹಾಯಕ ಗವರ್ನರ್ ಶೈಲೇಂದ್ರ ರಾವ್, ವಲಯ ಸೇನಾನಿ ಜಾನ್ ಡಿ ಸಿಲ್ವ,2025-26ನೇ ಸಾಲಿನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಕಾರ್ಯದರ್ಶಿ ಚೇತನ್ ನಾಯಕ್, ಶೇಖರ್ ಹೆಚ್, ಶ್ರೀಶ ಭಟ್, ಪದ್ಮಪ್ರಸಾದ್ ಜೈನ್ ,ಚೇತನ್ ಕುಮಾರ್ ,ಜೆರಾಲ್ಡ್ ಕುಟೀನ್ಹೊ, ಸುಬ್ರಹ್ಮಣ್ಯ ದೇವಾಡಿಗ, ಸುರೇಶ ನಾಯಕ್, ಸೌಜನ್ಯ ಉಪಾಧ್ಯಾಯ,ವಿಜೇಂದ್ರ ಕುಮಾರ್ , ಪ್ರಭಾತ್ ಕುಮಾರ್ ಎನ್, ಸತೀಶ್ ಜಿ. ಶೆಟ್ಟಿ, ನವೀನ್ ಸುವರ್ಣ, ಬಾಲಕೃಷ್ಣ ದೇವಾಡಿಗ,ಡಾ.ಆಶಾ ಹೆಗಡೆ, ರೇಖಾ ಉಪಾಧ್ಯಾಯ, ಹರ್ಷಿಣಿ ವಿಜಯರಾಜ್, ಜ್ಯೋತಿ ಪದ್ಮನಾಭ, ಮಮತ ಶೆಟ್ಟಿ ಭಾಗವಹಿಸಿದ್ದರು.

   

LEAVE A REPLY

Please enter your comment!
Please enter your name here