ಕಾರ್ಕಳ:ಬಸ್ಟ್ಯಾಂಡ್ ನಲ್ಲಿ ಸಿಕ್ಕ ಹಣವನ್ನು ವಾರೀಸುದಾರರಿಗೆ ಒಪ್ಪಿಸಿದ ಬಸ್ ಏಜೆ೦ಟರು
ಬಸ್ಟ್ಯಾಂಡಿನಲ್ಲಿ ಸಿಕ್ಕ ಹಣವನ್ನು ಮರಳಿ ವಾರೀಸುದಾರರಿಗೆ ಒಪ್ಪಿಸುವ ಮೂಲಕ ಕಾರ್ಕಳ ಬಸ್ ಏಜೆ೦ಟರು ಪ್ರಾಮಾಣಿಕತೆ ಮೆರೆದಿದ್ದಾರೆ.ಇಂದು ಬೆಳಿಗ್ಗೆ ಕಾರ್ಕಳ ಬಸ್ ಸ್ಟ್ಯಾಂಡಿನಲ್ಲಿ ಕಾಲೇಜು ವಿದ್ಯಾರ್ಥಿಯೋರ್ವರಿಗೆ ಐದು ಸಾವಿರ ರೂಪಾಯಿ ಹಣ ಸಿಕ್ಕಿತ್ತು.ಕೂಡಲೇ ಅವರು ಅದನ್ನು ಬಸ್ ಏಜೆ೦ಟರಿಗೆ ಕೊಟ್ಟು ವಾರೀಸುದಾರರಿಗೆ ತಲುಪಿಸುವಂತೆ ಹೇಳಿದ್ದರು.
ಈ ಕುರಿತು ಸಾಮಾಜಿಕಜಾಲತಾಣದಲ್ಲಿ ಮೆಸೇಜ್ ಹರಿಯಬಿಟ್ಟಿದ್ದು ಇದೀಗ ಆ ಹಣ ವಾರೀಸುದಾರರಿಗೆ ತಲುಪಿದೆ.ಮಂಗಳೂರು ಮೂಲದ ಮಹಿಳೆ ಕಾರ್ಕಳದಲ್ಲಿ ವರಮಹಾಲಕ್ಷ್ಮಿ ಪೂಜೆಗೆಂದು ಬಂದಿದ್ದ ಸಂದರ್ಭ ಹಣವನ್ನು ಕಳೆದುಕೊಂಡಿದ್ದರು.ಇದೀಗ ಹಣ ಅವರ ಕೈ ಸೇರಿದ್ದು ವಿದ್ಯಾರ್ಥಿ ಹಾಗೂ ಬಸ್ ಏಜೆ೦ಟರ ಪ್ರಾಮಾಣಿಕತೆಗೆ ಶ್ಲಾಘನೆ ವ್ಯಕ್ತವಾಗಿದೆ.