
ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಚಿತ್ರ ಮಂದಿರದಲ್ಲಿ ಇತ್ತೀಚಿಗೆ ತೆರೆಕಂಡ ಸಿನೆಮಾ ಕಾಂತಾರ ವೀಕ್ಷಣೆಗೆ ತೆರಳಿದ್ದ ನಾಲ್ವರು ಯುವಕರು ಟಿಕೆಟ್ ಸಿಗದೇ ಇದ್ದುದರಿಂದ ಮಸ್ಕಿಯ ಮುಖ್ಯ ಕಾಲುವೆಗೆ ಈಜಲು ತೆರಳಿದ್ದು, ಆ ವೇಳೆ ಇಬ್ಬರು ಮೃತಪಟ್ಟ ಘಟನೆ ಸಂಭವಿಸಿದೆ.
ಪಟ್ಟಣದ ವೆಂಕಟೇಶ ಬಸವರಾಜ್ ಮುಚಿಗೇರ್ ಮತ್ತು ಯಲ್ಲಾಲಿಂಗ ಈರಣ್ಣ ಮೃತಪಟ್ಟವರು. ಶನಿವಾರ ಮದ್ಯಾಹ್ನ ಸಿನೆಮಾ ನೋಡಲು ತೆರಳಿದ್ದ ಯುವಕರಿಗೆ ಸಿಗದೇ ಇರುವುದರಿಂದ ಊಟ ಮಾಡಲು ತೆರಳಿದ್ದು, ಪಕ್ಕದಲ್ಲಿದ್ದ ಕಾಲುವೆಗೆ ಈಜಲು ಇಳಿದಿದ್ದರು. ನೀರಿನ ರಭಸಕ್ಕೆ ಇಬ್ಬರು ಕೊಚ್ಚಿಹೋಗಿದ್ದು, ಕವಿತಾಳ ಪಟ್ಟಣದ ಹತ್ತಿರದ ವಿತರಣೆ ಕಾಲುವೆಯಲ್ಲಿ ಮೃತದೇಹ ಪತ್ತೆಯಾಗಿದೆ.












