“ಅಕ್ರಮ ದಂದೆಕೋರರ ಒತ್ತಡಕ್ಕೆ ಮಣಿದು ಎಸ್ಪಿ ವರ್ಗಾವಣೆ ಮಾಡಿದ್ದಲ್ಲಿ ಜಿಲ್ಲಾದ್ಯಂತ ಪ್ರತಿಭಟನೆ”
ಕಾರ್ಕಳ ತಾಲೂಕು ನಾಗರಿಕ ಜನಜಾಗೃತಿ ಸಮಿತಿ ಅಧ್ಯಕ್ಷ ಉಮೇಶ್ ಕಲ್ಲೋಟ್ಟೆ
ಉಡುಪಿ ಜಿಲ್ಲೆಗೆ ದಕ್ಷ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಿದ ಸರ್ಕಾರ ನಿಲುವನ್ನು ನಾನು ಸ್ವಾಗತಿಸುತ್ತೇನೆ ಎಂದು ಕಾರ್ಕಳ ತಾಲೂಕು ನಾಗರಿಕ ಜನಜಾಗೃತಿ ಸಮಿತಿ ಅಧ್ಯಕ್ಷ ಉಮೇಶ್ ಕಲ್ಲೋಟ್ಟೆ ತಿಳಿಸಿದ್ದಾರೆ.
ನಿರಂತರ ಅಕ್ರಮ ಚಟುವಟಿಕೆಯಿಂದ ನಳುಗುತ್ತಿರುವ ಉಡುಪಿ ಜಿಲ್ಲೆಗೆ ಈ ಅಧಿಕಾರಿಯ ಆಗಮನದಿಂದ ಜನತೆ ನಿಟ್ಟಿಸಿರು ಬಿಡುವಂತಾಗಿದೆ. ಮಟ್ಕಾ, ಜುಗಾರಿ, ಇಸ್ಪೀಟ್, ಕೋಳಿಅಂಕ,ಮರಳು ಅಡ್ಡೆಗಳು ನಿಷ್ಕ್ರಿಯವಾಗಿ ಜನತೆಯ ನೆಮ್ಮದಿಯಿಂದ ಬದುಕುತಿದ್ದಾರೆ. ನೋಡ್ ಗಟ್ಟಲೆ ಸರಕು ತುಂಬಿದ ಅಧಿಕ ಬಾರದ ಗಣ ವಾಹನಗಳು ಓಡಾಡುವುದರಿಂದ ಲಗು ವಾಹನ ಸವಾರರು ರಸ್ತೆಯಲ್ಲಿ ಈಗ ನೆಮ್ಮದಿಯಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಅತ್ಯಂತ ಸಂತೋಷವಾಗಿದೆ.
ಈಗ ಅಕ್ರಮವಾಗಿ ವ್ಯವಾರ ನಡೆಸಲು ಅನುಮತಿ ನೀಡಿ ಎಂದು ಕೂಗಾಡುವ ಸಂಘಟನೆಗಳ ಹೋರಾಟಕ್ಕೆ ಯಾರು ಬೆಂಬಲ ನೀಡಬಾರದು ಎಲ್ಲವೂ ಕಾನೂನಾತ್ಮಕವಾಗಿ ವ್ಯವಾರ ನಡೆಸುವಲ್ಲಿ ಮುಂದಾಗಬೇಕು ಜಿಲ್ಲೆಯ ಶಾಂತಿ ಸೌಹಾರ್ದತೆ ಹೆಚ್ಚಾಗಿದ್ದು ಎಲ್ಲರೂ ನೆಮ್ಮದಿಯಲ್ಲಿದ್ದಾರೆ.
ಬಡವರಿಗೆ ಶ್ರೀಮಂತರಿಗೆ ಒಂದೇ ಕಾನೂನು ಎಂದು ಹೇಳುವ ಈ ಪೊಲೀಸ ವರಿಷ್ಠ ಅಧಿಕಾರಿಗಳ ನಿಲುವಿಗೆ ಸಾಗನೆಯ ವ್ಯಕ್ತವಾಗಿದೆ ಒಂದು ವೇಳೆ ಅಕ್ರಮ ದಂದೆಕೋರರ ಒತ್ತಡಕ್ಕೆ ಮಣಿದು ಸರ್ಕಾರ ಎಸ್ಪಿ ಅವರ ವರ್ಗಾವಣೆಗೆ ಮನ ಮಾಡಿದ್ದಲ್ಲಿ ಜಿಲ್ಲಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲು ಇದ್ದೇವೆ ಎಂದು ಎಚ್ಚರಿಸುತ್ತೇನೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.