ಮುದ್ರಾಡಿ ಶ್ರೀ ಆದಿಶಕ್ತಿ ದೇವಸ್ಥಾನದಲ್ಲಿ 108 ಹೆಣ್ಣು ಮಕ್ಕಳಿಗೆ ಉಚಿತ ಚಿನ್ನದ ಮೂಗುತಿ ಧಾರಣೆ.
ಹೆಬ್ರಿ ಸಮೀಪದ ಮುದ್ರಾಡಿ ಶ್ರೀ ಆದಿಶಕ್ತಿ ದೇವಸ್ಥಾನದ ಧರ್ಮಧಿಕಾರಿ ಸುಕುಮಾರ ಮೋಹನ್ ದಿವ್ಯಸಂಕಲ್ಪದಂತೆ ಶ್ರೀಕೇತ್ರ ಮುದ್ರಾಡಿಯಲ್ಲಿ 108 ಹೆಣ್ಣು ಮಕ್ಕಳಿಗೆ ಉಚಿತ ಚಿನ್ನದ ಮೂಗುತಿ ಧಾರಣೆ ನಡೆಯಿತು.
ಹೆಬ್ರಿ : ಸ್ತ್ರೀ ಸೌಭಾಗ್ಯ ಹೆಣ್ಣುಮಕ್ಕಳ ಭಾಗ್ಯೋದಯದ ಬೆಳಕು ಹಿಂದೂ ಧರ್ಮದ ಮೂಗುತಿ ಧಾರಣೆ ಆಗದ ಹೆಬ್ರಿ ಮತ್ತು ಕಾರ್ಕಳ ತಾಲ್ಲೂಕಿನ 9 ರಿಂದ 19 ವರ್ಷದ ಹೆಣ್ಣು ಮಕ್ಕಳಿಗೆ ಉಚಿತ ಚಿನ್ನದ ಮೂಗುತಿ ಧಾರಣ ಕಾರ್ಯಕ್ರಮ ಭಾನುವಾರ ಮುದ್ರಾಡಿ ಶ್ರೀ ಆದಿಶಕ್ತಿ ದೇವಸ್ಥಾನದ ಧರ್ಮಧಿಕಾರಿ ಸುಕುಮಾರ ಮೋಹನ್ ದಿವ್ಯಸಂಕಲ್ಪದಂತೆ ಶ್ರೀಕೇತ್ರ ಮುದ್ರಾಡಿಯಲ್ಲಿ ನಡೆಯಿತು.
ಕಾರ್ಕಳ ಹೆಬ್ರಿಯ ಇತಿಹಾಸದಲ್ಲಿ ಪ್ರಥಮ ಬಾರಿಗೆ 108 ಹೆಣ್ಣು ಮಕ್ಕಳಿಗೆ ಉಚಿತ ಚಿನ್ನದ ಮೂಗುತಿ ಧಾರಣೆ ನಡೆಯಿತು. 9 ಹೆಣ್ಣು ಮಕ್ಕಳಿಗೆ ಕನ್ನಿಕ ಪೂಜೆ ನೆರವೇರಿಸಲಾಯಿತು. ಸ್ವರ್ಣೋಧ್ಯಮಿ ಬಜಗೋಳಿ ಪ್ರಸಾದ್ ಆಚಾರ್ಯ ೧೦೮ ಮಂದಿಗೆ ಮೂಗುತಿ ಧಾರಣೆ ಕಾರ್ಯ ನೆರವೇರಿಸಿದರು.