ಬಜಗೋಳಿ:ಎರಡನೇ ವರ್ಷದ ‘ಅಪ್ಪು ಅಜರಾಮರ’ ಕಾರ್ಯಕ್ರಮ
ಬಜಗೋಳಿ:ಎರಡನೇ ವರ್ಷದ ಅಪ್ಪು ಅಜರಾಮ ಕಾರ್ಯಕ್ರಮ ನ.18ರಂದು ಬಜಗೋಳಿ ಬಸ್ ಸ್ಟಾಂಡ್ ಬಳಿ ಸಂಜೆ 6 ಗಂಟೆಗೆ ನಡೆಯಲಿದೆ.ರಮಾಕಾಂತ್ ಶೆಟ್ಟಿ ಕರಿಮಾರ್ ಕಟ್ಟೆ,ರಜತ್ ರಾಮ್ ಮೋಹನ್ ಬಜಗೋಳಿ,ಸುರೇಶ್ ಅಮ್ಮ ಅರೇಂಜರ್ಸ್ ಸಂಯೋಜನೆಯಲ್ಲಿ ಕಾರ್ಯಕ್ರಮ ಮೂಡಿ ಬರಲಿದೆ.
ಉಮೇಶ್ ರಾವ್ ಚಿರಾಗ್ ಬಜಗೋಳಿ,ಮಹಾವೀರ್ ಜೈನ್ ಅಗ್ನಿಲಾ ಸರ್ವಿಸ್ ಸ್ಟೇಷನ್, ಸುನೀಲ್ ಕುಮಾರ್ ವೀತರಾಗ ನಿಲಯ ಬಜಗೋಳಿ,ಮುಡಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶೃತಿ ಡಿ.ಅಧಿಕಾರಿ,ರಾಜ್ಯ ಸ್ಟೋನ್ ಆಂಡ್ ಕ್ರಷರ್ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ,ದಕ್ಷಿಣಕನ್ನಡ ಮತ್ತು ಉಡುಪಿ ಹಾಲು ಉತ್ಪಾದಕರ ಸಂಘದ ನಿರ್ದೇಶಕರಾದ ಸುಧಾಕರ್ ಶೆಟ್ಟಿ ಮುಡಾರು,ಉಮೇಶ್ ರಾವ್ ಅಕ್ಷಯ್ ಜ್ಯುಸ್ ಸೆಂಟರ್ ಬಜಗೋಳಿ ಶರತ್ ಶೆಟ್ಟಿ ಕೊಟ್ರಾಡಿ,ವಂದನಾ ರೈ ನಲ್ಲೂರು ಉಪಸ್ಥಿತಲಿರಲಿದ್ದಾರೆ.
2023-24ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಾದ ಮುಡಾರು ಸುರೇಶ್ ಸಾಲಿಯಾನ್,ವಿದ್ಯಾ ಯು. ಶೆಟ್ಟಿ ಕುಕ್ಕುಂದೂರು,ಅಶೋಕ್ ಶೆಟ್ಟಿ ನರ್ಸಬೆಟ್ಟು, ಮಾಳ,ಆಯೇಷಾ ಬಾನು, ಸುರಕ್ಷಾ ಸೇವಾಶ್ರಮ ಇವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಯತೀಶ್ ಪೂಜಾರಿ ನಿರೂಪಣೆ,ಕೃತಿಕಾ ಮಾಳ,ಚೇತನ್ ಖುಷಿ,ಸಂತು ನಾರಾವಿ,ಗುಣಪ್ರಸಾದ್ ಕುಕ್ಕಟ್ಟೆ ಗಾಯನ, ಗಿರೀಶ್ ಪೆರ್ಲ ತಬಲಾ,ಅಶ್ವಿನ್ ಬಾಬಣ್ಣ ಕೀಬೋರ್ಡ್,ಸಚಿನ್ ಪುತ್ತೂರು,ಸಂಗೀತ ಗಿಟಾರ್ ಇರಲಿದೆ.