ಬಜಗೋಳಿ:ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸುರೇಶ್ ಸಾಲ್ಯಾನ್ ಹಾಗೂ ಅಶೋಕ್ ಶೆಟ್ಟಿ ಯವರಿಗೆ ‘ನಮ್ಮೂರ ಸನ್ಮಾನ’
ಬಜಗೋಳಿ:ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಸುರೇಶ್ ಸಾಲ್ಯಾನ್ ಹಾಗೂ ದೈವಾರಾಧನೆಗೆ ಅಶೋಕ್ ಶೆಟ್ಟಿರವರಿಗೆ “ನಮ್ಮೂರ ಸನ್ಮಾನ ” ಕಾರ್ಯಕ್ರಮದಲ್ಲಿ ಅಭಿನಂದನಾ ಕಾರ್ಯಕ್ರಮ ಬಜಗೋಳಿ ನಾರಾಯಣಗುರು ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ.ಸುನಿಲ್ ಕುಮಾರ್,ವಿಧಾನ ಪರಿಷತ್ ನ ಮಾಜಿ ಸದಸ್ಯರಾದ ಕ್ಯಾ.ಗಣೇಶ್ ಕಾರ್ಣಿಕ್,ಫೆಡರೆಷನ್ ಆಫ್ ಸ್ಟೋನ್ ಕ್ರಶರ್ಸ್ ಓನರ್ಸ್ ಅಸೋಸಿಯೆಷನ್ ನ ರಾಜ್ಯ ಅಧ್ಯಕ್ಷರಾದ ರವೀಂದ್ರ ಶೆಟ್ಟಿ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಉದಯ.ಎಸ್. ಕೋಟ್ಯಾನ್,ಮುಡಾರು ಪಂಚಾಯತ್ ಅಧ್ಯಕ್ಷರಾದ ಶೃತಿ.ಡಿ.ಅಧಿಕಾರಿ, ಮಾಳ ಕೆರ್ವಾಶೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಅನಿಲ್. ಎಸ್. ಪೂಜಾರಿ,ಉದ್ಯಮಿಗಳಾದ ಜೆರೊಂ ಮೆನೆಜಸ್,ಉದಯ ಸಾಲ್ಯಾನ್, ನಿವೃತ್ತ ಶಿಕ್ಷಕರಾದ ಶ್ರೀರಂಗ ಜೋಷಿ, ಗ್ರಾಮ ಪಂಚಾಯತ್ ಸದಸ್ಯರಾದ ರಜತ್ ರಾಮ್ ಮೋಹನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಸುಮಲತಾ ಬಜಗೋಳಿ ಸ್ವಾಗತಿಸಿ,ಗುರುಪ್ರಸಾದ್ ಶೆಟ್ಟಿಗೈದು, ಶಿಕ್ಷಕರಾದ ನಾಗೇಶ್ ರವರು ಕಾರ್ಯಕ್ರಮ ನಿರೂಪಿಸಿದರು.