Thursday, September 19, 2024
Google search engine
Homeಕಾರ್ಕಳಕಾರ್ಕಳ:ಪ್ರಕರಣದ ಮೂರನೇ ಆರೋಪಿ ಬೀಜೆಪಿ ಬೆಂಬಲಿಗ-ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ಇನ್ನಾ

ಕಾರ್ಕಳ:ಪ್ರಕರಣದ ಮೂರನೇ ಆರೋಪಿ ಬೀಜೆಪಿ ಬೆಂಬಲಿಗ-ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ಇನ್ನಾ

ಸುನಿಲ್ ಕುಮಾರ್ ಗೆ ಮಾನ ಮರ್ಯಾದೆ ಉಳಿದಿದ್ದರೆ ರಾಜಿನಾಮೆ ನೀಡಲಿ-ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ಇನ್ನಾ

ಕಾರ್ಕಳದಲ್ಲಿ ಇತ್ತೀಚೆಗೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಇಂದು ಸಭೆ ನಡೆಸಿ ಮಾತಾಡಿದ ಸುನಿಲ್ ಕುಮಾರ್ ಜಿಹಾದಿ ಕೃತ್ಯ,ಕಾಂಗ್ರೆಸ್ ಸರಕಾರದ ವೈಫಲ್ಯ ಎಂಬುದಾಗಿ ಹೇಳಿದ್ದರು.ಇದೀಗ ಅವರದೇ ಬೆಂಬಲಿಗ ಕಾರ್ಕಳದ ಅಭಯ್ ಎನ್ನುವ ಬಿಜೆಪಿ ಕಾರ್ಯಕರ್ತ ಭಂದನವಾಗಿದ್ದು, ಕಾರ್ಕಳ ಶಾಸಕರು ಇದಕ್ಕೇನು ಉತ್ತರ ಕೊಡುತ್ತಾರೆಂದು ಸ್ಫಷ್ಟಪಡಿಸಬೇಕು ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ಇನ್ನಾ ಹೇಳಿದ್ದಾರೆ.

ಆರೋಪಿಯು ಸುನಿಲ್ ಕುಮಾರ್ ಭಾವಚಿತ್ರವನ್ನು ತನ್ನ ಪೇಸ್ಬುಕ್‌ ಖಾತೆಯ ಕವರ್ ಫೋಟೊದಲ್ಲಿ ಹಾಕಿಕೊಂಡಿರುವುದು ಸ್ಪಷ್ಟವಾಗಿ ಕಂಡುಬರುತಿದ್ದು, ಸುನಿಲ್ ಕುಮಾರ್ ಅವರು ಅವರ ಭಾಷಣದಲ್ಲಿ ಜಾತಿ ಜಾತಿ ಧರ್ಮಧರ್ಮ ಗಳ ಮಧ್ಯೆ ಕಂದಕವನ್ನು ನಿರ್ಮಿಸಿ ವೋಟ್ ಬ್ಯಾಂಕ್ ಗಳಿಸುವ ಹುನ್ನಾರ ಕೈಬಿಡಬೇಕು ಎಂದು ಅವರು ಹೇಳಿದ್ದಾರೆ.

ಹಿಂದು ಯುವಕರು ಮನಸ್ಸು ಮಾಡಿದರೆ ಹೆಣ ಇಡಲು ದೇಶದಲ್ಲಿ ಪ್ರಿಜ್ ಸಾಕಾಗಲಿಕ್ಕಿಲ್ಲ ಎಂದು ಪರೋಕ್ಷವಾಗಿ ಹಿಂದು ಯುವಕರಿಗೆ ಅತ್ಯಾಚಾರ ನಡೆಸಲು ಕರೆ ನೀಡಿದ ಸುನೀಲ್ ಕುಮಾರ್ ಅವರದ್ದು ಪೈಶಾಚಿಕ ಮನಸ್ಥಿತಿಯಾಗಿದೆ. ಒಬ್ಬ ಅತ್ಯಾಚಾರಿಗೂ ಇವರಿಗೂ ಏನು ವ್ಯತ್ಯಾಸ?

ಒಂದು ಅತ್ಯಾಚಾರವನ್ನು ಖಂಡಿಸುವ ಭರದಲ್ಲಿ, ಒಂದು ಅತ್ಯಾಚಾರದಿಂದ ರಾಜಕೀಯ ಲಾಭ ಪಡೆಯುವ ಭರದಲ್ಲಿ ಸಾವಿರಾರು ಅತ್ಯಾಚಾರಕ್ಕೆ ಸುನೀಲ್ ಕುಮಾರ್ ಕರೆ ನೀಡಿರುವುದನ್ನು ನಾಗರಿಕ ಸಮಾಜ ಖಂಡಿಸಬೇಕಿದೆ ಎಂದು ಅವರು ಹೇಳಿದ್ದಾರೆ.

ಆರೋಪಿ ಅಭಯ್ ದ್ದು ಎನ್ನಲಾದ ಫೇಸ್ ಬುಕ್ ಖಾತೆಯ ಫೋಟೋ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments