ದೇಶದ ಸಂಸತ್ತಿಗೆ, ಸಂಸದರಿಗೆ ಭದ್ರತೆ ಇಲ್ಲಾ ಅಂದ ಮೇಲೆ ದೇಶಕ್ಕೆ ಭದ್ರತೆ ಎಲ್ಲಿಂದ-ಅನಿತಾ ಡಿಸೋಜ
ಅನಿತಾ ಡಿಸೋಜ ಪ್ರಶ್ನೆ . ಮಹಿಳಾ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಕಾರ್ಕಳ.
ಲೋಕಸಭೆಗೆ ಗ್ಯಾಸ್ ಬಾಂಬ್ ಜೊತೆಗೆ ಇಬ್ಬರು ನುಗ್ಗಿರುವುದು ನಂಬಲು ಅಸಾಧ್ಯ. ದೇಶದಲ್ಲೇ ಅತ್ಯಂತ ಸುರಕ್ಷಿತ ಜಾಗ ಅಂದುಕೊಂಡಿರುವ ಜಾಗದಲ್ಲಿ ಇಂತಹ ಘಟನೆ ನಡೆಯಲು ಸಾಧ್ಯ ಅಂದ್ರೆ ದೇಶ ಎಷ್ಟು ಸುರಕ್ಷಿತವಾಗಿದೆ ಅನ್ನುವುದಕ್ಕೆ ಬೇರೆ ಸಾಕ್ಷಿ ಬೇಕಾಗಿಲ್ಲ.
ಎಂಥಾ ಕಳಂಕಿತರು ಕೂಡಾ ಬಿಜೆಪಿ ಸೇರಿದ ಕೂಡಲೇ ಅವರ ಎಲ್ಲಾ ಕಳಂಕ ಕಳೆದುಕೊಂಡು ಹರಿಶ್ಚಂದ್ರನ ವಂಶಸ್ಥರು ಆಗುವ ಈ ಕಾಲದಲ್ಲಿ, ಪುಲ್ವಮದಲ್ಲಿ 300ಕೆಜಿ ಆರ್ಡಿಎಕ್ಸ್ ತಂದು ನಮ್ಮ ಸೈನಿಕರ ಮಾರಣ ಹೋಮ ನಡೆಸಿದವರ ತನಿಖೆ ಹಳ್ಳ ಹಿಡಿಸಿದ, ಅದು ಯಾರಿಂದ, ಯಾರಿಗಾಗಿ ಯಾಕಾಗಿ ನಡೆಯಿತು ಎನ್ನುವ ಬಗ್ಗೆ ಚಕಾರ ಎತ್ತದ ದುಷ್ಟ ಕೇಂದ್ರ ಸರಕಾರದಿಂದ ಈ ವಿಷಯಕ್ಕೆ ನ್ಯಾಯ ಸಿಗಬಹುದು. ನೈಜತೆ ಜನರ ಮುಂದೆ ಬರಬಹುದು ಅನ್ನುವುದು ಕನಸು.
ಆದರೂ ಭದ್ರತಾ ಲೋಪಕ್ಕೆ ಕಾರಣ ಆದ ಭದ್ರಾತಾಮಂಡಳಿ ಅಧ್ಯಕ್ಷರು, ಗ್ರಹ ಸಚಿವರಾದ ಅಮಿತ್ ಷಾ ಮತ್ತು ಅವರಿಗೆ ಪಾಸ್ ನೀಡಿದ ಸಂಸದ ಪ್ರತಾಪ್ ಸಿಂಹ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಇಲ್ಲವೇ ಕೇಂದ್ರ ಸರಕಾರ ಅವರನ್ನು ವಜಾ ಮಾಡಬೇಕು. ಆಗ ಮಾತ್ರ ತನಿಖೆಯಲ್ಲಿ ನೈಜತೆ ಬರಲು ಸಾಧ್ಯ.
–ಅನಿತಾ ಡಿಸೋಜ ಮಹಿಳಾ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಕಾರ್ಕಳ.