ಇಂದು (ಜ.12)ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಡಾರು ಇಲ್ಲಿ ಶಾಲಾ ವಾರ್ಷಿಕೋತ್ಸವ ನಡೆಯಲಿದೆ.
ರಾತ್ರಿ 9.00 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಸಚಿವ,ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಉದ್ಘಾಟನೆ ಮಾಡಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಡಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರುತಿ ಡಿ.ಅಧಿಕಾರಿ ವಹಿಸಲಿದ್ದಾರೆ.
ಮಂಗಳೂರು ಕೆ.ಎಂ.ಎಫ್ ನಿರ್ದೇಶಕ ಸುಧಾಕರ್ ಶೆಟ್ಟಿ,ಕರಿಯಣ್ಣ ಶೆಟ್ಟಿ ಹೆಣ್ಣೊಟ್ಟುಗುತ್ತು ಮುಡಾರು,ನಾಭಿರಾಜ್ ಹೆಗ್ಡೆ ಹಲೆಕ್ಕಿ,ಮುಡಾರು,ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಅಸೋಸಿಯೇಷನ್ ರಿ. ಬೆಂಗಳೂರು ಇದರ ರಾಜ್ಯಾಧ್ಯಕ್ಷ ಡಾ.ರವೀಂದ್ರ ಶೆಟ್ಟಿ ಬಜಗೋಳಿ,ಕಾರ್ಕಳ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎ. ಲೋಕೇಶ್,ಶರತ್ ಕುಮಾರ್ ಶೆಟ್ಟಿ ಕೊಟ್ರಾಡಿ ಮುಡಾರು,ಯಕ್ಷ ಕಲಾರಂಗ ಕಾರ್ಕಳ ಇದರ ಪ್ರಧಾನ ಕಾರ್ಯದರ್ಶಿ ಮಹಾವೀರ್ ಪಾಂಡಿ,ಶಾಲಾ ಹಿತೈಷಿ ದಿವಾಕರ್ ಶೇರ್ವೆಗಾರ್ ಉಪಸ್ಥಿತಲಿರಲಿದ್ದಾರೆ.
ರಾತ್ರಿ ಗಂಟೆ 9.30ರಿಂದ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾತ್ರಿ ಗಂಟೆ 10.00ಕ್ಕೆ ಪಿಂಗಾರ ಕಲಾವಿದರು ಬೆದ್ರ ಇವರಿಂದ ‘ಪುದರ್ ಎಂಚ ದೀವೊಡು’ ನಾಟಕ ಪ್ರದರ್ಶನಗೊಳ್ಳಲಿದೆ.