ಕಾರ್ಕಳ:ಅಕ್ರಮ ಮರಳು ಸಾಗಾಟ,5 ಲಾರಿ ವಶಕ್ಕೆ
ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ 5 ಲಾರಿಗಳನ್ನು ಕಾರ್ಕಳ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.ನಗರ ಪೊಲೀಸ್ ಠಾಣೆ ಎಸೈ ಸಂದೀಪ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು ಮೂರು ಲಾರಿಗಳನ್ನು ಭವಾನಿ ಮಿಲ್ಲು ಬಳಿ ಹಾಗೂ ಎರಡು ಲಾರಿಗಳನ್ನು ಕುಕ್ಕುಂದೂರು ಗ್ರಾಮದ ನಕ್ರೆ ಜಂಕ್ಷನ್ ಬಳಿ ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಾದ ಮಹಮ್ಮದ್,ರೆಂಜಾಳದ ಸಿರಾಜುದ್ದೀನ್(25), ಬಜಗೋಳಿಯ ಅಯೂಬ್(29),ಪೊಳಲಿಯ ಮೊಹಮ್ಮದ್ ಆಶೀಕ್(22),ಅಡ್ಡೂರಿನ ನಿಯಾಸ್,ಮಂಗಳೂರಿನ ನಪೂಲ್,ಮೊಗರು ಗ್ರಾಮದ ಅಬ್ದುಲ್ ಮನ್ಸೂರ್ (36) ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಕಳ ನಗರ ಪೊಲೀಸ್ ಉಪನಿರೀಕ್ಷಕ ಸಂಧೀಪ್ ಕುಮಾರ್ ಬೆಳ್ಳಂಬೆಳಗ್ಗೆ 6:00 ಗಂಟೆಗೆ ಕಾರ್ಯಾಚರಣೆ ನಡೆಸಿದ್ದು ಆರೋಪಿಗಳು ಮಂಗಳೂರು ತಾಲೂಕಿನ ಅಡ್ಡೂರು ಗ್ರಾಮದ ಪಲ್ಗುಣಿ ಹೊಳೆಯ ಸರಕಾರಿ ಸ್ಥಳದಲ್ಲಿ ತೆಗೆದ ಮರಳನ್ನು ಯಾವುದೇ ಪರವಾನಿಗೆ ಇರದೇ ಕಾರ್ಕಳಕ್ಕೆ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ.ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.