ಕಾರ್ಕಳ:ಛತ್ರಪತಿ ಫೌಂಡೇಶನ್ ಟಿ ಶರ್ಟ್ ಬಿಡುಗಡೆ
ಛತ್ರಪತಿ ಫೌಂಡೇಶನ್ ಟ್ರಸ್ಟ್ ವತಿಯಿಂದ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಹಾಗೂ ಕ್ರೀಡಾ ಪ್ರೋತ್ಸಾಹಕರಿಗೆ ಟೀ ಶರ್ಟು ನೀಡಿ ಪ್ರೋತ್ಸಾಹಿಸುವ ಕಾರ್ಯಕ್ರಮಕ್ಕೆ ಛತ್ರಪತಿ ಫೌಂಡೇಶನ್ ವತಿಯಿಂದ ಚಾಲನೆ ನೀಡಲಾಯಿತು.ಈ ಕಾರ್ಯಕ್ರಮವನ್ನು ಛತ್ರಪತಿ ಶಿವಾಜಿ ಜಯಂತಿ ಆಚರಣೆಯ ಸಂದರ್ಭದಲ್ಲಿ ನೆರವೇರಿಸಲಾಯಿತು.
ಛತ್ರಪತಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಗಿರೀಶ್ ರಾವ್ ಹಾಗೂ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರರಾದ ಶ್ರೀರಾಮಚಂದ್ರ ರಾವ್, ದಯಾನಂದರಾವ್, ಸುಧೀಂದ್ರ ರಾವ್ ಹಾಗೂ ಸುರೇಂದ್ರ ರಾವ್ ಪ್ರಕಾಶ್ ರಾವ್ ಹಾಗೂ ಇನ್ನಿತರರು ಉಪಸ್ತಿತರಿದ್ದರು.