ಎಂಪಿಎಂ ಸರಕಾರಿ ಕಾಲೇಜಿನ ಪೂರ್ವ ವಿದ್ಯಾರ್ಥಿನ ಸೌಮ್ಯ ಹೆಗ್ಡೆಗೆ ಪಿ.ಹೆಚ್.ಡಿ
ಕಾರ್ಕಳದ ಎಂಪಿಎಂ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪೂರ್ವ ವಿದ್ಯಾರ್ಥಿನಿ, ಮಂಗಳೂರಿನ ಎಸ್.ಡಿ.ಎಂ ಕಾಲೇಜು ಆಫ್ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ನ ಉಪನ್ಯಾಸಕಿ ಸೌಮ್ಯ ಹೆಗ್ಡೆಯವರು, ಪ್ರೊ. ವೇದವ ಪಿ. ಪ್ರಾದ್ಯಾಪಕರು ವಾಣಿಜ್ಯ ಶಾಸ್ತ್ರ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ಕಾಂಪಿಟೆನ್ಸಿ ಮ್ಯಾಪಿಂಗ್ ಆಫ್ ಬ್ಯಾಂಕಿಂಗ್ ಎಂಪ್ಲೋಯೀಸ್ ಆಂಡ್ ಇಟ್ಸ್ ಇಂಪಾಕ್ಟ್ ಆನ್ ಆರ್ಗನೈಶೇಷನಲ್ ಇಫೆಕ್ಟಿವಿನೆಸ್ ವಿದ್ ರೆಫರೆನ್ಸ್ ಟು ಬ್ರಾಂಚಸ್ ಆಫ್ ಕೆನರಾ ಬ್ಯಾಂಕ್ ಇನ್ ಡಿ. ಕೆ ಡಿಸ್ಟ್ರಿಕ್ಟ್ ” ಎಂಬ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಪ್ರತಿಷ್ಠಿತ ಮಂಗಳೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿರುತ್ತದೆ. ಇವರು ಹೆಬ್ರಿ ಮೇಲ್ಮಡಿಗೆ ಸದಾನಂದ ಹೆಗ್ಡೆ ಮತ್ತು ವಿಶಾಲಾಕ್ಷಿ ಹೆಗ್ಡೆ ದಂಪತಿಯ ಸುಪುತ್ರಿ ಹಾಗೂ ಶ್ರೀ ನವೀನ್ ಹೆಗ್ಡೆ, ಮಂಗಳೂರು ಇವರ ಧರ್ಮಪತ್ನಿ.