ಕಾರ್ಕಳ:ಕಾರು-ಬೈಕ್ ಡಿಕ್ಕಿ
ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಗಾಯಗೊಂಡ ಘಟನೆ ಕಾರ್ಕಳ ಬೈಪಾಸ್ ಬಳಿ ನಡೆದಿದೆ.ಇರ್ವತ್ತೂರು ಗ್ರಾಮದ ಪ್ರಶಾಂತ್ (29) ಗಾಯಗೊಂಡವರು.
ಪ್ರಶಾಂತ್ ರವರು ಮೇ.24ರಂದು ಬೆಳಿಗ್ಗೆ ಬೈಪಾಸ್ ಬಳಿ ಇರುವ ವಿಶಾಲ್ ಗ್ಯಾರೇಜ್ ಬಳಿ ಬೈಕ್ ನಲ್ಲಿ ಹೋಗುತ್ತಿರುವಾಗ ಕಾರು ಚಾಲಕನು ಕಾರನ್ನು ಬೈಕ್ ನ ಎದುರುಗಡೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಯಾವುದೇ ಮುನ್ಸೂಚನೆ ನೀಡದೇ ಒಮ್ಮೆಲೇ ರಸ್ತೆಯ ಮದ್ಯದಲ್ಲಿ ಬೈಪಾಸ್ ಕಡೆಗೆ ತಿರುಗಿಸಿ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ.
ಪರಿಣಾಮವಾಗಿ ಬೈಕ್ ಚಾಲಕ ಪ್ರಶಾಂತ್ ಗಾಯಗೊಂಡಿದ್ದು,ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.