ಪ್ರಸಾದ ಕೊಡುತ್ತೇನೆ ಎಂದು ಕರೆಸಿಕೊಂಡು ತನ್ನಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದು ಈ ಸಂಬಂಧ ಕೂಡಲಸಂಗಮದ ಪಂಚಮಸಾಲಿ ಲಿಂಗಾಯತ ಮಹಾಪೀಠದ (ಉಚ್ಚಾಟಿತ) ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ದ ಮಹಿಳೆಯೊಬ್ಬರು ರಾಜ್ಯ ಮಾನವ ಹಕ್ಕು ಮಹಿಳಾ ಆಯೋಗ, ಮುಖ್ಯಮಂತ್ರಿ, ಗೃಹ ಸಚಿವಾಲಯ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ದೂರುದಾರ ಮಹಿಳೆ ವಿರುದ್ಧ ವಿಜಯಪುರ ಜಿಲ್ಲೆಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎ.4ರಂದು ದೂರು ನೀಡಿದ ಬೆನ್ನಲ್ಲೇ ಎ.6ರಂದು ಮಾನವ ಹಕ್ಕು ಆಯೋಗ, ಮಹಿಳಾ ಆಯೋಗ, ಸಿಎಂ, ಗೃಹ ಸಚಿವಾಲಯ, ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಮಹಿಳೆ ದೂರು ನೀಡಿದ್ದಾರೆ.



















