Thursday, September 19, 2024
Google search engine
Homeಕಾರ್ಕಳಕೊಲೆ,ಕಳ್ಳತನ ಆರೋಪಿ ಬೆಳ್ಮಣ್ ಮೂಲದ ರೋಹಿತ್ ಮಥಾಯಿಸ್ ಬಂಧನ ಕಂಕನಾಡಿ ನಗರ ಪೊಲೀಸ್...

ಕೊಲೆ,ಕಳ್ಳತನ ಆರೋಪಿ ಬೆಳ್ಮಣ್ ಮೂಲದ ರೋಹಿತ್ ಮಥಾಯಿಸ್ ಬಂಧನ ಕಂಕನಾಡಿ ನಗರ ಪೊಲೀಸ್ ಠಾಣೆಯ ನಿರೀಕ್ಷಕರಾದ ನಾಗರಾಜ್ ಟಿ.ಡಿ ನೇತೃತ್ವದ ತಂಡದಿಂದ ಕಾರ್ಯಾಚರಣೆ

ಕೊಲೆ,ಕಳ್ಳತನ ಆರೋಪಿ ಬೆಳ್ಮಣ್ ಮೂಲದ ರೋಹಿತ್ ಮಥಾಯಿಸ್ ಬಂಧನ

ಕಂಕನಾಡಿ ನಗರ ಪೊಲೀಸ್ ಠಾಣೆಯ ನಿರೀಕ್ಷಕರಾದ ನಾಗರಾಜ್ ಟಿ.ಡಿ ನೇತೃತ್ವದ ತಂಡದಿಂದ ಕಾರ್ಯಾಚರಣೆ

ಮಂಗಳೂರು:ಕುಲಶೇಖರ ಮನೆಯೊಂದರಲ್ಲಿ 2021 ರಂದು ನಡೆದಿದ್ದ ಚಿನ್ನಾಭರಣ ಕಳವು ಪ್ರಕರಣದ ಆರೋಪಿಯನ್ನು ಕಂಕನಾಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಕಳ ಬೆಳ್ಮಣ್ ಮಟ್ಕಕೆರೆ ಹೌಸ್ ರೋಹಿತ್ ಮುತ್ತಾಯಸ್ ಬಂಧಿತ ಆರೋಪಿ.ಆತನಿಂದ ಪ್ರಕರಣಕ್ಕೆ ಸಂಬಂಧಿಸಿದ 7 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿ ರೋಹಿತ್ ಮಥಾಯೀಸ್ ನು 2019 ರಲ್ಲಿ ಕಾರ್ಕಳ ಗ್ರಾಮಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಣ ಮತ್ತು ಚಿನ್ನಾಭರಣಗಳ ಆಸೆಗಾಗಿ ತನ್ನ ನೆರೆಕರೆಯವಾರದ ಶ್ರೀಮತಿ ಭರತಲಕ್ಷ್ಮಿ (ನಿವೃತ್ತ ಪಿ.ಡಿ.ಓ) ರವರನ್ನು ಬೆಳ್ಮಣ ಗ್ರಾಮದಲ್ಲಿನ ಮನೆಯಲ್ಲಿ ಕೊಲೆ ಮಾಡಿ, ಅವರ ಮೃತ ದೇಹವನ್ನು ಕಲ್ಯಾದ ಬಾವಿಯೊಂದರಲ್ಲಿ ಪ್ಲಾಸ್ಟಿಕ್ ನಲ್ಲಿ ಸುತ್ತಿ ಎಸೆದು ಹೋದ ಪ್ರಕರಣದಲ್ಲಿ ಬಂಧನವಾಗಿ ಜೈಲುವಾಸ ಅನುಭವಿಸಿ, ನಂತರ ಪ್ರಕರಣದ ವಿಚಾರಣೆಗೆ ಸಿಗದೇ 2 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಈತನು ತನ್ನ ಸಮುದಾಯಯ ಮಹಿಳೆಯರನ್ನು ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯಿಸಿಕೊಂಡು ಅವರ ವಿಶ್ವಾಸಗಳಿಸಿ, ನಂತರ ಅವರ ನಗದು ಹಣ ಹಾಗೂ ಚಿನ್ನಾಭರಣಗಳನ್ನುಕಳವು ಮಾಡಿಕೊಂಡು ಪರಾರಿಯಾಗುವ ಸ್ವಭಾವದವನಾಗಿದ್ದ. ಈ ಪ್ರಯತ್ನದಲ್ಲಿರುವಾಗಲೇ ಕಂಕನಾಡಿ ನಗರ ಪೊಲೀಸರು ಮಾಹಿತಿಗಳ ಆಧಾರದಲ್ಲಿ ಮುಂಬೈನಿಂದ ಮಂಗಳೂರಿಗೆ ಬಂದಿರುವ ಮಾಹಿತಿ ಆಧಾರದಲ್ಲಿ ವಶಕ್ಕೆ ಪಡೆದುಕೊಂಡಿರುವುದಾಗಿದೆ.

ಕಂಕನಾಡಿ ನಗರ ಪೊಲೀಸ್ ಠಾಣೆಯ ನಿರೀಕ್ಷಕರಾದ ನಾಗರಾಜ್ ಟಿ.ಡಿ ರವರ ನೇತೃತ್ವದಲ್ಲಿ ಪಿ.ಎಸ್.ಐ ರವರುಗಳಾದ ವಿನಾಯಕ ಭಾವಿಕಟ್ಟಿ, ಶಿವಕುಮಾರ್, ಯೊಗೀಶ್ವರನ್ ಹಾಗೂ ಹೆಚ್.ಸಿ ಜಯಾನಂದ ಮತ್ತು ಸಿಬ್ಬಂಧಿಗಳಾದ ರಾಘವೇಂದ್ರ, ಗಂಗಾಧರ್, ರಾಜೆಸಾಬ ಮುಲ್ಲಾ, ಚೇತನ್, ಮುತ್ತಣ್ಣ ಮತ್ತು ಪ್ರವೀಣ್ ರವರು ಆರೋಪಿತನ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments