Home Blog Page 64

ಕೆ.ಸಿ.ಇ.ಟಿ ಫಲಿತಾಂಶ: ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಸುಮಂತ್ ರಾಜ್ಯಕ್ಕೆ 4 ನೇ ರ‍್ಯಾಂಕ್‌

0

ಕೆ.ಸಿ.ಇ.ಟಿ ಫಲಿತಾಂಶ: ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಸುಮಂತ್ ರಾಜ್ಯಕ್ಕೆ 4 ನೇ ರ‍್ಯಾಂಕ್‌

ಏಪ್ರಿಲ್ 15,16 ಮತ್ತು 17 ರಂದು ನಡೆದ ಕೆ.ಸಿ.ಇ.ಟಿ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪಿ.ಯು. ಕಾಲೇಜು ರಾಜ್ಯ ಮಟ್ಟದ 100 ರ‍್ಯಾಂಕ್‌ನೊಳಗೆ 14 ಸ್ಥಾನ ಪಡೆಯುವ ಮೂಲಕ ಅದ್ಭುತ ಸಾಧನೆ ಮಾಡಿದೆ.
ಪ್ರಸ್ತುತ ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಸೇರಿದಂತೆ ಹಲವು ಪ್ರಮುಖ ಕೋರ್ಸ್‌ಗಳಿಗೆ ಸೇರಲು ನಡೆಯುವ ರಾಜ್ಯಮಟ್ಟದ ಪ್ರವೇಶ ಪರೀಕ್ಷೆಯಲ್ಲಿ, ಕಾಲೇಜಿನ ಸುಮಂತ್ ಗೌಡ ಎಸ್ ದಾನಪ್ಪಗೌಡರ್ ಕೃಷಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 4ನೇ ರ‍್ಯಾಂಕ್‌, ಬಿ.ಎನ್.ವೈ.ಎಸ್. ವಿಭಾಗದಲ್ಲಿ 9ನೇ ರ‍್ಯಾಂಕ್‌, ಬಿ.ಎಸ್.ಸಿ. ನರ್ಸಿಂಗ್ ವಿಭಾಗದಲ್ಲಿ 18 ನೇ ರ‍್ಯಾಂಕ್‌, ಪಶು ವೈದ್ಯಕೀಯ ವಿಭಾಗದಲ್ಲಿ 18ನೇ ರ‍್ಯಾಂಕ್‌, B/ D-ಫಾರ್ಮ್ ವಿಭಾಗಗಳಲ್ಲಿ 25 ನೇ ರ‍್ಯಾಂಕ್‌ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ 34ನೇ ರ‍್ಯಾಂಕ್‌ ಗಳಿಸಿದ್ದಾರೆ.
ಹಾಗು ವಿದ್ಯಾರ್ಥಿ ಹೆಚ್ ಎ ರಾಜೇಶ್ ಬಿ.ಎನ್.ವೈ.ಎಸ್. ವಿಭಾಗದಲ್ಲಿ 35ನೇ ರ‍್ಯಾಂಕ್‌, ಬಿ.ಎಸ್.ಸಿ. ನರ್ಸಿಂಗ್ ವಿಭಾಗ ಮತ್ತು ಪಶು ವೈದ್ಯಕೀಯ ವಿಭಾಗದಲ್ಲಿ 52ನೇ ರ‍್ಯಾಂಕ್‌, B/ D-ಫಾರ್ಮ್ ವಿಭಾಗಗಳಲ್ಲಿ 62 ನೇ ರ‍್ಯಾಂಕ್‌ ಪಡೆದು ಶ್ಲಾಘನೀಯ ಸಾಧನೆ ಮಾಡಿದ್ದಾರೆ.

ಇಂಜಿನಿಯರಿಂಗ್ ವಿಭಾಗದಲ್ಲಿ ವಿದ್ಯಾರ್ಥಿಗಳಾದ ಮೋನಿಕಾ ಕೆ. ಪಿ 84ನೇ ರ‍್ಯಾಂಕ್, ಅಭಿನಂದನ್ ಭರಮಪ್ಪ 288 ನೇ ರ‍್ಯಾಂಕ್, ಪ್ರಜ್ವಲ್ ಎಸ್ ಎನ್ 438 ನೇ ರ‍್ಯಾಂಕ್, ಎನ್ ಸಮರ್ಥನ್ 534 ನೇ ರ‍್ಯಾಂಕ್ ಹಾಗೂ ಚೈತನ್ಯ ಜಿ 744 ನೇ ರ‍್ಯಾಂಕ್ ಗಳಿಸಿದ್ದಾರೆ.

ನ್ಯಾಚುರೋಪತಿ ವಿಭಾಗದಲ್ಲಿ ಪ್ರಜ್ವಲ್ ಎಸ್ ಎನ್ 60 ನೇ ರ‍್ಯಾಂಕ್, ಅಭಿನಂದನ್ ಭರಮಪ್ಪ 94 ನೇ ರ‍್ಯಾಂಕ್,
ಗಣೇಶ್ ಜಿ 276ನೇ ರ‍್ಯಾಂಕ್‌,
ಚೈತನ್ಯ ಜಿ 336 ನೇ ರ‍್ಯಾಂಕ್, ಹೇಮಂತ್ ಕುಮಾರ್ 420 ನೇ ರ‍್ಯಾಂಕ್, ಶ್ರೀನಿಧಿ 469 ನೇ ರ‍್ಯಾಂಕ್,
ಧ್ರುವ 444 ನೇ ರ‍್ಯಾಂಕ್ ಹಾಗೂ ಬಿಂದುಪ್ರಿಯ 482 ನೇ ರ‍್ಯಾಂಕ್ ಪಡೆದಿದ್ದಾರೆ.

ಕೃಷಿ ವಿಭಾಗದಲ್ಲಿ ಅಭಿನಂದನ್ ಭರಮಪ್ಪ 60 ನೇ ರ‍್ಯಾಂಕ್, ಪ್ರಜ್ವಲ್ ಎಸ್ ಎನ್ 75 ನೇ ರ‍್ಯಾಂಕ್,
ಚೈತನ್ಯ ಜಿ 123 ನೇ ರ‍್ಯಾಂಕ್, ಗಣೇಶ್ ಜಿ 298 ನೇ ರ‍್ಯಾಂಕ್,
ಬಿಂದುಪ್ರಿಯ 259ನೇ ರ‍್ಯಾಂಕ್ , ಭರತ್ ಕೆ 275 ನೇ ರ‍್ಯಾಂಕ್,
ಹೇಮಂತ್ ಕುಮಾರ್ 326 ನೇ ರ‍್ಯಾಂಕ್, ಶ್ರೀನಿಧಿ 347 ನೇ ರ‍್ಯಾಂಕ್
ಸಂಜನಾ ಕೆ ಆರ್ 337 ನೇ ರ‍್ಯಾಂಕ್, ಪ್ರೇರಣಾ ಪಾಂಡುರಂಗ 428 ನೇ ರ‍್ಯಾಂಕ್,ಹೇಮಂತ್ ಕುಮಾರ್ 420 ನೇ ರ‍್ಯಾಂಕ್, ಸಂಗೀತ ಎಂ 426 ನೇ ರ‍್ಯಾಂಕ್
ಧ್ರುವ 440 ನೇ ರ‍್ಯಾಂಕ್ ಪಡೆದಿದ್ದಾರೆ.

ಪಶು ವೈದ್ಯಕೀಯದಲ್ಲಿ ಪ್ರಜ್ವಲ್ ಎಸ್ ಎನ್ 78 ನೇ ರ‍್ಯಾಂಕ್, ಅಭಿನಂದನ್ ಭರಮಪ್ಪ 116 ನೇ ರ‍್ಯಾಂಕ್, ಧ್ರುವ 238ನೇ ರ‍್ಯಾಂಕ್
ಸಾತ್ವಿಕ್ ಭಂಡಾರಿ 362ನೇ ರ‍್ಯಾಂಕ್, ಪಡೆದಿದ್ದಾರೆ.

ನರ್ಸಿಂಗ್ ವಿಭಾಗದಲ್ಲಿ ಪ್ರಜ್ವಲ್ ಎಸ್ ಎನ್ 78 ನೇ ರ‍್ಯಾಂಕ್, ಅಭಿನಂದನ್ ಭರಮಪ್ಪ 117 ನೇ ರ‍್ಯಾಂಕ್,
ಧ್ರುವ 240 ನೇ ರ‍್ಯಾಂಕ್, ಸಾತ್ವಿಕ್ ಭಂಡಾರಿ 365ನೇ ರ‍್ಯಾಂಕ್, ಪಡೆದಿದ್ದಾರೆ.

ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕ್ರಿಯೇಟಿವ್ ಕಾಲೇಜಿನ 14 ವಿದ್ಯಾರ್ಥಿಗಳು 100 ರ ರ‍್ಯಾಂಕ್ ಒಳಗಿನ 156 ವಿದ್ಯಾರ್ಥಿಗಳು 1000 ರ‍್ಯಾಂಕ್‌ನೊಳಗೆ, 302 ವಿದ್ಯಾರ್ಥಿಗಳು 2000 ರ‍್ಯಾಂಕ್‌ನೊಳಗೆ ಸ್ಥಾನ ಗಳಿಸಿಕೊಂಡಿದ್ದಾರೆ.

ಕಾಲೇಜು ನಿರಂತರ ನಾಲ್ಕು ವರ್ಷಗಳಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ದಾಖಲಿಸಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.

ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿ, ಸಂತಸ ವ್ಯಕ್ತಪಡಿಸಿದ್ದಾರೆ.

 

”ಯಾವುದೇ ರಿಯಾಯಿತಿಯನ್ನು ರದ್ದು ಮಾಡಿಲ್ಲ”-ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ವೇದವ್ಯಾಸ ಕಾಮತ್ ಅವರು ಮಾಹಿತಿಯ ಕೊರತೆ

0

ಖಾಸಗಿ ಸಂಘ, ಸಂಸ್ಥೆಗಳು ಆಯೋಜಿಸುವ ತುಳು ಭಾಷೆ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಮಂಗಳೂರಿನ ತುಳು ಭವನದಲ್ಲಿ ವಿಶೇಷವಾಗಿ ಶೇ.50ರಷ್ಟು ರಿಯಾಯಿತಿಯಲ್ಲಿ ಸಭಾಂಗಣವನ್ನು ನೀಡಲಾಗುತ್ತಿದೆ. ಯಕ್ಷಗಾನ, ನಾಟಕ ಆಯೋಜಿಸುವವರಿಗೆ ಇನ್ನೂ ಹೆಚ್ಚಿನ ರಿಯಾಯಿತಿಯಲ್ಲಿ ಸಭಾಂಗಣವನ್ನು ಒದಗಿಸಲಾಗುತ್ತದೆ. ಯಾವುದೇ ರಿಯಾಯಿತಿಯನ್ನು ರದ್ದು ಮಾಡಿಲ್ಲ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಘ ಸಂಸ್ಥೆಗಳು ಅಕಾಡೆಮಿಯೊಂದಿಗೆ ಸಹಭಾಗಿತ್ವದಲ್ಲಿ ನಡೆಸುವ ಕಾರ್ಯಕ್ರಮಗಳಿಗೆ ಉಚಿತವಾಗಿ ಸಭಾಂಗಣ ಒದಗಿಸಲಾಗುತ್ತದೆ. ಸಾಹಿತ್ಯ, ಸಾಂಸ್ಕೃತಿಕ ಹೊರತುಪಡಿಸಿದ ಖಾಸಗಿ ಕಾರ್ಯಕ್ರಮಗಳಿಗೆ ಮಾತ್ರ ಪೂರ್ತಿ ಬಾಡಿಗೆ ಪಡೆಯಲಾಗುತ್ತಿದೆ. ಯಾವುದೇ ಸಂಘ, ಸಂಸ್ಥೆಗಳು ನಡೆಸುವ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಸರ್ಟಿಫಿಕೇಟ್ ನೀಡುವುದು ಅಕಾಡೆಮಿ ಕಾರ್ಯವ್ಯಾಪ್ತಿಗೆ ಸಂಬಂಧಿಸಿದ ವಿಚಾರವಾಗಿರುವುದಿಲ್ಲ ಅಥವಾ ಅಕಾಡೆಮಿಯು ಪರೀಕ್ಷೆ ಪ್ರಾಧಿಕಾರವಾಗಿರುವುದಿಲ್ಲ. ಅಕಾಡೆಮಿಯ ವತಿಯಿಂದ ನೇರವಾಗಿ ಅಥವಾ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಸುವ ತರಬೇತಿ ಶಿಬಿರ, ಕಮ್ಮಟ, ಸೆಮಿನಾರ್‌ಗಳಲ್ಲಿ ಭಾಗವಹಿಸುವವರಿಗೆ ಸರ್ಟಿಫಿಕೇಟ್ ಆಯಾ ಸಂದರ್ಭದಲ್ಲಿ ನೀಡಲಾಗುತ್ತಿದೆ.

ತುಳು ಮಾತೃ ಭಾಷಾ ಪ್ರಮಾಣ ಪತ್ರವನ್ನು (ತುಳು ಕೋಟ ಸರ್ಟಿಫಿಕೇಟ್) ಆಯಾ ವಿದ್ಯಾರ್ಥಿಗಳು ವಾಸಿಸುವ ತಾಲೂಕಿನ ತಹಶೀಲ್ದಾರರು ನೀಡುವವರಾಗಿದ್ದು, ಎಲ್ಲಾ ತಾಲೂಕುಗಳಲ್ಲಿ ಭಾಷಾ ಪ್ರಮಾಣ ಪತ್ರ ನೀಡಲಾಗುತ್ತಿದೆ. ಭಾಷಾ ಪ್ರಮಾಣ ಪತ್ರ ನೀಡುವ ಅಧಿಕಾರ ತಾಲೂಕು ದಂಡಾಧಿಕಾರಿಗಳ ವ್ಯಾಪ್ತಿಗೆ ಸೇರಿದ್ದಾಗಿರುತ್ತದೆ. ಕರ್ನಾಟಕದ ಯಾವುದೇ ಅಕಾಡೆಮಿಯು ವಿದ್ಯಾರ್ಥಿಗಳಿಗೆ ಭಾಷಾ ಪ್ರಮಾಣ ನೀಡುವ ಸಕ್ಷಮ ಪ್ರಾಧಿಕಾರವಾಗಿರುವುದಿಲ್ಲ. ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಈ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಭಾಷಾ ಪ್ರಮಾಣ ಪತ್ರದ ಅರ್ಜಿ ನಮೂನೆಯನ್ನು ತುಳು ಅಕಾಡೆಮಿಯ ನೋಟಿಸ್ ಬೋರ್ಡ್‌ನಲ್ಲಿ ಲಗತ್ತಿಸಲಾಗಿರುತ್ತದೆ.

ವಿದ್ಯಾರ್ಥಿಗಳು ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರವನ್ನು ಪಡೆಯುವ ರೀತಿಯಲ್ಲೇ ಮಾತೃ ಭಾಷಾ ಪ್ರಮಾಣ ಪತ್ರವನ್ನು ಪಡೆಯಲು ಅವಕಾಶ ಇರುವಂತಹದು. ಶಾಲಾ ದಾಖಲಾತಿ ವಿವರದೊಂದಿಗೆ ತಹಶೀಲ್ದಾರರ ಕಚೇರಿಗೆ ಅರ್ಜಿ ಸಲ್ಲಿಸಿದಾಗ ಭಾಷಾ ಪ್ರಮಾಣ ಪತ್ರವನ್ನು ತಹಶೀಲ್ದಾರರು ನೀಡುತ್ತಾರೆ. ತುರ್ತು ಸಂದರ್ಭದಲ್ಲಿ ಅರ್ಜಿ ಸಲ್ಲಿಸಿದ ದಿನದಂದೇ ಈ ಪ್ರಮಾಣ ಪತ್ರವನ್ನು ನೀಡುತ್ತಾರೆ. ತಹಶೀಲ್ದಾರರ ಹೊರತುಪಡಿಸಿ ಯಾರೇ ನೀಡುವ ಮಾತೃ ಭಾಷಾ ಸರ್ಟಿಫಿಕೇಟ್‌ಗೆ ಕಾನೂನಿನ ಮಾನ್ಯತೆ ಇರುವುದಿಲ್ಲ. ಈ ಮೇಲಿನ ಎಲ್ಲ ವಿಚಾರಗಳ ಬಗ್ಗೆ ಮಂಗಳೂರು ದಕ್ಷಿಣದ ಶಾಸಕ ವೇದವ್ಯಾಸ ಕಾಮತ್ ಅವರು ಮಾಹಿತಿಯ ಕೊರತೆಯಿಂದ ವಾಸ್ತವ ಅಲ್ಲದ ಹೇಳಿಕೆಯನ್ನು ನೀಡಿರುವುದರಿಂದ ಈ ಸ್ಪಷ್ಟೀಕರಣವನ್ನು ನೀಡುವುದು ಅಗತ್ಯವಾಯಿತು ಎಂದು ತಾರಾನಾಥ ಗಟ್ಟಿ ಕಾಪಿಕಾಡ್ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಕಾದಂಬರಿಯು ನಮ್ಮ ಜೀವನದ ಪ್ರತಿಬಿಂಬ-ಡಾ. ವಸಂತ್ ಕುಮಾರ್ ಪೆರ್ಲ ಕೆ. ಬಾಲಕೃಷ್ಣ ರಾವ್ ಬರೆದ ‘ಪಥ’ ಕಾದಂಬರಿ ಬಿಡುಗಡೆ

0

ಕಾದಂಬರಿಯು ನಮ್ಮ ಜೀವನದ ಪ್ರತಿಬಿಂಬ-ಡಾ. ವಸಂತ್ ಕುಮಾರ್ ಪೆರ್ಲ

ಕೆ. ಬಾಲಕೃಷ್ಣ ರಾವ್ ಬರೆದ ‘ಪಥ’ ಕಾದಂಬರಿ ಬಿಡುಗಡೆ

‘ಕಾದಂಬರಿಯು ನಮ್ಮ ಜೀವನದ ಕನ್ನಡಿ, ಇದು ಸಮಾಜವನ್ನು ಒಂದುಗೂಡಿಸುವ ಸರಪಳಿಯ ಕೊಂಡಿ’ ಎಂದು ಮಂಗಳೂರು ಆಕಾಶವಾಣಿಯ ವಿಶ್ರಾಂತ ನಿಲಯ ನಿರ್ದೇಶಕ ಡಾ. ವಸಂತ್ ಕುಮಾರ್ ಪೆರ್ಲಅಭಿಪ್ರಾಯಪಟ್ಟರು.ಅವರು ಕೆ. ಬಾಲಕೃಷ್ಣ ರಾವ್ ಇವರು ಬರೆದಿರುವ ‘ಪಥ’ ಕಾದಂಬರಿಯ ಲೋಕಾರ್ಪಣೆಗೊಳಿಸಿ ಮಾತನಾಡಿದರು.

”ಇಂದು ನಾವು ಸಂಬಂಧಗಳ ಕೊಂಡಿಯನ್ನು ಕಳೆದುಕೊಂಡಿದ್ದೇವೆ. ಒಂದೇ ಮನೆಯಲ್ಲಿದ್ದರೂ ಅಪರಿಚಿತರಾಗಿ ಬದುಕುತ್ತಿದ್ದೆವೆ.ಮಕ್ಕಳು ಒಂದು ಕಡೆ, ತಂದೆ ತಾಯಿ ಇನ್ನೊಂದು ಕಡೆ.ಹೀಗೆ ಬೇರೆ ಬೇರೆ ಕಡೆ ಚದುರಿ ಹೋಗಿರುವುದರಿಂದ ಭಾವನೆಗಳಿಗೆ ಬೆಲೆ ಇಲ್ಲದಾಗಿದೆ.ಮನೆಯೊಳಗೂ ಸದಸ್ಯರು ಮಾತನಾಡಬೇಕಿದ್ರೆ ಮೊಬೈಲ್ ನಲ್ಲಿಯೇ ಮಾತನಾಡುವ ಸಮಯ ಇದಾಗಿದೆ”

”ಕೆ. ಬಾಲಕೃಷ್ಣ ರಾವ್ ಬರೆದ ಕಾದಂಬರಿಯು ಇಂದಿನ ಸಮಾಜಕ್ಕೆ ಎಚ್ಚರಿಕೆಯ ಕರೆಗಂಟೆ ಆಗಿದೆ. ಇವರು ಬರೆದ ‘ಪಥ’ ಕಾದಂಬರಿ ತನ್ನದೇ ಆದ ಶೈಲಿ ಯನ್ನು ಹೊಂದಿದೆ. ಈ ಕಾದಂಬರಿಯಲ್ಲಿ ಬರುವ ಪಾತ್ರಗಳು ನಮ್ಮ ಸುತ್ತ ನಡೆಯುವ ಘಟನೆಗಳನ್ನು ಪ್ರತಿಬಿಂಬಿಸುತ್ತವೆ. ಈ ಕಾದಂಬರಿ ಓದುಗರನ್ನು ವಿಶಿಷ್ಟ ಶೈಲಿಯ ಕಡೆಗೆ ಕೊಂಡೋಯ್ಯುತದೆ” ಎಂದು ಹೇಳಿದರು.

ಡಾ. ಜನಾರ್ದನ ಭಟ್ ರವರು ಮಾತನಾಡಿ ‘ಪಥ’ ಕಾದಂಬರಿಯ ಸಮಗ್ರ ವಿಮರ್ಶೆ ಮಾಡಿದರು. ”ಈ ಕಾದಂಬರಿಯು ಒಟ್ಟಿಗೆ ಐದು ಆಯಾಮಗಳನ್ನು ಹೊಂದಿದ್ದು, ಪ್ರತಿಯೊಂದು ಆಯಾಮಕ್ಕೂ ಸರಪಣಿಗಳ ಕೊಂಡಿಯಂತೆ ಹೆಣಿದುಕೊಂಡಿದೆ. ಪ್ರತಿಯೊಂದು ಆಯಾಮವೂ ಓದುಗರನ್ನು ಓದಿಸಿಕೊಂಡು ಹೋಗುವುದರಲ್ಲಿ ಯಶಸ್ವಿಯಾಗಿದೆ. ನಡು ನಡುವೆ ಇರುವ ತಿರುವುಗಳು ವೈಜ್ಞಾನಿಕವಾಗಿದೆ. ಕೆಲವು ತಮಾಷೆಯ ಸಂಭಾಷಣೆಗಳು ಓದುಗರನ್ನು ಸಂತೋಷಪಡಿಸುತದೆ. ಕಾದಂಬರಿಯ ಕಥೆಯ ನಾಯಕ ಸದಾನಂದನ ಬದುಕಿನ ಏರಿತಗಳು, ಮಗಳು ಶಾರದೆಯ ಜೀವನ ಈಗಿನ ಪರಿಸ್ಥಿತಿಯನ್ನು ಪ್ರತಿಬಿಂಬಿಸುತದೆ. ಸದಾನಂದ ವಿದ್ಯೆಯ ಪಥದೊಂದಿಗೆ ಐಎಎಸ್ ಆಫೀಸರ್ ಆಗಿ ಜೀವನದಲ್ಲಿ ಗೌರವದ ಸ್ಥಾನ ಗಳಿಸುವ ಗುರಿಯನ್ನು ಹೊಂದಿ, ಕೊನೆಗೂ ಅದನ್ನು ಪಡೆದು, ಹಲವಾರು ಸವಾಲುಗಳನ್ನು ಎದುರಿಸಿ ಗೆಲ್ಲುತಾನೇ.ಒಂದು ಕಡೆ ಆಡಳಿತ ವ್ಯವಸ್ಥೆಯಲ್ಲಿ ಎದುರಾಗುವ ಬೆದರಿಕೆ, ಇನ್ನೊಂದು ಕಡೆ ಕುಟುಂಬದಲ್ಲಿ ಉಂಟಾಗುವ ಸೋಲು, ಇವುಗಳನ್ನು ನಿಭಾಯಿಸುವ ರೀತಿ ಕಾದಂಬರಿಯನ್ನು ಕೂತುಹಲದಿಂದ ಓದುಗನನ್ನು ಓದುವಂತೆ ಮಾಡುತದೆ. ಈ ಕಾದಂಬರಿಯ ಕಥೆ ಟಿ. ವಿ. ಸೀರಿಯಲ್ ಅಥವಾ ಚಲನಚಿತ್ರಗಳಿಗೆ ಸರಿಹೊಂದುತ್ತದೆ, ಕಥೆಯ ಕೊನೆಯಲ್ಲಿ ಕಥಾನಾಯಕ, ಅನುಭವಿಸುವ ಏಕಾಂಗೀತನ ಎಲ್ಲರ ಮನೆಯಲ್ಲಿ ಕಂಡುಬರುವ ಸಾಮಾನ್ಯ ದೃಶ್ಯವಾಗಿದೆ” ಎಂದು ಹೇಳಿದರು.

ಕಾರ್ಕಳ ಸಾಹಿತ್ಯ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಫ್ರೋಫೆಸರ್. ಬಿ. ಪದ್ಮನಾಭಗೌಡ ಮಾತನಾಡಿ ‘ಗಣಿತ ಮತ್ತು ಸಾಹಿತ್ಯ ಎರಡನ್ನೂ ಒಗ್ಗೂಡಿಸಿರುವ ಕೆ. ಬಾಲಕೃಷ್ಣ ರಾವ್ ಅವರದ್ದು ವಿಶೇಷ ವ್ಯಕ್ತಿತ್ವ, ವಿದ್ಯಾರ್ಥಿ ದೆಸೆಯಿಂದಲೂ ಇವರು ಕಥೆ, ಕವನ, ಲೀಖನಗಳನ್ನು ಬರೆಯುತಿದ್ದು, ಮಂಗಳೂರು ಆಕಾಶವಾಣಿಯಲ್ಲಿಯೂ ಇವರ ಕಥೆ, ಕವನ, ಚಿಂತನ ಕಾರ್ಯಕ್ರಮಗಳ ಪ್ರಸಾರವಾಗಿದೆ’ ಎಂದು ಹೇಳಿದರು.

ಇತ್ತೀಚಿಗೆ ನಿಧನರಾದ ಸಾಹಿತಿ ಫ್ರೋ.ಹೆರಿಂಜೆ ಕೃಷ್ಣ ಭಟ್ ಮತ್ತು ನಂದಳಿಕೆ ಬಾಲಚಂದ್ರ ರಾವ್ ಇವರಿಗೆ ಶ್ರದ್ದಾಂಜಲಿಯನ್ನು ಅರ್ಪಿಸಲಾಯಿತು.ಪ್ರಾರ್ಥನೆಯನ್ನು ವೈ. ಅನಂತ ಪದ್ಮನಾಭ ಭಟ್ ನೆರವೇರಿಸಿದರು.ವೇದಿಕೆಯಲ್ಲಿ ಕಾರ್ಕಳ ಸಾಹಿತ್ಯ ಸಂಘದ ಕೋಶಧಿಕಾರಿ ನಿತ್ಯಾನಂದ ಪೈ, ಕಾರ್ಕಳ ಸಾಹಿತ್ಯ ಸಂಘದ ಗೌರವಾಧ್ಯಕ್ಷರಾದ ತುಕಾರಾಮ ನಾಯಕ್, ಕೃತಿಕಾರರಾದ ಕೆ. ಬಾಲಕೃಷ್ಣರಾವ್ ಉಪಸ್ಥಿತರಿದ್ದರು.ಡಾ. ಸುಮತಿ. ಪಿ. ಕಾರ್ಯಕ್ರಮ ನಿರೂಪಿಸಿದರು. ಬೇಬಿ. ಕೆ. ಈಶ್ವರ ಮಂಗಳ ಸಹಕರಿಸಿದರು.

ಹೊಸ್ಮಾರು:4 ತರಗತಿ ಕೋಣೆ ನಿರ್ಮಿಸಲು ಭೂಮಿ ಪೂಜೆ

0

ಕರ್ನಾಟಕ ಪಬ್ಲಿಕ್ ಸ್ಕೂಲ್  ಹೊಸ್ಮಾರು ಇಲ್ಲಿ OSAAT ಎಜುಕೇಷನ್ ಚಾರಿಟೇಬಲ್ ಬೆಂಗಳೂರು ಇವರ 119 ನೇ ಪ್ರಾಜೆಕ್ಟ್ ನ್ನು , ದಾನಿಗಳಾದ Rakuten India Enterprise pvt,Ltd Bangalore ಇವರ ನೆರವಿನೊಂದಿಗೆ 4 ತರಗತಿ ಕೋಣೆಗಳನ್ನು ನಿರ್ಮಿಸಲು ಭೂಮಿ ಪೂಜೆ ಯನ್ನು ನೆರವೇರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಜಗದೀಶ್ ಅಂಚನ್, ಈದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸದಾನಂದ ಪೂಜಾರಿ, ಕೆ.ಪಿ.ಎಸ್ ಉಪ ಪ್ರಾಂಶುಪಾಲರಾದ ದಿವಾಕರ ಹೆಗ್ಡೆ, ಪುರುಷೋತ್ತಮ ರಾವ್, ಪ್ರಾಥಮಿಕ ವಿಭಾಗದ ವಿಜಯ ಕುಮಾರ್ ಪಿ, ಭೌತಿಕ ಸೌಲಭ್ಯ ಸಮಿತಿಯ ಅಧ್ಯಕ್ಷರಾದ ರಮೇಶ್ ಕೋಟ್ಯಾನ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ  ಸಂತೋಷ್ ಕುಮಾರ್ ಹಾಗೂ ಎಸ್ ಡಿ ಎಂ ಸಿ ಸದಸ್ಯರು, ಪಂಚಾಯತ್ ಸದಸ್ಯರು, ಪೋಷಕರು, ಹಾಗೂ ಶಿಕ್ಷಕ ಬಂಧುಗಳು ಉಪಸ್ಥಿತರಿದ್ದರು.

ಕಾರ್ಕಳ ಕಾಂಗ್ರೆಸ್ ಕಛೇರಿಯಲ್ಲಿ ಭಾರತ ರತ್ನ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯಸ್ಮರಣೆ

0

ಭಾರತ ರತ್ನ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯಸ್ಮರಣೆ

ರಾಜೀವ್ ಗಾಂಧಿ ಆಧುನಿಕ ಭಾರತದ ರುವಾರಿಯಾಗಿದ್ದರು, ದೇಶದ ಸರ್ವಾಂಗಿಣ ಅಭಿವೃದ್ಧಿಯು ಗ್ರಾಮೀಣ ಅಭಿವೃದ್ಧಿಯನ್ನು ಅವಲಂಬಿಸಿದೆ ಆ ನೆಲೆಯಲ್ಲಿ ಒಬ್ಬ ಪ್ರದಾನಿಯಾಗಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿ ತಂದು ಗ್ರಾಮೀಣ ಮಟ್ಟದ ಬಡ ವರ್ಗದ ಜನರಿಗೆ ಆಡಳಿತ ನಡೆಸುವ ಅದಿಕಾರವನ್ನು ಕೊಟ್ಟವರು ರಾಜೀವ್ ಗಾಂಧಿಯವರು, ಇದು ಪ್ರಜಾತಂತ್ರ ವ್ಯವಸ್ಥೆಯ ಮಾಹಾ‌ ಕ್ರಾಂತಿಗೆ ನಾಂದಿ ಹಾಡಿತ್ತು, ಭಾರತ ಇಂದು ವಿಶ್ವದ ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಅಭಿವೃದ್ಧಿಶೀಲ ರಾಷ್ಟ್ರವಾಗುವಲ್ಲಿ ರಾಜೀವ್ ಗಾಂಧಿಯವರ ಆಡಳಿತಾತ್ಮಕ ದೂರದೃಷ್ಟಿತ್ವವೇ ಕಾರಣವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ ಅಭಿಪ್ರಾಯ ಪಟ್ಡರು ಅವರು ಇಂದು ಕಾರ್ಕಳ ಕಾಂಗ್ರೆಸ್ ಕಛೇರಿಯಲ್ಲಿ ಭಾರತ ರತ್ನ ದಿ. ರಾಜೀವ್ ಗಾಂದಿಯವರ 34 ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅದ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶುಭದರಾವ್ ಮಾತನಾಡಿ 18 ವರ್ಷದ ಯುವ ವರ್ಗಕ್ಕೆ ಮತದಾನದ ಅಧಿಕಾರವನ್ನು‌ ನೀಡಿ ಯುವಕರು ದೇಶದ ರಾಜಕೀಯ ವ್ಯವಸ್ಥೆಯ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ಮಾಡಿಕ್ಕೊಟ್ಟರು, ಬೊಪೋರ್ಸ್ ಎಂಬ ಸುಳ್ಳು ಹಗರಣವನ್ನು ಮುಂದಿಟ್ಟು ಅವರ ತೇಜೋವಧೆಯನ್ನು ಮಾಡಿದರೂ ಅದನ್ನು ಸವಾಲಾಗಿ ಸ್ವೀಕರಿಸಿ ದೇಶದ ಅಖಂಡತೆ ಮತ್ತು ಸೈದಾಂತಿಕ ಬದ್ದತೆಗಾಗಿ ತನ್ನ ಪ್ರಾಣವನ್ನೇ ಮುಡಿಪಾಗಿಟ್ಟು ಹುತಾತ್ಮರಾದರು. ವರ್ತಮಾನದ ರಾಜಕೀಯ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ಭಾರತೀಯರ ಮನಸ್ಸಿನಲ್ಲಿಯು ಅವರ ನೆನಪು ಅಚ್ಚಳಿಯದೆ ಉಳಿದಿದ್ದು ಅವರು ಸಾಧಿಸಿದ ಸಾಧನೆಯ ಮಾರ್ಗಗಳು ಚಿರಸ್ಮರಣೀಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ನಳಿನಿ ಆಚಾರ್ಯ, ವಿವೇಕಾನಂದ ಶೆಣೈ, ಮಹಿಳಾ ಅದ್ಯಕ್ಷೆ ಭಾನು ಬಾಸ್ಕರ್, ಯುವ ಕಾಂಗ್ರೆಸ್ ಅದ್ಯಕ್ಷ ಮಲ್ಲಿಕ್ ಅತ್ತೂರು, ಉಪಾದ್ಯಕ್ಷ ಆಕಾಶ್, ಯುವ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಜೋಗಿ, ನಗರ ಮಹಿಳಾ ಅದ್ಯಕ್ಷೆ ರೀನಾ, ಕಾರ್ಯದರ್ಶಿ ಜೋಕಿಂ ಪಿಂಟೋ, ಶೋಭಾ ಪ್ರಸಾದ್ ಉಪಸ್ಥಿತಿತರಿದ್ದರು, ಭೂನ್ಯಾಯ ಮಂಡಲಿ ಸದಸ್ಯ ಸುನೀಲ್ ಭಂಡಾರಿ ಸ್ವಾಗತಿಸಿ ಕಾಂತಿ ಶೆಟ್ಟಿ ಧನ್ಯವಾದವಿತ್ತರು

ಗ್ಯಾರಂಟಿ ಸರಕಾರಕ್ಕೆ ‌ಎರಡು ವರ್ಷದ‌ ಸಂಭ್ರಮ ನಮ್ಮದು ಮನ್ ಕೀ ಬಾತ್ ಅಲ್ಲ ಕಾಮ್ ಕೀ ಬಾತ್ ಸರಕಾರ-ಶುಭದ್‌ರಾವ್

0

ಗ್ಯಾರಂಟಿ ಸರಕಾರಕ್ಕೆ ‌ಎರಡು ವರ್ಷದ‌ ಸಂಭ್ರಮ

ನಮ್ಮದು ಮನ್ ಕೀ ಬಾತ್ ಅಲ್ಲ ಕಾಮ್ ಕೀ ಬಾತ್ ಸರಕಾರ

ಕರ್ನಾಟಕದ ಜನತೆ ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನಗಳ ಪೂರ್ಣ ಬಹುಮತದೊಂದಿಗೆ ಆಶೀರ್ವದಿಸಿ ಐತಿಹಾಸಿಕ ಗೆಲುವಿನೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಗ್ಯಾರಂಟಿ ಸರ್ಕಾರಕ್ಕೆ ಇದೀಗ ಎರಡನೇ ವರ್ಷದ ಸಂಭ್ರಮ, ಇದು ಕೇವಲ ಕಾಂಗ್ರೆಸ್ ಪಕ್ಷದ ಸಂಭ್ರಮವಲ್ಲ ಬದಲಿಗೆ ಇದು ಕರ್ನಾಟಕ ಜನತೆಯ ಸಂಭ್ರಮ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ್‌ರಾವ್ ಅಭಿಪ್ರಾಯಪಟ್ಟಿದ್ದಾರೆ.

ಪಂಚ ಗ್ಯಾರಂಟಿ ಯೋಜನೆಗಳ ಆಶ್ವಾಸನೆಯೊಂದಿಗೆ ಚುನಾವಣೆ ಎದುರಿಸಿದ ರಾಜ್ಯ ಕಾಂಗ್ರೆಸ್ ಪಕ್ಷವು ಜನತೆಯ ಆಶಯಕ್ಕೆ ಚ್ಯುತಿ ಬಾರದೆ ತನ್ನ ಪಂಚ ಗ್ಯಾರಂಟಿಗಳ ಆಶ್ವಾಸನೆಯನ್ನು ಯಶಸ್ವಿಯಾಗಿ ಈಡೇರಿಸಿದ್ದು ಸರ್ಕಾರದ ಇಚ್ಚಾಶಕ್ತಿಯಿಂದಾಗಿ ಜನಪರ ಯೋಜನೆಗಳ ಯಶಸ್ವಿ ಅನುಷ್ಠಾನವಾಗಿ ರಾಜ್ಯದ ಜನತೆಯು ಪಂಚ ಗ್ಯಾರಂಟಿಗಳ ಲಾಭ ಪಡೆದು ಕೋಟ್ಯಾಂತರ ಕುಟುಂಬಗಳಿಂದು ನೆಮ್ಮದಿಯ ಬದುಕು ಕಟ್ಟಿಕೊಂಡಿದೆ.

ಶಕ್ತಿ ಯೋಜನೆಯು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯಗಳನ್ನು ಒದಗಿಸಿದ್ದು ಶಕ್ತಿ ಯೋಜನೆಯಡಿ ಒಟ್ಟು ಪ್ರಯಾಣಿಸಿದವರ ಪ್ರಯಾಣಗಳ ಸಂಖ್ಯೆ: 458 ಕೋಟಿ, ಹಾಗೂ ಇದಕ್ಕೆ ತಗುಲಿದ ವೆಚ್ಚ: ₹8,815 ಕೋಟಿ ರೂಪಾಯಿಗಳು.

ಗೃಹಿಣಿಯರಿಗೆ ತಿಂಗಳಿಗೆ ಕೊಡಲಾಗುವ 2000 ರೂಪಾಯಿಯ ಗೃಹಲಕ್ಷ್ಮಿ ಯೋಜನೆಯಲ್ಲಿ ಒಟ್ಟು ಫಲಾನುಭವಿಗಳು: 1.25 ಕೋಟಿ ಹಾಗೂ ಇದಕ್ಕೆ ಸರ್ಕಾರಿ ಭರಿಸಿದ ಮೊತ್ತ 47,773 ಕೋಟಿ ರೂಪಾಯಿಗಳು.

ಗೃಹಜ್ಯೋತಿ ಯೋಜನೆಯಡಿ
ಮನೆ ಮನೆಗೆ ಪ್ರತಿ ತಿಂಗಳು 200 ಯೂನಿಟ್ ಉಚಿತ್ ವಿದ್ಯುತ್ ಯೋಜನೆಯ ಫಲಾನುಭವಿಗಳು 1.63 ಕೋಟಿ ಕುಟುಂಬಗಳು ಹಾಗೂ ಗೃಹಜ್ಯೋತಿ ಯೋಜನೆಗೆ ತಗುಲಿದ ವೆಚ್ಚ 18,900 ಕೋಟಿ ರೂಪಾಯಿಗಳು.

ಜನರ ಹಸಿವು ನೀಗಿಸುವ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿಯಲ್ಲಿ ಫಲಾನುಭವಿಗಳು: 4.42 ಕೋಟಿ ಜನರು ಹಾಗೂ ಇದರ ವೆಚ್ಚ 13,564 ಕೋಟಿ ರೂಪಾಯಿಗಳು.

ಔದ್ಯೋಗಿಕ ಜೀವನಕ್ಕೆ ಪ್ರವೇಶಿಸುವ ಹಂತದಲ್ಲಿರುವ ಯುವ ಸಮುದಾಯಕ್ಕೆ ಶಕ್ತಿ ನೀಡಲು ಯುವನಿಧಿ ಯೋಜನೆಯಡಿ ಪದವಿ ಅಥವಾ ಡಿಪ್ಲೊಮಾ ಮುಗಿಸಿದ ನಿರುದ್ಯೋಗಿ ಯುವಕರಿಗೆ ತಿಂಗಳಿಗೆ 1500–3000 ರೂಪಾಯಿಗಳ ವೇತನ ರೂಪದ ಸಹಾಯ ಧನ ನೀಡಲಾಗುತ್ತಿದ್ದು ಇದರ ಫಲಾನುಭವಿಗಳು 3.70 ಲಕ್ಷ ಯುವಕರು ಮತ್ತು ಈ ಯೋಜನೆಗೆ ತಗುಲಿದ ವೆಚ್ಚ 376 ಕೋಟಿ ರೂಪಾಯಿಗಳಾಗಿದೆ.

ಈ ಐದೂ ಗ್ಯಾರಂಟಿಗಳ ಒಟ್ಟು ವೆಚ್ಚ 89,428 ಕೋಟಿ ರೂಪಾಯಿಗಳಾಗಿದೆ. ರಾಜ್ಯದ ಕಟ್ಟ ಕಡೆಯ ಜನರ ಶ್ರೇಯೋಭಿವೃದ್ದಿಗಾಗಿ ಕೆಲಸ ಮಾಡುವ ಕಾಂಗ್ರೆಸ್ ಸರ್ಕಾರವು ಇದು “ಮನ್ ಕೀ ಬಾತ್” ಸರ್ಕಾರ ಅಲ್ಲ “ಕಾಮ್ ಕೀ ಬಾತ್” ಸರ್ಕಾರ” ಆಗಿದೆ. ರಾಜ್ಯದಲ್ಲಿ ಒಬ್ಬನೇ ಒಬ್ಬ ಫಲಾನುಭವಿಯೂ ಕೂಡ ಇಲ್ಲಿ ತನಕ ಗ್ಯಾರಂಟಿ ಯೋಜನೆಗಳನ್ನು ತಿರಸ್ಕರಿಸಿದ ಉದಾಹರಣೆಗಳಿಲ್ಲ, ಹಾಗಾಗಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನರೂ ಮುಕ್ತ ಮನಸ್ಸಿನಿಂದ ಸ್ವೀಕಾರ ಮಾಡಿರುವುದಕ್ಕೆ ಇದು ಉದಾಹರಣೆಯಾಗಿದೆ ಮತ್ತು ಗ್ಯಾರಂಟಿ ಬಗ್ಗೆ ಅಪಪ್ರಚಾರ ನಡೆಸುತ್ತಿರುವ ರಾಜ್ಯ ಬಿಜೆಪಿಗೆ ಜನತೆ ನೀಡಿದ ತಪರಾಕಿಯಾಗಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ್ ರಾವ್ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕ್ರೈಸ್ಟ್ ಕಿಂಗ್: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2 ಫಲಿತಾಂಶ, ಮೂವರಿಗೆ ರ‍್ಯಾಂಕ್

0

ಕ್ರೈಸ್ಟ್ ಕಿಂಗ್: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2 ಫಲಿತಾಂಶ, ಮೂವರಿಗೆ ರ‍್ಯಾಂಕ್

ಶ್ರೀಯಾ 595 ಅಂಕಗಳೊಂದಿಗೆ ರಾಜ್ಯಮಟ್ಟದಲ್ಲಿ ಆರನೇ ರ‍್ಯಾಂಕ್, ರಶ್ಮೀ ಹಾಗೂ ಅಮೂಲ್ಯ 591 ಅಂಕಗಳೊಂದಿಗೆ ಹತ್ತನೇ ರ‍್ಯಾಂಕ್

ಕಾರ್ಕಳ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ -2 ರ ಫಲಿತಾಂಶ ಪ್ರಕಟಗೊಂಡಿದ್ದು ವಿಜ್ಞಾನ ವಿಭಾಗದಲ್ಲಿ ಮೂವರು ವಿದ್ಯಾರ್ಥಿಗಳು ಅಗ್ರ ಹತ್ತರೊಳಗೆ ರ‍್ಯಾಂಕ್‌ಗಳನ್ನು ಪಡೆದುಕೊಂಡಿದ್ದಾರೆ.

ದ್ವಿತೀಯ ವಿಜ್ಞಾನ ವಿಭಾಗದ ಶ್ರೀಯಾ 595 ಅಂಕಗಳೊ೦ದಿಗೆ ರಾಜ್ಯಮಟ್ಟದಲ್ಲಿ ಆರನೇ ರ‍್ಯಾಂಕ್ ಪಡೆದುಕೊಂಡಿದ್ದಾಳೆ. ಅದೇ ರೀತಿ ವಿಜ್ಞಾನ ವಿಭಾಗದಲ್ಲಿ ರಶ್ಮೀ 591 ಹಾಗೂ ಅಮೂಲ್ಯ 591 ಅಂಕಗಳೊ೦ದಿಗೆ ರಾಜ್ಯಮಟ್ಟದಲ್ಲಿ ಹತ್ತನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.

ಈ ಮೂಲಕ ಸಂಸ್ಥೆಯು ಈ ವರ್ಷದಲ್ಲಿ ವಿಜ್ಞಾನ ವಿಭಾಗದಲ್ಲಿ ನಾಲ್ಕು ಹಾಗೂ ವಾಣಿಜ್ಯ ವಿಭಾಗದಲ್ಲಿ ನಾಲ್ಕು ರ‍್ಯಾಂಕ್‌ಗಳೊ೦ದಿಗೆ ಒಟ್ಟು ಎಂಟು ರ‍್ಯಾಂಕ್‌ಗಳನ್ನು ತನ್ನದಾಗಿಸಿಕೊಂಡಿದೆ.

Shriya, 595, 99.16%
Rashmi, 591, 98.5%
Amoolya, 591, 98.5%

ನಿಟ್ಟೆ:ಅಭಿಷೇಕ್ ಎಸ್. ರಾವ್ ಅವರಿಗೆ ಡಾಕ್ಟರೇಟ್ ಪದವಿ

0

ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಇನ್ಫೋರ್ಮೇಶನ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಅಭಿಷೇಕ್ ಎಸ್. ರಾವ್ ಅವರು ‘ಡಿಸೈನ್ ಆಫ್ ಸ್ಕೋರ್ ಬೇಸ್ಡ್ ಮಾಡೆಲ್ ಫಾರ್ ಪ್ರೆಡಿಕ್ಟಿಂಗ್ ಮೋರ್ಟಾಲಿಟಿ ಇನ್ ಅಕ್ಯೂಟ್ ಫೆಬ್ರಾಯ್ಲ್ ಇಲ್ನೆಸ್ ವಿಥ್ ಲೋ ಪ್ಲೇಟ್ಲೆಟ್ ಕೌಂಟ್ ಸಿಂಡ್ರೋಮ್’ ಎಂಬ ವಿಷಯದ ಕುರಿತು ಬರೆದ ಸಂಶೋಧನಾ ಪ್ರಬಂಧಕ್ಕೆ ಇತ್ತೀಚೆಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ಘೋಷಿಸಿದೆ.

ಇವರು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಇನ್ಫೋರ್ಮೇಶನ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ. ಕಾರ್ತಿಕ್ ಪೈ ಬಿ ಎಚ್ ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಪ್ರಬಂಧವನ್ನು ಮಂಡಿಸಿದ್ದರು.

ಗಿರಿಜಾ ಸರ್ಜಿಕಲ್ಸ್ ವತಿಯಿಂದ ದಾದಿಯರ ದಿನಾಚರಣೆ

0

ಗಿರಿಜಾ ಸರ್ಜಿಕಲ್ಸ್ ವತಿಯಿಂದ ದಾದಿಯರ ದಿನಾಚರಣೆ

ಕರಾವಳಿ ಭಾಗದ ಪ್ರಖ್ಯಾತ ಸರ್ಜಿಕಲ್ಸ್ ಸಂಸ್ಥೆಯಾದ ಗಿರಿಜಾ ಸರ್ಜಿಕಲ್ಸ್ ಮತ್ತು ಸೀನಿಯರ್ ಜೇಸಿ ಟೆಂಪಲ್ ಸಿಟಿ ಉಡುಪಿ ಲಿಜಿನ್ ಇವರ ವತಿಯಿಂದ ಉಡುಪಿಯ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತಿರುವ ದಾದಿಯರನ್ನು ಗುರುತಿಸಿ ಗೌರವಿಸುವ ನೆಲೆಯಲ್ಲಿ ದಾದಿಯರ ( ನರ್ಸಸ್) ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಡಿಸ್ಟ್ರಿಕ್ಟ್ ಸರ್ಜಿನ್ ಆಗರುವ ಡಾ. ಅಶೋಕ್ ಅವರು, ಆಸ್ಪತ್ರೆಯ RMO ಆಗಿರುವ ಡಾ. ವಾಸುದೇವ, ಸೀನಿಯರ್ ಜೇಸಿಯ ಅಧ್ಯಕ್ಷ ಶ್ರೀ ಶಿವಾನಂದ್ ಶೆಟ್ಟಿಗಾರ್ ಮತ್ತು ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ ನ ಮೆನೆಜಿಂಗ್ ಡೈರೆಕ್ಟರ್ ಆಗಿರುವ ರವೀಂದ್ರ ಶೆಟ್ಟಿ ಕಡೆಕಾರ್ ಇವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹಿರಿಯ 5 ಜನ ದಾದಿಯರನ್ನು ಸನ್ಮಾನಿಸಿ ಉಳಿದ ಎಲ್ಲಾ ದಾದಿಯರನ್ನು ಅವರ ಸೇವೆಯನ್ನು ಗುರುತಿಸಿ ಗೌರವಿಸಲಾಯೀತು.

ಅತ್ತೂರು ಪರ್ಪಲೆಗಿರಿ:ಮೇ 17ರಿಂದ 19ರವರೆಗೆ ದೈವ ಬಿಂಬ ಪ್ರತಿಷ್ಠೆ, ಸಿರಿ ಸಿಂಗಾರ ನೇಮೋತ್ಸವ

0

ಅತ್ತೂರು ಪರ್ಪಲೆಗಿರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ
ಕಲ್ಕುಡ, ಕಲ್ಲುರ್ಟಿ, ತೂಕತ್ತೆರಿ ಸಪರಿವಾರ ದೈವಗಳ ಗುಡಿಯಲ್ಲಿ ಮೇ 17ರಿಂದ 19ರವರೆಗೆ ದೈವ ಬಿಂಬ ಪ್ರತಿಷ್ಠೆ, ಸಿರಿ ಸಿಂಗಾರ ನೇಮೋತ್ಸವ ನಡೆಯಲಿದೆ.

ವೇದಮೂರ್ತಿ ಶ್ರೀ ಕೇಂಜ ಶ್ರೀಧರ ತಂತ್ರಿಗಳು, ಕುತ್ಯಾರು ಇವರ ಮಾರ್ಗ ದರ್ಶನದಲ್ಲಿ ಪೂಜಾದಿ ಕಾರ್ಯಗಳು, ದೇವತಾ ಕಾರ್ಯಗಳು ಆರಂಭವಾಗಿದೆ. ಪ್ರಮಲ್ ಕುಮಾರ್ ವಾಸ್ತು ವಿನ್ಯಾಸ ನೀಡಿದ್ದಾರೆ.
ಪ್ರತಿ ತಿಂಗಳ ಸಂಕ್ರಾಂತಿಯ ದಿನ ಭಕ್ತರು ಈ ಕ್ಷೇತ್ರಕ್ಕೆ ಬಂದು ದೈವದ ಸಿರಿಮುಡಿ ಗಂಧ ಪ್ರಸಾದವನ್ನು ಪಡೆಯುತ್ತಾರೆ. ಈ ಕ್ಷೇತ್ರದಲ್ಲಿ ಹಲವಾರು ಪವಾಡಗಳು ನಡೆಯುತ್ತಿರುವ ಅನುಭವ ಹಲವರಿಗೆ ಆಗಿದ್ದು ಇದೊಂದು ವಿಶೇಷ ಕ್ಷೇತ್ರವಾಗಿ ರೂಪುಗೊಳ್ಳುವ ಲಕ್ಷಣವಾಗಿದೆ. ಈ ಕ್ಷೇತ್ರದ ಅಭಿವೃದ್ದಿಗಾಗಿ ಎಲ್ಲಾ ಜನರ ಸಹಕಾರವನ್ನು ಸಮಿತಿ ಕೋರಿದೆ.

ಈ ಬೆಟ್ಟ ಅತೀ ಎತ್ತರವಾದ ಬೆಟ್ಟ ವಾದುದರಿಂದ ಇಲ್ಲಿ ಎಲ್ಲಾ ಮೂಲ ಭೂತ ಸೌಕರ್ಯಗಳನ್ನು ಕಲ್ಪಿಸಬೇಕಿದೆ. ಹೀಗಾಗಿ ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದು ಬಹಳ ತ್ರಾಸದಾಯಕ. ಹೀಗಾಗಿ ಎಲ್ಲಾ ಭಕ್ತರು ಒಗ್ಗೂಡಿ ಈ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಹಕಾರ ನೀಡ ಬೇಕಿದೆ.

ಕಲ್ಲಿನ ವ್ಯಾಪಾರಿಗಳು ಕಲ್ಲು, ಶಿಲ್ಪಿಗಳು ಕೆತ್ತನೆ ಕೆಲಸ, ಕಲ್ಲಿನ ವ್ಯಾಪಾರಿಗಳು ಕಲ್ಲನ್ನು ತುಂಡರಿಸುವ ಕೆಲಸ, ಮರದ ಕೆತ್ತನೆಯ ಶಿಲ್ಪಿಯ ಉದಾರ ಕೊಡುಗೆ, ಕ್ರೇನ್‌ಗಳ ಉಚಿತ ಸೇವೆ, ಲಾರಿ ಮುಂತಾದ ಉಚಿತ ಸೇವೆ ಸೇರಿದಂತೆ ಕಲ್ಕುಡ, ಕಲ್ಲುರ್ಟಿ, ತೂಕತ್ತೇರಿ ದೈವಗಳ ಗರ್ಭಗುಡಿಯ ಕೆಲಸ ಅವರವರ ವೃತ್ತಿ ವ್ಯಾಪಾರಿಗಳಿಂದ ಉಚಿತವಾಗಿ ನಡೆಯುತ್ತಿದೆ. ಉಳಿದಂತೆ ಸುತ್ತು ಪೌಳಿಯ ಕೆಲಸ, ಅಂಗಣಕ್ಕೆ ನೆಲಹಾಸು, ದೀಪಗೋಪುರ, ಕೊಡಿಯಡಿಗಳನ್ನು ಊರ ಪರವೂರ ದಾನಿಗಳು ನಿರ್ಮಿಸಿ ಕೊಟ್ಟಿದ್ದಾರೆ.

ಸಮಿತಿಗಳು

ಶ್ರೀ ಕ್ಷೇತ್ರ ಅತ್ತೂರು ಕೃಷ್ಣಗಿರಿ ಕಲ್ಕುಡ ದೈವಸ್ಥಾನ ಟ್ರಸ್ಟ್ (ರಿ) ಕಾರ್ಕಳ
ಶ್ರೀ ಸುಭಾಸ್ ಚಂದ್ರ ಹೆಗ್ಡೆ ಅಧ್ಯಕ್ಷರು, ಶ್ರೀ ಸತ್ಯೇಂದ್ರ ಭಟ್ ಕಾರ್ಯದರ್ಶಿ,
ಶ್ರೀ ಚೇತನ್ ಕೋಟ್ಯಾನ್ ಕೋಶಾಧಿಕಾರಿ, ಶ್ರೀ ಬಾಲಕೃಷ್ಣ ಹೆಗ್ಡೆ ಗುರುಸ್ವಾಮಿ ಟ್ರಸ್ಟಿ,
ಶ್ರೀ ಮನ್ಮಥ ಜೆ. ಶೆಟ್ಟಿ ಟ್ರಸ್ಟಿ, ಶ್ರೀ ಚಂದ್ರಶೇಖರ ಶೆಟ್ಟಿ ಟ್ರಸ್ಟಿ, ಶ್ರೀ ಪ್ರಶಾಂತ್ ನಾಯಕ್ ಟ್ರಸ್ಟಿ

 

ಅತ್ತೂರು ಪರ್ಪಲೆಗಿರಿ ಪುನರುತ್ಥಾನ ಸಮಿತಿ, ಕಾರ್ಕಳ
ಗೌರವಾಧ್ಯಕ್ಷರು: ಶ್ರೀ ವಿ. ಸುನಿಲ್ ಕುಮಾರ್ ಶಾಸಕರು, ಕಾರ್ಕಳ, ಶ್ರೀ ಬೋಳ ಪ್ರಭಾಕರ ಕಾಮತ್ ಉದ್ಯಮಿಗಳು, ಕಾರ್ಕಳ, ಶ್ರೀ ಎಮ್. ಕೆ. ವಿಜಯ ಕುಮಾರ್ ಹಿರಿಯ ವಕೀಲರು, ಕಾರ್ಕಳ, ಶ್ರೀ ಎನ್. ವಿನಯ ಹೆಗ್ಡೆ ಅಧ್ಯಕ್ಷರು, ನಿಟ್ಟೆ ವಿದ್ಯಾಸಂಸ್ಥೆ, ಶ್ರೀ ವಿಠಲ ಶೆಟ್ಟಿ ಬಲಿಪಗುತ್ತು, ಅತ್ತೂರು, ಶ್ರೀ ಕೆ. ಜಯರಾಮ ಪ್ರಭು ಆಡಳಿತ ಮೊಕ್ತೇಸರರು,
ಶ್ರೀ ವೆಂಕಟರಮಣ ದೇವಸ್ಥಾನ, ಕಾರ್ಕಳ

 

ಕಾರ್ಯಕಾರಿ ಸಮಿತಿ
ಡಾ| ರವೀಂದ್ರ ಶೆಟ್ಟಿ ಬಜಗೋಳಿ ಅಧ್ಯಕ್ಷರು,
ಶ್ರೀ ಬೋಳ ಪ್ರಶಾಂತ್ ಕಾಮತ್ ಕಾರ್ಯಾಧ್ಯಕ್ಷರು,
ಶ್ರೀ ಎಸ್.ನಿತ್ಯಾನಂದ ಪೈ ಕೋಶಾಧಿಕಾರಿ,
ವೇದಮೂರ್ತಿ ಕುತ್ಯಾರು ಕೇಂಜ ಶ್ರೀಧರ ತಂತ್ರಿ
ಶ್ರೀ ಕ್ಷೇತ್ರದ ತಂತ್ರಿಗಳು,
ಶ್ರೀ ಪ್ರಸಾದ್ ಶೆಟ್ಟಿ ಕುತ್ಯಾರು ಶ್ರೀ ಕ್ಷೇತ್ರದ ಇಂಜಿನಿಯರ್,
ಶ್ರೀ ಕುಡುಪು ಕೃಷ್ಣರಾಜ ತಂತ್ರಿ ದೇವಾಲಯದ ವಾಸ್ತು ತಜ್ಞರು,
ಶ್ರೀ ಪ್ರಮಲ್ ಕುಮಾರ್ ಕಾರ್ಕಳ ದೈವಾಲಯದ ವಾಸ್ತು ತಜ್ಞರು

 

ಗೌರವ ಸಲಹೆಗಾರರು: ಶ್ರೀ ಗುರ್ಮೆ ಸುರೇಶ್ ಶೆಟ್ಟಿ ಶಾಸಕರು, ಕಾಪು, ಶ್ರೀ ಯಶ್‌ಪಾಲ್ ಸುವರ್ಣ ಶಾಸಕರು, ಉಡುಪಿ, ಶ್ರೀ ರಘುಪತಿ ಭಟ್ ಮಾಜಿ ಶಾಸಕರು, ಉಡುಪಿ, ಶ್ರೀ ಉದಯ ಕುಮಾರ್ ಶೆಟ್ಟಿ ಮುನಿಯಾಲು ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್, ಮುನಿಯಾಲು, ಶ್ರೀ ಭಾಸ್ಕರ್ ಎಸ್. ಕೋಟ್ಯಾನ್ ಅಧ್ಯಕ್ಷರು, ವಿ.ಹಿಂಪ. ಕಾರ್ಕಳ ತಾಲೂಕು ಶ್ರೀ ಸುಹಾಸ್ ಹೆಗ್ಡೆ ಚಾವಡಿಮನೆ ನಂದಳಿಕೆ, ಶ್ರೀ ವಿನೋದ್ ದೇವದಾಸ ಕಾಮತ್, ಮೂಲ್ಕಿ, ಶ್ರೀ ಸೋಮದೇವ ನಾರಾಯಣ ಮರಾಠೆ. ಜ್ಯೋತಿಷಿಗಳು, ಧಾರವಾಡ, ಶ್ರೀ ಗಣಪತಿ ಹೆಗ್ಡೆ, ಉದ್ಯಮಿಗಳು, ಕಾರ್ಕಳ, ಶ್ರೀ ಬೋಳ ಶ್ರೀನಿವಾಸ ಕಾಮತ್, ಗಾಯತ್ರಿ ಎಕ್ಸ್‌ಪೋರ್ಟ್ಸ್, ಗುಂಡ್ಯಡ್ಕ, ಶ್ರೀ ಮಹೇಶ್ ಶೆಟ್ಟಿ, ಕುಡುಪುಲಾಜೆ, ಉದ್ಯಮಿಗಳು, ಮುಂಬೈ, ಶ್ರೀ ರಾಜೇಶ್ ಶೆಣೈ ಪಂಚಮಿ ಕ್ಯಾಶ್ಯೂಸ್, ಕಾರ್ಕಳ, ಡಾ| ಸುಧಾಕರ ಶೆಟ್ಟಿ ಅಧ್ಯಕ್ಷರು ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟ್, ಗಣಿತನಗರ, ಶ್ರೀ ಕಡಂದಲೆ ಸುರೇಶ್ ಭಂಡಾರಿ, ಸಂಸ್ಥಾಪಕ ಅಧ್ಯಕ್ಷರು ವಿಶ್ವ ಭಂಡಾರಿ ಮಹಾಮಂಡಲ ಫೌಂಡೇಶನ್, ಶ್ರೀ ಬೆಳ್ವೆ ಗಣೇಶ್ ಕಿಣಿ, ಉದ್ಯಮಿಗಳು ಹೆಬ್ರಿ, ಡಾ| ಸುಧೀರ್ ಹೆಗ್ಡೆ, ಕಾಬೆಟ್ಟು, ನೇತ್ರ ತಜ್ಞರು, ಮಂಗಳೂರು, ಶ್ರೀ ರಾಮಕೃಷ್ಣ ಆಚಾರ್ಯ ಆಡಳಿತ ನಿರ್ದೇಶಕರು, S.k f ಅಲಂಗಾರು, ಶ್ರೀ ಮಹೇಶ್ ಠಾಕೂರ್, ಮೊಕ್ತೇಸರರು, ಶ್ರೀ ಉಮಾಮಹೇಶ್ವರ ದೇವಸ್ಥಾನ ಶಿವಪಾಡಿ, ಮಣಿಪಾಲ