Home Blog Page 90

ಅತ್ಯಾಚಾರಕ್ಕೆ ಒಳಗಾದ ಕಾರ್ಕಳದ ಯುವತಿಯ ಮನೆಗೆ ತೆರಳಿ ಆರ್ಥಿಕ ಸಹಕಾರ ನೀಡಿ ಧೈರ್ಯ, ಸ್ಥೈರ್ಯ ತುಂಬಿದ ಕಾರ್ಕಳ ಟೈಗರ್ಸ್

0

ಅತ್ಯಾಚಾರಕ್ಕೆ ಒಳಗಾದ ಕಾರ್ಕಳದ ಯುವತಿಯ ಮನೆಗೆ ತೆರಳಿ ಆರ್ಥಿಕ ಸಹಕಾರ ನೀಡಿ ಧೈರ್ಯ, ಸ್ಥೈರ್ಯ ತುಂಬಿದ ಕಾರ್ಕಳ ಟೈಗರ್ಸ್

ಅತ್ಯಾಚಾರಕ್ಕೊಳಗಾದ ಕುಕ್ಕುಂದೂರುವಿನ ಸಂತ್ರಸ್ತೆ ಯುವತಿಯ ಮನೆಗೆ ಇಂದು ಕಾರ್ಕಳ ಟೈಗರ್ಸ್ ಭೇಟಿ ನೀಡಿದೆ.ಟೈಗರ್ಸ್ ಬಳಗ ಯುವತಿಯ ತಾಯಿ ಹಾಗೂ ಮನೆಯವರಿಗೆ ಧೈರ್ಯ, ಸ್ಥೈರ್ಯ ತುಂಬಿ ಆರ್ಥಿಕ ಸಹಕಾರ ನೀಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಉದ್ಯಮಿ ಹಾಗೂ ಸಮಾಜ ಸೇವಕರಾದ ಬೋಳ ಪ್ರಶಾಂತ್ ಕಾಮತ್ ರವರು ಯಾವುದೇ ಸಂದರ್ಭದಲ್ಲಿ ಕೂಡ ಟೈಗರ್ಸ್ ಬಳಗ ಯುವತಿ ಹಾಗೂ ಆಕೆಯ ಮನೆಯವರ ರಕ್ಷಣೆಗಾಗಿ ನಾವಿದ್ದೇವೆ ಎಂದು ಭರವಸೆ ನೀಡಿದ್ದಾರೆ .

ಯಾವುದೇ ವಿಚಾರದಲ್ಲಿ ಕೂಡ ಸಂಕಷ್ಟ ಬಂದರೂ ಟೈಗರ್ಸ್ ಬಳಗಕ್ಕೆ ತಿಳಿಸಿ ಎಂದು ಟೈಗರ್ಸ್ ಬಳಗ ಮನವಿ ಮಾಡಿದೆ.ಯುವತಿಯ ತಾಯಿಗೆ ಈ ಸಂದರ್ಭದಲ್ಲಿ ಆರ್ಥಿಕ ಸಹಕಾರ ನೀಡಲಾಯಿತು.
ಈ ಸಂದರ್ಭದಲ್ಲಿ ಕಾರ್ಕಳ ಟೈಗರ್ಸ್ ತಂಡದ ಅಜಿತ್ ಕಾಮತ್, ಹರೀಶ್ ಅಮೀನ್, ಅನಂತ ಕೃಷ್ಣ ಶೆಣೈ, ಪ್ರದೀಪ್ ಶೃಂಗಾರ್, ವಸಂತ್ ಕುಮಾರ್, ಶ್ರೀನಾಥ್ ಆಚಾರ್ಯ, ಪ್ರವೀಣ್ ಕುಲಾಲ್, ಅರುಣ್ ದೇವಾಡಿಗ ಸದಸ್ಯರು ಉಪಸ್ಥಿತರಿದ್ದರು

ಬೈಲೂರುಹರ್ಷಿತ್ ಆಚಾರ್ಯನಿಗೆ ಹೆಮ್ಮೆಯ ಕನ್ನಡಿಗ ರಾಷ್ಟ್ರೀಯ ಪ್ರಶಸ್ತಿ

0

ಹರ್ಷಿತ್ ಆಚಾರ್ಯನಿಗೆ ಹೆಮ್ಮೆಯ ಕನ್ನಡಿಗ ರಾಷ್ಟ್ರೀಯ ಪ್ರಶಸ್ತಿ

ನಾಡಿನ ಸಮಾಚಾರ ಸೇವಾ ಸಂಘ (ರಿ.) ಗೋಕಾಕ ಹಾಗೂ ನಾಡಿನ ಸಮಾಚಾರ ದಿನಪತ್ರಿಕೆ ಸೇವಾ ಬಳಗ, ಗೋಕಾಕ ಇವರ ಸಯುಕ್ತ ಆಶ್ರಯದಲ್ಲಿ ಕೊಡಮಾಡುವ ಹೆಮ್ಮೆಯ ಕನ್ನಡಿಗ ರಾಷ್ಟ್ರೀಯ ಪ್ರಶಸ್ತಿ ಯು ಹರ್ಷಿತ್ ಆಚಾರ್ಯ ಬೈಲೂರು ಇವನಿಗೆ ಲಭಿಸಿದೆ.

ಸೆ.5ರಂದು ಬೆಳಗಾವಿ ನೆಹರು ನಗರದಲ್ಲಿರುವ ಕನ್ನಡ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಅಯೋಜಿಸಿದ ಗುರುವಂದನಾ ಸಮಾರಂಭದಲ್ಲಿ ಹರ್ಷಿತ್ ಆಚಾರ್ಯ ಇವರು ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು.

ಬೈಲೂರು ಸರಕಾರಿ ಪದವಿ ಪೂರ್ವ ಕಾಲೇಜಿನ 9ನೇ ತರಗತಿ ವಿದ್ಯಾರ್ಥಿಯಾದ ಈತ ಕಾರ್ಕಳ ತಾಲೂಕಿನ ನೀರೆ ಕೋಟಿಬೆಟ್ಟು ನಿವಾಸಿ ಹರೀಶ್ಚಂದ್ರ ಆಚಾರ್ಯ ಹಾಗೂ ವಸಂತಿ ದಂಪತಿಗಳ ಪುತ್ರ.

ಕಾರ್ಕಳ:ಮನೆಯೊಂದರಲ್ಲಿ ವೇಶ್ಯಾವಾಟಿಕೆ:ಇಬ್ಬರ ಬಂಧನ

0

ಮನೆಯೊಂದರಲ್ಲಿ ವೇಶ್ಯಾವಾಟಿಕೆ:ಇಬ್ಬರ ಬಂಧನ

ಮನೆಯೊಂದರಲ್ಲಿ ಅನೈತಿಕ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ಸಾಣೂರು ಗ್ರಾಮದಲ್ಲಿ ನಡೆದಿದೆ.

ಸಾಣೂರು ಗ್ರಾಮದ ಅವಿನಾಶ್ ಕಂಪೌಂಡ್ ಬಳಿ ಇರುವ ಮನೆಯೊಂದರಲ್ಲಿ ಅನೈತಿಕ ದಂಧೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಭರತ್ ಎಂಬುವವರನ್ನು ಬಂಧಿಸಲಾಗಿದ್ದು, ಕೃತ್ಯಕ್ಕೆ ಬಳಸಿಕೊಳ್ಳಲಾಗುತ್ತಿದ್ದ ವಸ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ದಾಳಿ ವೇಳೆ ಓರ್ವ ಸಂತ್ರಸ್ತೆಯನ್ನು ರಕ್ಷಿಸಲಾಗಿದೆ. ಆಪಾದಿತರಾದ ಭರತ್ ಕುಮಾರ್, ಮನೆಯ ಮಾಲಕಿ ಪ್ರಮೀಳಾ ವಿಜಯ್ ಕುಮಾರ್ ಸೇರಿ ವೇಶ್ಯಾವಾಟಿಕೆ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ ನಗರ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕರಾದ ಜಯಶ್ರೀ ಎಸ್. ಮಾನೆಯವರಿಗೆ ದೊರೆತ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆದಿದೆ.

ನಿಟ್ಟೆ:ಸಂತೋಷ್ ಎಸ್ ಅವರಿಗೆ ಡಾಕ್ಟರೇಟ್

0

ನಿಟ್ಟೆ:ಸಂತೋಷ್ ಎಸ್ ಅವರಿಗೆ ಡಾಕ್ಟರೇಟ್
ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಇನ್ಫೋರ್ಮೇಶನ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ| ಸಂತೋಷ್ ಎಸ್ ಅವರು ‘ಎ ನಾವೆಲ್ ಇಂಪ್ಲಿಮೆಂಟೇಶನ್ ಆಫ್ ಗ್ಲೂಕೋಮಾ ಸ್ಕ್ರೀನಿಂಗ್ ಫ್ರಮ್ ಡಿಜಿಟಲ್ ಫಂಡಸ್ ಇಮೇಜಸ್ ಯುಸಿಂಗ್ ಆನ್ ಎನ್ಸೆಂಬಲ್ ಡೀಪ್ ಲರ್ನಿಂಗ್ ಬೇಸ್ಡ್ ಅಪ್ರೋಚ್’ ಎಂಬ ವಿಷಯದ ಬಗೆಗೆ ಬರೆದ ಸಂಶೋಧನಾ ಪ್ರಬಂಧಕ್ಕೆ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯವು ಇತ್ತೀಚೆಗೆ ಡಾಕ್ಟರೇಟ್ ಪದವಿ ಘೋಷಿಸಿದೆ. ಇವರು ಶ್ರೀನಿವಾಸ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ| ಅನೂಪ್ ಬಿ ಕೆ ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಪ್ರಬಂಧವನ್ನು ಮಂಡಿಸಿದ್ದರು.

ಸೆ.9:ಕಾರ್ಕಳ ಆನೆಕೆರೆ ಸರ್ಕಲ್ ಬಳಿ ಹೋಟೆಲ್ ಜಲದುರ್ಗಾ ಶುಭಾರಂಭ

0

ಸೆ.9:ಕಾರ್ಕಳ ಆನೆಕೆರೆ ಸರ್ಕಲ್ ಬಳಿ ಹೋಟೆಲ್ ಜಲದುರ್ಗಾ ಶುಭಾರಂಭ

ಕಾರ್ಕಳ ಆನೆಕೆರೆ ಸರ್ಕಲ್ ಬಳಿ ಹೋಟೆಲ್ ಜಲದುರ್ಗಾ ಸಸ್ಯಾಹಾರಿ ಮತ್ತು ಮಾಂಸಾಹಾರಿ ಹೋಟೆಲ್ ಸೆ.9ರಂದು ಶುಭಾರಂಭಗೊಳ್ಳಲಿದೆ.ಬೆಳಿಗ್ಗೆ11.30 ರಿಂದ ರಾತ್ರಿ 10.00 ಗಂಟೆಯವರೆಗೆ ವರೆಗೆ ಹೋಟೆಲ್ ತೆರೆದಿರುತ್ತದೆ.ಮೀನಿನ ತವಾ ಫ್ರೈ ಜಲದುರ್ಗಾ ಹೋಟೆಲ್ ನ ವಿಶೇಷತೆ ಎಂದು ಮಾಲಕರು ತಿಳಿಸಿದ್ದಾರೆ.

 

ಹೈಕೋರ್ಟ್ ನಲ್ಲಿ ಕಂಚಿನದೇ ಮೂರ್ತಿ ಎಂದು ಒಪ್ಪಿಕೊಳ್ಳುವ ಕಾಂಗ್ರೆಸ್ಸಿಗರೇ ಇಲ್ಲಿ ಫೈಬರ್ ಮೂರ್ತಿ ಎಂದು ಸುಳ್ಳು ಹೇಳುವ ನೀವು ಕಾರ್ಕಳದ ಜನತೆಯ ಬಳಿ ಬೇಶರತ್ ಕ್ಷಮೆ ಕೇಳಬೇಕು-ಉದಯ ಎಸ್ ಕೋಟ್ಯಾನ್

0

ಹೈಕೋರ್ಟ್ ನಲ್ಲಿ ಕಂಚಿನದೇ ಮೂರ್ತಿ ಎಂದು ಒಪ್ಪಿಕೊಳ್ಳುವ ಕಾಂಗ್ರೆಸ್ಸಿಗರೇ ಇಲ್ಲಿ ಫೈಬರ್ ಮೂರ್ತಿ ಎಂದು ಸುಳ್ಳು ಹೇಳುವ ನೀವು ಕಾರ್ಕಳದ ಜನತೆಯ ಬಳಿ ಬೇಶರತ್ ಕ್ಷಮೆ ಕೇಳಬೇಕು-ಉದಯ ಎಸ್. ಕೋಟ್ಯಾನ್

ಕಾರ್ಕಳ:ಕಾರ್ಕಳದ ಬೈಲೂರಿನ ಉಮಿಕಲ್‌ ಬೆಟ್ಟದಲ್ಲಿ ನಿರ್ಮಾಣ ಹಂತದಲ್ಲಿರುವ ಪರಶುರಾಮ ಥೀಂ ಪಾರ್ಕ್ ಕಾಮಗಾರಿ ಬಗ್ಗೆ ಕಾರ್ಕಳದ ಜನತೆಗೆ ದಿನಕ್ಕೊಂದು ಸುಳ್ಳು ಹೇಳುತ್ತಿರುವ ಕಾರ್ಕಳ ಕಾಂಗ್ರೆಸ್‌ನ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಮತ್ತು ಅವರ ತಂಡ ಕಾರ್ಕಳದ ಸಮಸ್ತ ಜನತೆಯ ಬೇಶರತ್ ಕ್ಷಮೆ ಕೇಳಬೇಕು ಎಂದು ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲಾ ಕಾರ್ಯದರ್ಶಿ ಉದಯ್‌ ಎಸ್‌. ಕೋಟ್ಯಾನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಥೀಂ ಪಾರ್ಕ್ ಕಾಮಗಾರಿಗಳಲ್ಲಿ ಒಂದು ಭಾಗವಾಗಿರುವ ಪರಶುರಾಮನ ಕಂಚಿನ ಮೂರ್ತಿಯನ್ನು ಮರುವಿನ್ಯಾಸಗೊಳಿಸುವ ಬಗ್ಗೆ ಕಾನೂನಾತ್ಮಕವಾಗಿಯೇ ತೆಗೆಯುವ ಸಂದರ್ಭದಲ್ಲಿ ಸರ್ಕಾರದ ಮೂಲಕ ಒತ್ತಡ ಹೇರಿ ಅರ್ಧ ಭಾಗ ತೆಗೆಯುವ ಸಂದರ್ಭ ಕಾಮಗಾರಿಗೆ ತಡೆಯನ್ನು ತಂದಿರುತ್ತೀರಿ. ಪೊಲೀಸು ರಕ್ಷಣೆಯಲ್ಲಿಯೇ ಮೂರ್ತಿ ಭಾಗಗಳನ್ನು ತೆಗೆದಿದ್ದರೂ ಕೂಡ ಮೂರ್ತಿ ಕಳವು ಆಗಿದೆ ಎಂದು ದೂರು ಕೊಟ್ಟಿರುತ್ತೀರಿ ಹಾಗೂ ಮಾಧ್ಯಮಗಳಿಗೆ ಮೂರ್ತಿ ಕಳವು ಆಗಿದೆ ಎಂದು ತಪ್ಪು ಮಾಹಿತಿ ನೀಡಿದಿರಿ.

ಉಳಿದ ಮೂರ್ತಿಯ ಭಾಗಗಳನ್ನು ತೆಗೆಯುವಾಗ, ಕೋರ್ಟ್ ಆದೇಶ ಇದ್ದರೂ ಕೂಡ ರಾತ್ರೋರಾತ್ರಿ ಬೆಟ್ಟಕ್ಕೆ ಹೋಗುವ ಏಕೈಕ ರಸ್ತೆಗೆ ಮಣ್ಣು ತಂದು ರಾಶಿ ಹಾಕಿದಿರಿ ಹಾಗೂ ನಿಮ್ಮ ಪ್ರಭಾವ ಬಳಸಿ ಪೊಲೀಸ್ ರಕ್ಷಣೆಯನ್ನು ಹಿಂಪಡೆದಿರಿ. ಈ ಮೂಲಕ ಮತ್ತೆ ಕಾಮಗಾರಿಗೆ ತಡೆಯೊಡ್ಡಿದಿರಿ. ರಾಜ್ಯದಲ್ಲಿಯೇ ಪ್ರಥಮ ಎಂಬಂತೆ ಜಿಲ್ಲಾ ಉಸ್ತುವಾರಿ ಸಚಿವರಿಂದಲೇ ರಾಜ್ಯದ ರಾಜ್ಯಧಾನಿಯಲ್ಲಿ ಪ್ರತಿಭಟನೆ ಮಾಡಿಸಿ ಇಡೀ ರಾಜ್ಯದ ಜನರಿಗೆ ಸುಳ್ಳು ಹೇಳಿಸಿದಿರಿ….ಈ ಮೂಲಕ ಕಾರ್ಕಳಕ್ಕೆ ಕಳಂಕ ತಂದಿರಿ. ಮೂರ್ತಿ ಕಳಪೆ ಹಾಗೂ ಫೈಬರ್ ಮೂರ್ತಿ ಎಂದು ಬಿಂಬಿಸುತ್ತಾ ಕೋರ್ಟಿಗೆ ಹೋದಿರಿ.

ಮೊದಲಿಗೆ ಇಡೀ ಮೂರ್ತಿ ಫೈಬರ್ ಅಂದಿರಿ ಆಮೇಲೆ ಅರ್ಧ ಮೂರ್ತಿ ಫೈಬರ್ ಅಂದಿರಿ ಈಗ ಕರ್ನಾಟಕದ ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಮೂರ್ತಿಯ ಬಗ್ಗೆ ನಮಗೆ ಯಾವುದೇ ತಕರಾರು ಇಲ್ಲ ಮೂರ್ತಿ ಕಂಚಿನದೇ, ನಮ್ಮ ತಕರಾರು ಏನಿದ್ದರೂ ಮೂರ್ತಿ ಶಿಲ್ಪಿ ಕೃಷ್ಣನಾಯಕ ಜಿಎಸ್‌ಟಿ ಕಟ್ಟಿಲ್ಲ ಎಂಬುದರ ಬಗ್ಗೆ ಮಾತ್ರ ಎನ್ನುತ್ತೀರಿ.
ಹಾಗಾದರೆ ಕೋರ್ಟ್‌ನಲ್ಲಿ ಸತ್ಯ ಹೇಳುವ ನೀವು ಇಷ್ಟರ ತನಕ ಕಾರ್ಕಳ ಜನತೆಗೆ ಯಾಕೆ ಸುಳ್ಳು ಹೇಳಿದ್ದೀರಿ…? ನೀವು ಪದೇ ಪದೇ ಫೈಬರ್-ಫೈಬರ್ ಎಂದು ಹೇಳಿ ಜನರಿಗೆ ಯಾಕೆ ಮೋಸ ಮಾಡಿದಿರಿ…? ಮೂರ್ತಿ ಕಂಚಿನದೇ ಎಂದು ಗೊತ್ತಿದ್ದರೂ ಕೂಡ ಕಾಮಗಾರಿಗೆ ಪ್ರತಿ ಹಂತದಲ್ಲೂ ತಡೆ ಒಡ್ಡಿದ್ದಿರಿ ಯಾಕೆ…? ಕಾರ್ಕಳವನ್ನು ಒಂದು ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಮಾಡಬೇಕೆಂಬ ಮಾನ್ಯ ಶಾಸಕರಾದ ಸುನಿಲ್ ಕುಮಾರ್ ಅವರ ಪ್ರಯತ್ನಕ್ಕೆ ಯಾಕೆ ಅಡ್ಡಗಾಲು ಹಾಕಿದ್ದೀರಿ…?

ನೀವು ಇಷ್ಟೆಲ್ಲಾ ಸುಳ್ಳು ಹೇಳಿದರೂ ಸಹ ನಾವು ಇದನ್ನೆಲ್ಲಾ ಬಿಟ್ಟು ಬಿಡಲು ತಯಾರಿದ್ದೇವೆ. ಆದರೆ ಭಾರತೀಯ ಜನತಾ ಪಾರ್ಟಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸದರಿ ಥೀಂ ಪಾರ್ಕ್‌ ಕಾಮಗಾರಿಗೆ ರೂ.11.00 ಕೋಟಿ ಅನುದಾನ ಮಂಜೂರಾತಿಯಾಗಿದ್ದು, ರೂ.06.72 ಕೋಟಿ ಅನುದಾನ ಬಿಡುಗಡೆಗೊಂಡಿರುತ್ತದೆ. ನಿಮಗೆ ನಿಜವಾಗಿಯೂ ತಾಕತ್ತಿದ್ದರೆ, ನಿರಂತರವಾಗಿ ಜನರಿಗೆ ಸುಳ್ಳು ಹೇಳುವುದನ್ನು ಬಿಟ್ಟು, ಉಳಿದ ಅನುದಾನ ಬಿಡುಗಡೆಗೊಳಿಸಿ ನಿರ್ಮಾಣ ಹಂತದಲ್ಲಿರುವ ಕಾಮಗಾರಿಯನ್ನು ಪೂರ್ಣಗೊಳಿಸಿ ಆದಷ್ಟು ಬೇಗ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಿ, ನೀವು ಮಾಡುತ್ತಿರುವ ತಪ್ಪನ್ನು ನೀವೇ ಸರಿಪಡಿಸಿಕೊಳ್ಳುವ ಮೂಲಕ ಸಮಸ್ಥ ಕಾರ್ಕಳದ ಜನತೆಯ ಮುಂದೆ ಕ್ಷಮೆ ಕೇಳಿ ಎಂದು ಅವರು ತಿಳಿಸಿದ್ದಾರೆ.

ನಿರಂತರ ವೈಶಿಷ್ಟಪೂರ್ಣ ಕಾರ್ಯಕ್ರಮಗಳೊಂದಿಗೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಜಿಲ್ಲೆಯಲ್ಲೇ ಮುಂಚೂಣ ಯಲ್ಲಿದೆ – ದೀಪಕ್ ಕೋಟ್ಯಾನ್ ಇನ್ನಾ

0
ಅಬ್ಬನಡ್ಕದಲ್ಲಿ ಅದ್ದೂರಿಯ ಕೃಷ್ಣವೇಷ ಸ್ಪರ್ಧೆ ಸಮಾರೋಪ ಸಮಾರಂಭ
ನಿರಂತರ ವೈಶಿಷ್ಟಪೂರ್ಣ ಕಾರ್ಯಕ್ರಮಗಳೊಂದಿಗೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಜಿಲ್ಲೆಯಲ್ಲೇ ಮುಂಚೂಣ ಯಲ್ಲಿದೆ-ದೀಪಕ್ ಕೋಟ್ಯಾನ್ ಇನ್ನಾ
ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಮತ್ತು ಜೇಸಿಐ ಬೆಳ್ಮಣ್ಣು, ಯುವ ಜೇಸಿ ವಿಭಾಗ ಮತ್ತು ಮಹಿಳಾ ಜೇಸಿ ವಿಭಾಗದ ನೇತೃತ್ವದಲ್ಲಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಸಭಾಂಗಣದಲ್ಲಿ ರವಿವಾರ ಶ್ರೀ ಕೃಷ್ಣಾಷ್ಟಮಿಯ ಪ್ರಯುಕ್ತ ಕೃಷ್ಣವೇಷ ಸ್ಪರ್ಧೆ ಜರಗಿತು. ಸ್ಪರ್ಧೆಯಲ್ಲಿ 110 ಮಕ್ಕಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಇನ್ನಾ ದೀಪಕ್ ಕೋಟ್ಯಾನ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದವರು ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ನಿರಂತರ ವೈಶಿಷ್ಯಪೂರ್ಣ ಕಾರ್ಯಕ್ರಮಗಳೊಂದಿಗೆ ಜಿಲ್ಲೆಯಲ್ಲೇ ಮುಂಚೂಣ ಯಲ್ಲಿದೆ ಎಂದರು.
ಕಾರ್ಯಕ್ರಮದಲ್ಲಿ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ತಂತ್ರಿಗಳಾದ ನಡಿಗುತ್ತು ಸತೀಶ್ ತಂತ್ರಿ, ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಅರ್ಚಕರಾದ ಬೆಳ್ಮಣ್ಣು ಸತೀಶ್ ಭಟ್, ಬೆಳ್ಮಣ್ಣು ಶಿವಪ್ರಸಾದ್ ದೇವಾಡಿಗ, ಬೆಳ್ಮಣ್ಣು ಸಾನ್ವಿ ಎಂಟರ್ ಪ್ರೆöÊಸ್ಸಸ್ ಮಾಲಕರಾದ ರವೀಂದ್ರ ಶೆಟ್ಟಿ ಬೆಳ್ಮಣ್ಣು, ನಂದಳಿಕೆ ಶ್ರೀ ಲಕ್ಷಿö್ಮÃಜನಾರ್ದನ ಸತೀಶ್ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸುರೇಶ್ ಕಾಸರಬೈಲು, ನಿಕಟ ಪೂರ್ವಾಧ್ಯಕ್ಷ ಪ್ರಶಾಂತ್ ಪೂಜಾರಿ, ಕಾರ್ಯದರ್ಶಿ ವೀಣಾ ಪೂಜಾರಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಪದ್ಮಶ್ರೀ ಪೂಜಾರಿ, ಕಾರ್ಯಕ್ರಮದ ನಿರ್ದೇಶಕರಾದ ಸಂಧ್ಯಾ ಶೆಟ್ಟಿ, ಬೆಳ್ಮಣ್ಣು ಜೇಸಿಐ ನಿಕಟ ಪೂರ್ವಾಧ್ಯಕ್ಷ ಸತೀಶ್ ಪೂಜಾರಿ, ಕಾರ್ಯದರ್ಶಿ ಸೌಜನ್ಯ ಕೋಟ್ಯಾನ್, ಮಹಿಳಾ ಜೇಸಿ ಸಂಯೋಜಕಿ ಶ್ವೇತಾ ಆಚಾರ್ಯ ಮೊದಲಾದವರು ವೇದಿಕೆಯಲ್ಲಿದ್ದರು.
ಸ್ಪರ್ಧೆಯು 0-02ವರ್ಷದೊಳಗಿನ ಮಕ್ಕಳಿಗೆ ಮುದ್ದುಕೃಷ್ಣ ಸ್ಪರ್ಧೆ, 02-04ವರ್ಷದೊಳಗಿನ ಮಕ್ಕಳಿಗೆ ಬಾಲಕೃಷ್ಣ ಸ್ಪರ್ಧೆ, 04-06 ವರ್ಷದೊಳಗಿನ ಮಕ್ಕಳಿಗೆ ಚೆಲ್ವ ಕೃಷ್ಣ ಸ್ಪರ್ಧೆ ಹಾಗೂ ೦೭ ವರ್ಷದೊಳಗಿನ ಮಗುವಿನೊಂದಿಗೆ ತಾಯಿ ಯಶೋಧ ಕೃಷ್ಣ ಸ್ಪರ್ಧೆ ನಡೆಸಲಾಯಿತು.
ಹೆಬ್ರಿ ಅಮೃತಾ ಭಾರತಿ ವಿದ್ಯಾ ಸಂಸ್ಥೆಯ ಉಪನ್ಯಾಸಕರಾದ ವೀಣೇಶ್ ಅಮೀನ್ ಅವರು ಕೃಷ್ಣವೇಷ ಸ್ಪರ್ಧಾ ಕಾರ್ಯಕ್ರಮದ ನಿರೂಪಣೆ ಮಾಡಿದರು. ನಿಟ್ಟೆ ವಿದ್ಯಾ ಸಂಸ್ಥೆಯ ಸುರೇಖಾ ಶೆಟ್ಟಿ, ಹಾಗೂ ವಂಜಾರಕಟ್ಟೆ ವಿದ್ಯಾ ಸಂಸ್ಥೆಯ ಆಶಾ ಅವರು ಸ್ಪರ್ಧೆಯ ತೀರ್ಪುಗಾರರಾಗಿ ಭಾಗವಹಿಸಿದ್ದರು.
ಕೃಷ್ಣವೇಷ ಸ್ಪರ್ಧೆಯ ಫಲಿತಾಂಶ:
0-02ವರ್ಷದೊಳಗಿನ ಮಕ್ಕಳಿಗೆ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ – ಭುವಿಕ್ ದೇವಾಡಿಗ ಹೊಸಮಾರು, ದ್ವಿತೀಯ ಸ್ಥಾನ – ಸಾನ್ಯ ವೈ. ಆಚಾರ್ಯ ಬೋಳ, ತೃತೀಯ ಸ್ಥಾನ – ಆಶ್ವಿ ಶೆಟ್ಟಿ
02-04ವರ್ಷದೊಳಗಿನ ಮಕ್ಕಳಿಗೆ ಬಾಲಕೃಷ್ಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ – ಆಧೃತಿ ಕುಲಾಲ್, ದ್ವಿತೀಯ ಸ್ಥಾನ – ವಿಕ್ರಮ್ ಆಚಾರ್ಯ ನಂದಳಿಕೆ, ತೃತೀಯ ಸ್ಥಾನ – ಮೋನಿಶಾ ನಂದಳಿಕೆ
04-06 ವರ್ಷದೊಳಗಿನ ಮಕ್ಕಳಿಗೆ ಚೆಲ್ವ ಕೃಷ್ಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ – ಸಾಧ್ವಿ ಎಸ್. ಶೆಟ್ಟಿ ಮೂಡುಬಿದಿರೆ, ದ್ವಿತೀಯ ಸ್ಥಾನ – ದಿಥಿ ಎಸ್. ಆಚಾರ್ಯ ಶಂಕರಪುರ, ತೃತೀಯ ಸ್ಥಾನ – ಸಾನ್ವಿ ದೇವಾಡಿಗ ಬೆಳ್ಮಣ್ಣು
7ವರ್ಷದೊಳಗಿನ ಮಗುವಿನೊಂದಿಗೆ ತಾಯಿ ಯಶೋಧ ಕೃಷ್ಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ – ಸಿರಿಶಾ ಮತ್ತು ಸೌಜನ್ಯ ಕೋಟ್ಯಾನ್ ನಂದಳಿಕೆ, ದ್ವಿತೀಯ ಸ್ಥಾನ – ಕ್ಷಿಪ್ರ ಮತ್ತು ಪ್ರತಿಮಾ ಸಚ್ಚೇರಿಪೇಟೆ, ತೃತೀಯ ಸ್ಥಾನ- ಸ್ಮಹಿ ಮತ್ತು ಶ್ವೇತಾ ಆಚಾರ್ಯ ಮುಂಡ್ಕೂರು ಇವರು ಬಹುಮಾನ ಪಡೆದಿರುತ್ತಾರೆ.

ಮಂಗಳೂರು:ಮಗು ಅಪಹರಣ ಪ್ರಕರಣ-ಎರಡು ಗಂಟೆಯೊಳಗೆ ಪ್ರಕರಣ ಬೇಧಿಸಿದ ಕಂಕನಾಡಿ ನಗರ ಠಾಣೆ ನಿರೀಕ್ಷಕ ಟಿ.ಡಿ.ನಾಗರಾಜ್ ನೇತೃತ್ವದ ತಂಡ

0

ಮಂಗಳೂರು:ಮಗು ಅಪಹರಣ ಪ್ರಕರಣ-ಎರಡು ಗಂಟೆಯೊಳಗೆ ಪ್ರಕರಣ ಬೇಧಿಸಿದ ಕಂಕನಾಡಿ ನಗರ ಠಾಣೆ ನಿರೀಕ್ಷಕ ಟಿ.ಡಿ.ನಾಗರಾಜ್ ನೇತೃತ್ವದ ತಂಡ

ಮಂಗಳೂರು:ನಗರದ ಅಳಪೆ ಪಡೀಲ್​ನಲ್ಲಿರುವ ಅರಣ್ಯ ಇಲಾಖೆಯ ಸಸ್ಯವನ ಬಳಿ ಆಗಸ್ಟ್​ 31ರಂದು ಸಂಜೆ ಎರಡೂವರೆ ವರ್ಷದ ಮಗು ಅಪಹರಣ ಘಟನೆ ನಡೆದಿದೆ. ಎರಡು ಗಂಟೆಯೊಳಗೆ ಪೊಲೀಸರು ಪ್ರಕರಣ ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇರಳದ ಎರ್ನಾಕುಲಂನ ನಿವಾಸಿ ಅನೀಶ್ ಕುಮಾರ್ (49) ಎಂಬಾತನನ್ನು ಬಂಧಿಸಲಾಗಿದೆ.

ಅನೀಶ್ ಕುಮಾರ್ ತನ್ನ ಊರಿನಿಂದ ಆಗಸ್ಟ್​ 28ರಂದು ಮನೆಯಲ್ಲಿ ಗಲಾಟೆ ಮಾಡಿಕೊಂಡು ಮುಂಬೈನತ್ತ ರೈಲಿನಲ್ಲಿ ಹೋಗಿದ್ದ. ಗೋವಾದಲ್ಲಿ ರೈಲಿನಿಂದ ಇಳಿದು, ಮುಂಬೈ ರೈಲನ್ನು ತಪ್ಪಿಸಿಕೊಂಡಿದ್ದ. ಆಗಸ್ಟ್​ 31ರಂದು ಗೋವಾದಿಂದ ಹೊರಟು ಮಂಗಳೂರಿಗೆ ಬಂದಿದ್ದಾನೆ. ಪಡೀಲ್ ಅಳಪೆಯ ಅರಣ್ಯ ಭವನದ ಮುಂಭಾಗದಲ್ಲಿ ಒಂದು ಹೆಣ್ಣು ಮಗು ನಡೆದುಕೊಂಡು ಹೋಗುತ್ತಿದ್ದುದನ್ನು ಕಂಡಿದ್ದಾನೆ. ತನಗೆ ಹೆಣ್ಣು ಮಕ್ಕಳಿಲ್ಲವೆಂಬ ಕಾರಣಕ್ಕೆ ಈ ಹೆಣ್ಣು ಮಗುವನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಕಾಸರಗೋಡು ಕಡೆಗೆ ಹೋಗುವ ರೈಲಿನಲ್ಲಿ ಹೋಗಿರುವುದರ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಕಾಸರಗೋಡಿನ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ, ತಕ್ಷಣ ಕಾರ್ಯ ಪ್ರವೃತ್ತರಾದ ಕಂಕನಾಡಿ ನಗರ ಪೊಲೀಸರು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಪಿಎಸ್​​ಐ ಶಿವಕುಮಾರ್​ ಕೆ. ಹಾಗೂ ತಂಡ ಕಾಸರಗೋಡಿಗೆ ತೆರಳಿ, ಅಲ್ಲಿನ ರೈಲ್ವೇ ಪೊಲೀಸರ ಸಹಾಯದೊಂದಿಗೆ ಆರೋಪಿಯನ್ನು ಬಂಧಿಸಿದೆ. ನಂತರ ಮಗುವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ.

ಆರೋಪಿಯ ಪತ್ತೆ ಕಾರ್ಯದಲ್ಲಿ ಕಂಕನಾಡಿ ನಗರ ಠಾಣೆ ನಿರೀಕ್ಷಕ ಟಿ.ಡಿ.ನಾಗರಾಜ್ ಮಾರ್ಗದರ್ಶನದಲ್ಲಿ ಪಿಎಸ್​​ಐ ಶಿವಕುಮಾರ್​ ಕೆ., ಎಎಸ್​​ಐ ಅಶೋಕ್ ಹಾಗೂ ಸಿಬ್ಬಂದಿಯಾದ ಅಶೀತ್ ಡಿಸೋಜಾ, ಕುಶಾಲ್ ಹೆಗ್ಡೆ, ರಾಘವೇಂದ್ರ ಹಾಗೂ ಪೂಜಾ ಭಾಗವಹಿಸಿದ್ದರು.

ಮಣಿಪಾಲ ಜ್ಞಾನಸುಧಾದ ವಿದ್ಯಾರ್ಥಿ ಚಿರಾಗ್ ರಾಜ್ಯಮಟ್ಟಕ್ಕೆ ಆಯ್ಕೆ

0

ಮಣಿಪಾಲ ಜ್ಞಾನಸುಧಾದ ವಿದ್ಯಾರ್ಥಿ ಚಿರಾಗ್ ರಾಜ್ಯಮಟ್ಟಕ್ಕೆ ಆಯ್ಕೆ

ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆದ ಅಥ್ಲೆಟಿಕ್ಸ್ ಆಯ್ಕೆ ಪ್ರಕ್ರಿಯೆಯಲ್ಲಿ ವಯೋಮಾನ 18ರ ಬಾಲಕರ ವಿಭಾಗದ 100ಮೀಟರ್ ಮತ್ತು 200ಮೀಟರ್ ಓಟದ ಸ್ಪರ್ಧೆಗಳಲ್ಲಿ ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಚಿರಾಗ್ ಸಿ ಪೂಜಾರಿ ರಾಜ್ಯಮಟ್ಟದ ಅಮೆಚೂರ್ ಜೂನಿಯರ್ ಅಥ್ಲೆಟಿಕ್ಸ್ ಕೂಟಕ್ಕೆ ಆಯ್ಕೆಯಾಗಿದ್ದಾರೆ.

ಇವರು ಹೆಬ್ರಿ ಸಂತೆಕಟ್ಟೆಯ ಚಂದ್ರ ಪೂಜಾರಿ ಹಾಗೂ ಜಯಲಕ್ಷ್ಮಿ ದಂಪತಿಯ ಸುಪುತ್ರ. ಸಾಧಕ ವಿದ್ಯಾರ್ಥಿಯನ್ನು ಅಜೆಕಾರು ಪದ್ಮ ಗೋಪಾಲ ಎಜ್ಯುಕೇಶನ್ ಟ್ರಸ್ಟ್ನ ಅಧ್ಯ಼ಕ್ಷರಾದ ಡಾ. ಸುಧಾಕರ ಶೆಟ್ಟಿ, ಸಂಸ್ಥೆಯ ಪ್ರಾಂಶುಪಾಲರು, ಹಾಗೂ ಬೋಧಕ ಬೋಧಕೇತರ ವರ್ಗ ಅಭಿನಂದಿಸಿರುತ್ತಾರೆ.

ಕಾರ್ಕಳ:ಸಾಧನ ಅಶ್ರಿತ್ ಅವರಿಗೆ ಜೀವಮಾನದ ಸಾಧನ ಪ್ರಶಸ್ತಿ

0

ಸಾಧನ ಅಶ್ರಿತ್ ಅವರಿಗೆ ಜೀವಮಾನದ ಸಾಧನ ಪ್ರಶಸ್ತಿ

ಕಾರ್ಕಳ:ಸುಮೇಧ ಫ್ಯಾಶನ್ ಇನ್ಸ್ಟಿಟ್ಯೂಟ್ ಮಾಲಕಿ ಸಾಧನ ಅಶ್ರಿತ್ ರವರಿಗೆ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿಯ ಜೀವಮಾನದ ಸಾಧನ ಪ್ರಶಸ್ತಿ ಲಭಿಸಿದೆ.ಬೆಂಗಳೂರಿನಲ್ಲಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿ ವತಿಯಿಂದ ನಡೆದ ಸಮಾರಂಭದಲ್ಲಿ ಕಾರ್ಕಳದ ಸುಮೇಧ ಫ್ಯಾಶನ್ ಇನ್ಸ್ಟಿಟ್ಯೂಟ್ ಮಾಲಕಿ ಸಾಧನ ಅಶ್ರಿತ್ ರವರಿಗೆ ಶೈಕ್ಷಣಿಕ,ಸಾಮಾಜಿಕ,ವಸ್ತ್ರವಿನ್ಯಾಸ ಕ್ಷೇತ್ರದಲ್ಲಿನ ತನ್ನ ವೈಯಕ್ತಿಕ ಹಾಗೂ ಮಹಿಳಾ ಸ್ವಾವಲಂಬಿ ಸಾಧನೆಗಾಗಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿಯ ಜೀವಮಾನದ ಸಾಧನಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು