Home Blog Page 89

ಕೊಲೆ,ಕಳ್ಳತನ ಆರೋಪಿ ಬೆಳ್ಮಣ್ ಮೂಲದ ರೋಹಿತ್ ಮಥಾಯಿಸ್ ಬಂಧನ ಕಂಕನಾಡಿ ನಗರ ಪೊಲೀಸ್ ಠಾಣೆಯ ನಿರೀಕ್ಷಕರಾದ ನಾಗರಾಜ್ ಟಿ.ಡಿ ನೇತೃತ್ವದ ತಂಡದಿಂದ ಕಾರ್ಯಾಚರಣೆ

0

ಕೊಲೆ,ಕಳ್ಳತನ ಆರೋಪಿ ಬೆಳ್ಮಣ್ ಮೂಲದ ರೋಹಿತ್ ಮಥಾಯಿಸ್ ಬಂಧನ

ಕಂಕನಾಡಿ ನಗರ ಪೊಲೀಸ್ ಠಾಣೆಯ ನಿರೀಕ್ಷಕರಾದ ನಾಗರಾಜ್ ಟಿ.ಡಿ ನೇತೃತ್ವದ ತಂಡದಿಂದ ಕಾರ್ಯಾಚರಣೆ

ಮಂಗಳೂರು:ಕುಲಶೇಖರ ಮನೆಯೊಂದರಲ್ಲಿ 2021 ರಂದು ನಡೆದಿದ್ದ ಚಿನ್ನಾಭರಣ ಕಳವು ಪ್ರಕರಣದ ಆರೋಪಿಯನ್ನು ಕಂಕನಾಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಕಳ ಬೆಳ್ಮಣ್ ಮಟ್ಕಕೆರೆ ಹೌಸ್ ರೋಹಿತ್ ಮುತ್ತಾಯಸ್ ಬಂಧಿತ ಆರೋಪಿ.ಆತನಿಂದ ಪ್ರಕರಣಕ್ಕೆ ಸಂಬಂಧಿಸಿದ 7 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿ ರೋಹಿತ್ ಮಥಾಯೀಸ್ ನು 2019 ರಲ್ಲಿ ಕಾರ್ಕಳ ಗ್ರಾಮಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಣ ಮತ್ತು ಚಿನ್ನಾಭರಣಗಳ ಆಸೆಗಾಗಿ ತನ್ನ ನೆರೆಕರೆಯವಾರದ ಶ್ರೀಮತಿ ಭರತಲಕ್ಷ್ಮಿ (ನಿವೃತ್ತ ಪಿ.ಡಿ.ಓ) ರವರನ್ನು ಬೆಳ್ಮಣ ಗ್ರಾಮದಲ್ಲಿನ ಮನೆಯಲ್ಲಿ ಕೊಲೆ ಮಾಡಿ, ಅವರ ಮೃತ ದೇಹವನ್ನು ಕಲ್ಯಾದ ಬಾವಿಯೊಂದರಲ್ಲಿ ಪ್ಲಾಸ್ಟಿಕ್ ನಲ್ಲಿ ಸುತ್ತಿ ಎಸೆದು ಹೋದ ಪ್ರಕರಣದಲ್ಲಿ ಬಂಧನವಾಗಿ ಜೈಲುವಾಸ ಅನುಭವಿಸಿ, ನಂತರ ಪ್ರಕರಣದ ವಿಚಾರಣೆಗೆ ಸಿಗದೇ 2 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಈತನು ತನ್ನ ಸಮುದಾಯಯ ಮಹಿಳೆಯರನ್ನು ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯಿಸಿಕೊಂಡು ಅವರ ವಿಶ್ವಾಸಗಳಿಸಿ, ನಂತರ ಅವರ ನಗದು ಹಣ ಹಾಗೂ ಚಿನ್ನಾಭರಣಗಳನ್ನುಕಳವು ಮಾಡಿಕೊಂಡು ಪರಾರಿಯಾಗುವ ಸ್ವಭಾವದವನಾಗಿದ್ದ. ಈ ಪ್ರಯತ್ನದಲ್ಲಿರುವಾಗಲೇ ಕಂಕನಾಡಿ ನಗರ ಪೊಲೀಸರು ಮಾಹಿತಿಗಳ ಆಧಾರದಲ್ಲಿ ಮುಂಬೈನಿಂದ ಮಂಗಳೂರಿಗೆ ಬಂದಿರುವ ಮಾಹಿತಿ ಆಧಾರದಲ್ಲಿ ವಶಕ್ಕೆ ಪಡೆದುಕೊಂಡಿರುವುದಾಗಿದೆ.

ಕಂಕನಾಡಿ ನಗರ ಪೊಲೀಸ್ ಠಾಣೆಯ ನಿರೀಕ್ಷಕರಾದ ನಾಗರಾಜ್ ಟಿ.ಡಿ ರವರ ನೇತೃತ್ವದಲ್ಲಿ ಪಿ.ಎಸ್.ಐ ರವರುಗಳಾದ ವಿನಾಯಕ ಭಾವಿಕಟ್ಟಿ, ಶಿವಕುಮಾರ್, ಯೊಗೀಶ್ವರನ್ ಹಾಗೂ ಹೆಚ್.ಸಿ ಜಯಾನಂದ ಮತ್ತು ಸಿಬ್ಬಂಧಿಗಳಾದ ರಾಘವೇಂದ್ರ, ಗಂಗಾಧರ್, ರಾಜೆಸಾಬ ಮುಲ್ಲಾ, ಚೇತನ್, ಮುತ್ತಣ್ಣ ಮತ್ತು ಪ್ರವೀಣ್ ರವರು ಆರೋಪಿತನ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

ನಿಟ್ಟೆ:ಜಸ್ಟೀಸ್ ಕೆ ಎಸ್ ಹೆಗ್ಡೆ ಉದ್ಯಮಾಡಳಿತ ಸಂಸ್ಥೆಯ ನಿರ್ದೇಶಕರಾಗಿ ಡಾ| ಸುಧೀರ್ ಎಂ.

0

ನಿಟ್ಟೆ:ಜಸ್ಟೀಸ್ ಕೆ ಎಸ್ ಹೆಗ್ಡೆ ಉದ್ಯಮಾಡಳಿತ ಸಂಸ್ಥೆಯ ನಿರ್ದೇಶಕರಾಗಿ ಡಾ| ಸುಧೀರ್ ಎಂ.

ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಅಂಗ ಸಂಸ್ಥೆಯಾದ ಜಸ್ಟೀಸ್ ಕೆ ಎಸ್ ಹೆಗ್ಡೆ ಉದ್ಯಮಾಡಳಿತ (ಎಂ.ಬಿ.ಎ) ಸಂಸ್ಥೆಯ ನಿರ್ದೇಶಕರಾಗಿ ಅದೇ ಸಂಸ್ಥೆಯ ಪ್ರಥಮ ವರ್ಷದ ಬ್ಯಾಚ್ ಹಳೆ ವಿದ್ಯಾರ್ಥಿ ಡಾ| ಸುಧೀರ್ ಎಂ ಅಧಿಕಾರ ಸ್ವೀಕರಿಸಿದರು.

ಡಾ| ಸುಧೀರ್ ಎಂ ಅವರು ಇಪತ್ತನಾಲ್ಕು ವರ್ಷಗಳ ಸುಧೀರ್ಘ ಅಧ್ಯಾಪನ, ಸಂಶೋಧನಾ ಮತ್ತು ಆಡಳಿತಾತ್ಮಕ ಪಾತ್ರಗಳನ್ನು ಯಶಸ್ಸಾಗಿ ನೆರವೇರಿಸಿದ್ದು, ಅವರು ತನ್ನ ಎಂ.ಬಿ.ಎ ಮಾರ್ಕೆಟಿಂಗ್, ಸ್ಟ್ರಾಟೆಜಿ, ಸಿ ಎಸ್ ಆರ್ ಮತ್ತು ಗ್ರಾಹಕರ ವರ್ತನೆಗೆ ಸಂಬಂಧಿಸಿ ಸಾಕಷ್ಟು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುವುದಲ್ಲದೆ, ಕಲಿಕಾ ವಿನೂತನ ಪ್ರಯೋಗಗಳನ್ನು ಅನುಭವೀ ಕಲಿಕೆ ಮತ್ತು ಕಾರ್ಪರೇಟ್ ಕತೆಗಳನ್ನು ಸಮನ್ವಯಗೊಳಿಸಿ ಸಾಕಷ್ಟು ಆವಿಷ್ಕಾರಗಳನ್ನು ಕೈಗೊಂಡಿರುತ್ತಾರೆ.

ಮಾರ್ಕೆಟಿಂಗ್, ಗ್ರಾಹಕ ಸಂಬಂಧಗಳು, ಟೀಂ ನಿರ್ವಹಣೆ, ನಾಯಕತ್ವ, ವೈಯಕ್ತಿಕ ಉತ್ಕ್ರಷ್ಟತೆ ಇತ್ಯಾದಿ ವಿಷಯಗಳ ಕುರಿತು ಡಾ| ಸುಧೀರ್ ಎಂ ಅವರು ಕಾರ್ಪರೇಟು ತರಬೇತುದಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

 

ಪರಶುರಾಮ ಥೀಮ್ ಪಾರ್ಕ್ ಅಕ್ರಮ ವಿರುದ್ದದ ಹೋರಾಟದ ರೂವಾರಿ ಕೃಷ್ಣ ಶೆಟ್ಟಿ ಸೋಲಿಸಲು ಸಂಚು? ಬಿಜೆಪಿ ಶಾಸಕರೊಂದಿಗೆ ಕಾಂಗ್ರೆಸ್ ಜಿಲ್ಲಾ ಯುವ ಕಾಂಗ್ರೆಸ್ ಅಭ್ಯರ್ಥಿಯ ಫೋಟೋ ಹುಟ್ಟುಹಾಕಿದೆ ಅನುಮಾನ…!

0

ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ:ಕೃಷ್ಣ ಶೆಟ್ಟಿ ಸೋಲಿಸಲು ಬೆಂಬಲ ಪಡೆದರೇ ಕಾಂಗ್ರೆಸ್ ಅಭ್ಯರ್ಥಿ?

ಯಶ್ ಪಾಲ್ ಸುವರ್ಣಗೂ ಯುವ ಕಾಂಗ್ರೆಸ್ ಆಂತರಿಕ ಚುನಾವಣೆಗೂ ಏನು ಸಂಭಂದ?

ಕೃಷ್ಣ ಶೆಟ್ಟಿ ಬಜಗೋಳಿಗೆ ಮತ ಚಲಾಯಿಸದಂತೆ ಕಾಂಗ್ರೆಸ್ ನ ಮಾಜಿ ಸಚಿವರ ಆಪ್ತನಿಂದಲೇ ಧಮ್ಕಿ?ಆಡಿಯೋ ವೈರಲ್

ಯುವ ಕಾಂಗ್ರೆಸ್ ಆಂತರಿಕ ಚುನಾವಣೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬರು ಎದುರಾಳಿಯನ್ನು ಸೋಲಿಸಲು ಬಿಜೆಪಿ ಶಾಸಕರೋರ್ವರ ಬೆಂಬಲ ಕೋರಿದ್ದಾರೆ ಎಂಬ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಈ ಕುರಿತಾಗಿ ಫೋಟೋ ಒಂದು ವೈರಲ್ ಆಗುತ್ತಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಅರ್ಜುನ್ ನಾಯರಿ ಎಂಬುವವರು ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣ ಎಂಬುವವರ ಬೆಂಬಲ ಕೋರಿದ್ದಾರೆ ಎಂದು ಹೇಳಲಾಗುತ್ತಿದೆ.ಯಶ್ ಪಾಲ್ ಜತೆಗಿನ ಫೋಟೋ ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ಸಿಗರು ಗರಂ ಆಗಿದ್ದಾರೆ.ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಸೋಲಿಸಿದ್ದ ಯಶ್ಪಾಲ್ ಸುವರ್ಣ ಹಿಜಾಬ್ ಗಲಾಟೆ ಸಂದರ್ಭದಲ್ಲೂ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದವರು.ಅಲ್ಲದೆ ಇತ್ತೀಚಿಗೆ ಸಿಎಂ ಸಿದ್ದರಾಮಯ್ಯರವರ ಪ್ರತಿಕೃತಿ ದಹನ ಪ್ರಕರಣದಲ್ಲಿ ಯಶಪಾಲ್ ಸುವರ್ಣ ವಿರುದ್ಧ ಪ್ರಕರಣ ದಾಖಲಾಗಿತ್ತು.ಇಂತಹವರೊಂದಿಗೆ ಕಾಂಗ್ರೆಸ್ ನ ಅಭ್ಯರ್ಥಿ ಅರ್ಜುನ್ ನಾಯರಿಗೆ ಏನು ಕೆಲಸ ಎಂದು ಕಾಂಗ್ರೆಸಿಗರು ಪ್ರಶ್ನೆ ಮಾಡುತ್ತಿದ್ದಾರೆ.

ಆಮಂತ್ರಣ ನೀಡಲು ಹೋಗಿದ್ದರು.
ಕಾರ್ಯಕ್ರಮವೊಂದರ ಆಹ್ವಾನ ಪತ್ರಿಕೆ ನೀಡಲು ಬಿಜೆಪಿ ಶಾಸಕ ಯಶಪಾಲ್ ಸುವರ್ಣರನ್ನು ಭೇಟಿ ಮಾಡಿದ್ದರು.ಈ ಸಂದರ್ಭದಲ್ಲಿ ತೆಗೆದಿದ್ದ ಫೋಟೋ ಇದಾಗಿದೆ.ಆದರೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ನಿಂತ ಅಭ್ಯರ್ಥಿಯೋರ್ವ ಬಿಜೆಪಿ ಶಾಸಕರೊಂದಿಗೆ ಪ್ರತ್ಯಕ್ಷವಾಗಿರುವುದು ಮಾತ್ರ ಕಾಂಗ್ರೆಸಿಗರಿಗೆ ಅನುಮಾನ ಹುಟ್ಟುಹಾಕಿದೆ.

ಕೃಷ್ಣ ಶೆಟ್ಟಿ ಸೋಲಿಸಲು ಬಿಜೆಪಿ ಸಾಥ್?
ಉಡುಪಿ ಜಿಲ್ಲೆಯ ಯುವ ಕಾಂಗ್ರೆಸ್ ಜಿಲ್ಲಾದ್ಯಕ್ಷ ಸ್ಥಾನಕ್ಕೆ ಐದು ಮಂದಿ ನಾಮಪತ್ರ ಸಲ್ಲಿಸಿದ್ದಾರೆ.ಆದರೆ ಇದರಲ್ಲಿ ಪ್ರಬಲ ಸ್ಪರ್ಧಿಯಾಗಿ ಕೃಷ್ಣ ಶೆಟ್ಟಿ ಬಜಗೋಳಿ ಹೊರಹೊಮ್ಮಿದ್ದಾರೆ.ಕೃಷ್ಣ ಶೆಟ್ಟಿ ಬಜಗೋಳಿ ಕಾರ್ಕಳದಲ್ಲಿ ನಡೆದಿದೆ ಎನ್ನಲಾದ ಪರಶುರಾಮ ಮೂರ್ತಿ ಅಕ್ರಮ ವಿವಾದದಲ್ಲಿ ಅವಿರತವಾಗಿ ಹೋರಾಟ ಮಾಡಿದವರು. ಕಾರ್ಕಳ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ,ಉಡುಪಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ,ಕಾರ್ಕಳ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿರುವ ಕೃಷ್ಣ ಶೆಟ್ಟಿ ಉಡುಪಿ ಜಿಲ್ಲಾಧ್ಯಕ್ಷ ಸ್ಥಾನದ ಪ್ರಬಲ ಸ್ಪರ್ಧಿ.

ಪರಶುರಾಮ ಥೀಮ್ ಪಾರ್ಕ್ ವಿವಾದ ರಾಜ್ಯದ ಗಮನ ಸೆಳೆದು ಬಿಜೆಪಿಯನ್ನೇ ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಪರಶುರಾಮ ಥೀಮ್ ಪಾರ್ಕ್ ಹೋರಾಟದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡದ್ದೇ ಈ ಕೃಷ್ಣ ಶೆಟ್ಟಿ ಬಜಗೋಳಿ .ಪರಶುರಾಮ ಥೀಮ್ ಪಾರ್ಕ್ ಸಂರಕ್ಷಣಾ ಸಮಿತಿ ಯನ್ನು ಕಟ್ಟಿ ಹೋರಾಟವನ್ನು ಕಾನೂನು ದಿಕ್ಕಿಗೆ ತಿರುಗಿಸಿದ್ದರು.ಕೇವಲ ಹೇಳಿಕೆಗಳಿಗೆ ಸೀಮಿತವಾಗಿದ್ದ ವಿಚಾರವನ್ನು ಕೋರ್ಟ್ ಕಟಕಟೆಗೆ ಎಳೆದು ತರುವಲ್ಲಿ ಯಶಸ್ವಿಯಾಗಿದ್ದರು.ಬಿಜೆಪಿಗೆ ನುಂಗಲಾರದ ತುತ್ತಾಗಿರುವ ಪರಶುರಾಮ ವಿಚಾರದ ಮುಂಚೂಣಿ ವ್ಯಕ್ತಿ ಕೃಷ್ಣ ಶೆಟ್ಟಿಯನ್ನು ಜಿಲ್ಲಾ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಸೋಲಿಸಲು ಬಿಜೆಪಿಯವರೂ ಸಾಥ್ ನೀಡಿದ್ದಾರೆ ಎಂಬ ಗುಮಾನಿ ಇದೆ.

ಆನ್ಲೈನ್ ಮೂಲಕ ನಡೆಯುವ ವೋಟ್ ಆದುದರಿಂದ ಯಾರೂ ಕೂಡ ವೋಟ್ ಮಾಡಬಹುದು.ಕಾಂಗ್ರೆಸ್ ಕಾರ್ಯಕರ್ತರು ಮಾತ್ರವಲ್ಲದೆ ಬೇರೆ ಪಕ್ಷದ ಕಾರ್ಯಕರ್ತರೂ ವೋಟ್ ಹಾಕಬಹುದು.ಈ ವ್ಯವಸ್ಥೆಯ ಉಪಯೋಗಕ್ಕಿಂತ ದುರುಪಯೋಗವೇ ಹೆಚ್ಚು.ಇದನ್ನೇ ಬಂಡವಾಳವನ್ನಾಗಿಸಿಕೊಳ್ಳುವ ಅವಕಾಶ ಹೆಚ್ಚಾಗಿದ್ದು ಕೃಷ್ಣ ಶೆಟ್ಟಿಯನ್ನು ಶತಾಯಗತಾಯ ಸೋಲಿಸಲೇ ಬೇಕೆಂಬ ಸಂಚು ಹೂಡಲಾಗಿದೆ ಎನ್ನಲಾಗುತ್ತಿದೆ.

ಆಡಿಯೋ ವೈರಲ್!
ಕೃಷ್ಣ ಶೆಟ್ಟಿ ಬಜಗೋಳಿಯವರಿಗೆ ವೋಟ್ ಹಾಕದಂತೆ ಸ್ವತಃ ಕಾಂಗ್ರೆಸ್ ನ ಮಾಜಿ ಸಚಿವರೋರ್ವರ ಆಪ್ತನಿಂದ ಕಾಂಗ್ರೆಸ್ ನ ಕಾರ್ಯಕರ್ತರಿಗೆ ಬೆದರಿಕೆ ಕರೆ ಬಂದಿದೆ ಎನ್ನಲಾಗುತ್ತಿದ್ದು ಇದೀಗ ಆ ಆಡಿಯೋ ವಾಟ್ಸಾಪ್ ಗ್ರೂಪ್ ಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.ಹಗಲು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ರಾತ್ರಿ ಬಿಜೆಪಿಯವರೊಂದಿಗೆ ಸೇರುವ ಅವಕಾಶವಾದಿ,ಸೈದ್ದಂತಿಕ ಸ್ಪಷ್ಟತೆ ಇಲ್ಲದ ಇಂತಹ ನಾಯಕರು ಕಾಂಗ್ರೆಸ್ ಪಕ್ಷವನ್ನು ಪಾತಾಳಕ್ಕೆ ತಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಕಾಂಗ್ರೆಸಿಗರು ಆಡಿಕೊಳ್ಳುತ್ತಿದ್ದ್ದಾರೆ.

ಸದ್ಯ ವೈರಲ್ ಆಗುತ್ತಿರುವ ಫೋಟೋ ಮತ್ತು ಆಡಿಯೋದ ಅಸಲಿಯತ್ತು ಬಯಲಾಗಬೇಕು ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಆಶಯವಾಗಿದ್ದು ಈ ನಿಟ್ಟಿನಲ್ಲಿ ಕೆಪಿಸಿಸಿ ಗಮನಹರಿಸಬೇಕಾಗಿದೆ.ಇಲ್ಲದಿದ್ದಲ್ಲಿ ಕಾಂಗ್ರೆಸ್ ಕಾರ್ಯಕರ್ತರೇ ಹೊಡೆದಾಡಿಕೊಳ್ಳುವ ದಿನ ದೂರವಿಲ್ಲ.

 

ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣರವರೊಂದಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಅರ್ಜುನ್ ನಾಯರಿರವರ ಫೋಟೋ ವೈರಲ್ ಆಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣರವರೊಂದಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಅರ್ಜುನ್ ನಾಯರಿರವರ ಫೋಟೋ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣರವರೊಂದಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಅರ್ಜುನ್ ನಾಯರಿರವರ ಫೋಟೋ ವೈರಲ್ ಆಗುತ್ತಿದೆ.

ಕಾರ್ಕಳ : ಹೋಂದಾಣಿಕೆ ರಾಜಕಾರಣ ಪಕ್ಷ ಎಂದಿಗೂ ಸಹಿಸುವುದಿಲ್ಲ- ರಕ್ಷಿತ್ ಶಿವರಾಂ

0

ಕಾರ್ಕಳ : ಹೋಂದಾಣಿಕೆ ರಾಜಕಾರಣ ಪಕ್ಷ ಎಂದಿಗೂ ಸಹಿಸುವುದಿಲ್ಲ- ರಕ್ಷಿತ್ ಶಿವರಾಂ
ಕಾರ್ಕಳ :ಹೋಂದಾಣಿಕೆ ರಾಜಕಾರಣ ಪಕ್ಷ ಎಂದಿಗೂ ಸಹಿಸುವುದಿಲ್ಲ .ಪಕ್ಷವನ್ನು ಮತ್ತೊಮ್ಮೆ ತಳ ಮಟ್ಟದಿಂದ ಕಟ್ಟ ಬೇಕಾಗಿದೆ ಪ್ರತಿಯೊಬ್ಬ ನಾಯಕರೂ ಕೂಡ ಪಕ್ಷದ ನೆಲೆಯಲ್ಲಿ ಕೆಲಸ ಮಾಡಬೇಕಿದೆ ಎಂದು
ಕಾರ್ಕಳ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳಾಗಿ ನೇಮಕಗೊಂಡಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಕ್ಷಿತ್ ಶಿವರಾಂ ತಿಳಿಸಿದರು.ಅವರು ಉಸ್ತುವಾರಿಯಾಗಿ ಪ್ರಥಮ ಬಾರಿ ಕಾರ್ಕಳಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಕಾರ್ಕಳ ಹಾಗೂ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪಕ್ಷದ ಪದಾಧಿಕಾರಿಗಳು ಮತ್ತು ಪಕ್ಷದ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಪಕ್ಷ ಸಂಘಟನೆಯ ದೃಷ್ಟಿಯಿಂದ ಹಲವು ಮಾಹಿತಿಯನ್ನು ಪಡೆದುಕೊಂಡರು. ಪಕ್ಷದ ನಾಯಕರ ಮತ್ತು ಕಾರ್ಯಕರ್ತರ ಅಹವಾಲು ಸ್ವೀಕರಿಸಿ ಪಕ್ಷ ಸಂಘಟನೆಯ ನಿಟ್ಟಿನಲ್ಲಿ ಹಲವು ಮಹತ್ವದ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಸಮಿತಿ ಉಪಾಧ್ಯಕ್ಷ ಡಿ ಆರ್ ರಾಜು ಸಾಂದರ್ಭಿಕವಾಗಿ ಪಕ್ಷದ ಅಭಿವೃದ್ದಿ ಹಾಗೂ ಬಲವರ್ಧನೆ ಬಗ್ಗೆ ಮಾತನಾಡಿದರು
ಕಾಂಗ್ರೆಸ್ ಮುಂದಾಳು ಉದಯ ಕುಮಾರ ಶೆಟ್ಟಿ ಮಾತನಾಡಿ ಪಕ್ಷದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಕಾಂಗ್ರೆಸ್ ಮುಖಂಡ ಸುರೇಂದ್ರ ಶೆಟ್ಟಿ, ಹೆಬ್ರಿ ಬ್ಲಾಕ್‌ ಅಧ್ಯಕ್ಷ ಚಂದ್ರಶೇಖರ್ ಬಾಯರಿ, ಕಾರ್ಕಳ ಬ್ಲಾಕ್ ಅಧ್ಯಕ್ಷ
ಸದಾಶಿವ ದೇವಾಡಿಗ, ಹಿರಿಯ ನಾಯಕರಾದ ಪ್ರಭಾಕರ ಬಂಗೇರ ಉಪಸ್ಥಿತರಿದ್ದರು
ಕಾರ್ಕಳ ,ಹೆಬ್ರಿ ಬ್ಲಾಕ್ ಹಿರಿಯ ಮುಖಂಡರು
ಹಾಗೂ ಪಕ್ಷದ ಪ್ರಮುಖರು ಭಾಗಿಯಾಗಿದರು. ಕಾಂಗ್ರೆಸ್ ವಕ್ತಾರ ಶುಭದ ರಾವ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು

ಬೈಲೂರು:ವಾಲಿಬಾಲ್ ಪಂದ್ಯಾಟದಲ್ಲಿ ಹ್ಯಾಟ್ರಿಕ್ ಗೆಲುವು

0

ಬೈಲೂರು:ವಾಲಿಬಾಲ್ ಪಂದ್ಯಾಟದಲ್ಲಿ ಹ್ಯಾಟ್ರಿಕ್ ಗೆಲುವು

ಬೈಲೂರು: ಸರಕಾರಿ ಪದವಿ ಪೂರ್ವ ಕಾಲೇಜು ಬೈಲೂರು ಇಲ್ಲಿನ ಬಾಲಕರ ತಂಡ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಬಜೆಗೋಳಿಯಲ್ಲಿ ನಡೆದ ತಾಲೂಕು ಮಟ್ಟದ ಈ ಪಂದ್ಯಾಟದಲ್ಲಿ ಸಂಸ್ಥೆಯ ಬಾಲಕಿಯರ ತಂಡವು ದ್ವಿತೀಯ ಸ್ಥಾನ ಪಡೆದಿದೆ. ಸಾಧಕ ಉಭಯ ತಂಡದ ಸದಸ್ಯರಿಗೆ ಕಾಲೇಜು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು ಸಂಸ್ಥೆಯ ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ. ಮಾರ್ಗದರ್ಶಕರಾದ ದೈಹಿಕ ಶಿಕ್ಷಣ ನಿರ್ದೇಶಕ ಫ್ರೆಡ್ರಿಕ್ ರೇಬೆಲ್ಲೂ, ಕಾಲೇಜಿನ ಕ್ರೀಡಾ ಸಂಚಾಲಕ-ಉಪನ್ಯಾಸಕ ರತ್ನಾಕರ ಪೂಜಾರಿ, ತರಬೇತುದಾರರಾದ ಮಹಮ್ಮದ್ ಶೇಕ್ ಅಯಾನ್, ಮಹಮ್ಮದ್ ಶೇಕ್ ಅಮನ್ ಹಾಗೂ ಗುರುರಾಜ್ ರವರಿಗೆ ಸಂಸ್ಥೆ ಅಭಿವಂದನೆ ಸಲ್ಲಿಸಿದೆ.

ಕಾರ್ಕಳ:ಶ್ರಮಿಕರ ಅನ್ನದ ಬಟ್ಟಲಿಗೆ ಕಾಂಗ್ರೆಸ್ ಹಾಕಿದ್ದು ಕಲ್ಲು. ಪ್ರವಾಸೋದ್ಯಮ ವಿರೋಧಿ ಕಾರ್ಕಳ ಕಾಂಗ್ರೆಸ್ಸಿಗರ ವಿರುದ್ಧ ಸುಮಿತ್ ಶೆಟ್ಟಿ ಕಿಡಿ

0

ಶ್ರಮಿಕರ ಅನ್ನದ ಬಟ್ಟಲಿಗೆ ಕಾಂಗ್ರೆಸ್ ಹಾಕಿದ್ದು ಕಲ್ಲು.

ಪ್ರವಾಸೋದ್ಯಮ ವಿರೋಧಿ ಕಾರ್ಕಳ ಕಾಂಗ್ರೆಸ್ಸಿಗರ ವಿರುದ್ಧ ಸುಮಿತ್ ಶೆಟ್ಟಿ ಕಿಡಿ

ಕಾರ್ಕಳ : ಸುಳ್ಳನ್ನು ಶೃಂಗರಿಸಬಹುದಾದ ಜಾಣ್ಮೆ ನಿಮ್ಮಲ್ಲಿರಬಹುದು. ಸತ್ಯವನ್ನು ಬೆತ್ತಲಾಗಿಸುವಂತ ಶಕ್ತಿ ನಿಮ್ಮಿಂದ ಸಾಧ್ಯವಿಲ್ಲ ಎಂದು ಬೈಲೂರಿನ ಪರಶುರಾಮ ಪ್ರತಿಮೆಗೆ ಸಂಬಂದಿಸಿ ಸ್ಥಳಿಯವಾಗಿ ಒಂದು ರೀತಿ, ನ್ಯಾಯಾಲಯದಲ್ಲಿ ಇನ್ನೊಂದು ರೀತಿ ನಡೆದುಕೊಳ್ಳುತ್ತಿರುವ ಕಾರ್ಕಳ ಕಾಂಗ್ರೆಸ್‌ನ ವಿಕೃತ ಮನಸ್ಸುಗಳ ವಿರುದ್ಧ ಮಾಜಿ ಜಿ.ಪಂ. ಸದಸ್ಯ ಸುಮಿತ್ ಶೆಟ್ಟಿ ಕೌಡೂರು ಕಿಡಿಕಾರಿದ್ದಾರೆ.

ಬೈಲೂರಿನ ಪರಶುರಾಮ ಪ್ರತಿಮೆಗೆ ಸಂಬಂಧಿಸಿ, ಕಳೆದೊಂದು ವರ್ಷದಿಂದ ಪ್ರತಿಮೆ ಫೈಬರಿನದು, ಪ್ಲಾಸ್ಟಿಕ್‌ನದ್ದು ಎಂದೆಲ್ಲ ಸಾರ್ವಜನಿಕ ವಲಯದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಅಬ್ಬರದ ಅಪಪ್ರಚಾರ ನಡೆಸಿ, ಬೈಲೂರು-ಕಾರ್ಕಳ ಪ್ರವಾಸೋದ್ಯಮಕ್ಕೆ ತಡೆಯನ್ನುಂಟುಮಾಡಿ, ಬೃಹತ್ ನಷ್ಟ ಮಾಡಿದ್ದಲ್ಲದೇ, ಸ್ಥಳಿಯವಾಗಿ ಹಾಗೂ ರಾಜ್ಯದ ಜನತೆಯ ದಾರಿ ತಪ್ಪಿಸಿ ವಿಕೃತ ಮೆರೆದ ಕಾರ್ಕಳ ಕಾಂಗ್ರೆಸ್ಸಿನ ಪಟ್ಟ ಭದ್ರ ಹಿತಾಶಕ್ತಿಗಳು ನೀವು. ನಿಮ್ಮ ದೊಡ್ಡ ಮಟ್ಟದ ಅಪಪ್ರಚಾರದಿಂದ ಕಳೆದೊಂದು ವರ್ಷದಿಂದ ಬೈಲೂರು, ಕಾರ್ಕಳದ ಪ್ರವಾಸೋದ್ಯಮಕ್ಕೆ ಆದ ನಷ್ಟ ಎಷ್ಟೆಂದು ಅಂದಾಜಿಸಿದ್ದೀರಾ? ನಿಮ್ಮಿಂದ ಇಲ್ಲಿನ ವಿವಿಧ ರಂಗದ ಶ್ರಮ ಜೀವಿಗಳಿಗೆ ಆದ ನಷ್ಟಕ್ಕೆ ಮಿತಿಯಿಲ್ಲ. ಇಲ್ಲಿನ ಹಲವು ರಂಗಗಳಿಗೆ ಆದ ಭಾರಿ ನಷ್ಟಕ್ಕೆ ನೀವೆ ಹೊಣೆಗಾರರಾಗಿದ್ದೀರಿ ಎಂದು ಎಚ್ಚರಿಸಿದ್ದಾರೆ.

ಜನರ ದಾರಿ ತಪ್ಪಿಸಿದ ನೀಚ ಮನಸ್ಸುಗಳೇ ನೀವು ಮಾಡಿದ ತಪ್ಪಿಗೆ ಕಾರ್ಕಳದ ಕೀರ್ತಿಯನ್ನು ರಾಜ್ಯ, ದೇಶ ಮಟ್ಟದಲ್ಲಿ ಹರಾಜು ಹಾಕಿ ನಷ್ಟವನ್ನುಂಟು ಮಾಡಿದ ನೀವು ಕಾರ್ಕಳ ಹಾಗೂ ನಾಡಿನ ಜನತೆಯ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾಾರೆ. ಪ್ರತಿಮೆ ಸಂಬಂಧ ನ್ಯಾಯಾಲಯದಲ್ಲಿ ʻನಮ್ಮದು ಜಿಎಸ್‌ಟಿ ಕುರಿತಷ್ಟೆ ಆಕ್ಷೇಪವಿರುವುದು. ಇನ್ನುಳಿದಂತೆ ವಿವಾದವಿಲ್ಲʻ ಎನ್ನುತ್ತೀರಿ. ಪ್ರತಿಮೆಯು ಬ್ರಾಸ್, ಬ್ರಾನ್ಸ್ ಎಂದು ಒಪ್ಪಿಕೊಳ್ಳುತ್ತೀರಿ. ಇಲ್ಲಿ ಸ್ಥಳಿಯವಾಗಿ ಪ್ರತಿಮೆ ಕುರಿತು ಅಪಪ್ರಚಾರ ನಡೆಸುತ್ತ ಬಂದಿರುವಿರಿ. ಬೀದಿ ಬದಿಯಲ್ಲಿ ಅರಚಾಡುತ್ತ ಜನರ ದಾರಿ ತಪ್ಪಿಸಲು ಬೀದಿ ನಾಟಕ ಆಡುತ್ತೀರಿ. ಅತ್ತ ಕಡೆ ನ್ಯಾಯಾಲಯದಲ್ಲಿ ಸತ್ಯ ಒಪ್ಪಿಕೊಳ್ಳುತ್ತಿರುವ ನಿಮ್ಮ ನೀಚ ರಾಜಕಾರಣದ ತೆವಳಿಗೆ ಕಾರ್ಕಳದ ಕೀರ್ತಿ ಅಳಿಸುತ್ತಿದ್ದೀರಿ.

ನಿಮ್ಮ ಸ್ವಾರ್ಥ, ಅವಿವೇಕಿತನ, ಹತಾಶೆಯ ಕುಚೇಷ್ಠೆಯ ಅಪಪ್ರಚಾರದಿಂದ ಕಾರ್ಕಳ ಕ್ಷೇತ್ರದ ಪ್ರವಾಸೋದ್ಯಮ ನೆಲಕಚ್ಚಿ ಹೋಗಿದೆ. ಬೈಲೂರು ಸೇರಿದಂತೆ ಕಾರ್ಕಳವು ಇಡೀ ರಾಜ್ಯದ ಜನತೆಯನ್ನು ಪ್ರವಾಸಿ ಕ್ಷೇತ್ರವಾಗಿ ಕೈ ಬೀಸಿ ಕರೆಯುತಿತ್ತು. ಲಕ್ಷಾಂತರ ಮಂದಿ ಧಾವಿಸಿ, ಪ್ರವಾಸಿಗರ ದಂಡೇ ಜನಸಾಗಾರೋಪಾದಿಯಲ್ಲಿ ಇತ್ತ ಕಡೆ ಹರಿದು ಬಂದು ವ್ಯಾಪಾರ-ವಹಿವಾಟು ನಡೆದು ಹಲವರ ಬದುಕಿಗೆ ಅನ್ನದ ದಾರಿಯಾಗಿತ್ತು. ಆರ್ಥಿಕ ಚೇತರಿಕೆಯ ಕೇಂದ್ರವಾಗಿ ಬೈಲೂರು ಪರಿಸರ ಹಾಗೂ ಕಾರ್ಕಳ ಬೆಳೆದು ದೊಡ್ಡ ಬದಲಾವಣೆ ಕಡೆ ಸಾಗಿತ್ತು.

ಸಾಂಸ್ಕೃತಿಕ ಸಹಿತ ವಿವಿಧ ಚಟುವಟಿಕೆಗಳು ನಿರಂತರವಾಗಿ ನಡೆಯುತಿದ್ದವು. ಕಾರ್ಕಳ ಪ್ರವಾಸಿ ಕೇಂದ್ರವಾಗುವುದನ್ನು ಸಹಿಸದೆ ನೀವು ಇದನೆಲ್ಲ ಹಾಳುಗೆಡವಿದ್ದೀರಿ. ಬಡ ವ್ಯಾಪಾರಿಗಳ ಹೊಟ್ಟೆಗೆ ಹೊಡೆದು ಅನ್ನ ಕಿತ್ತುಕೊಂಡಿದ್ದೀರಿ. ಕಳೆದೊಂದು ಒಂದು ವರ್ಷದಿಂದ ಯಾವುದೇ ಚಟುವಟಿಕೆ ಇಲ್ಲದೆ ಆದ ಈ ಎಲ್ಲ ನಷ್ಟಕ್ಕೆ ನೀವೆ ಹೊಣೆಗಾರರು ಎಂದಿರುವ ಅವರು ಕಾರ್ಕಳದ ಮಾನವನ್ನು ಅಪಪ್ರಚಾರದ ಮೂಲಕ ಕಳೆದು ಕ್ಷೇತ್ರಕ್ಕೆ ಅಪಕೀರ್ತಿ ತಂದಿರುವ ನೀವುಗಳು ಕ್ಷೇತ್ರದ ಜನತೆಯ ಕ್ಷಮೆಗೂ ಆರ್ಹರಲ್ಲ ಎಂದಿದ್ದಾರೆ. ಅಭಿವೃದ್ಧಿ, ಪ್ರವಾಸೋದ್ಯಮ ಎರಡಕ್ಕೂ ತೊಡಕು ಮಾಡುತ್ತ ಬೆಂಗಳೂರಿನಲ್ಲಿ ಹೋಗಿ ಪ್ರತಿಮೆ ಸಂಬಂಧ ಅಪಚಾರದ ಪ್ರತಿಭಟನೆ ನಡೆಸುತ್ತೀರಿ. ನಿಮಗೆ ತಾಕತ್ತಿದ್ದರೆ ಪ್ರತಿಭಟನೆ ನಡೆಸುವುದರ ಬದಲು ಸರಕಾರದ ಮೇಲೆ ಹಣ ಬಿಡುಗಡೆಗೊಡೆಗೆ ಒತ್ತಾಯಿಸಿ. ಪ್ರತಿಮೆ ಕಾಮಗಾರಿ ಪೂರ್ಣಗೊಳಿಸಲು ಹಣ ಬಿಡುಗಡೆ ಮಾಡಿಸಬೇಕಿತ್ತು. ಕಾರ್ಕಳ ಪ್ರವಾಸೋದ್ಯಮ ಮತ್ತೆ ವೈಭವ ಕಾಣಲು ಸಹಕರಿಸಬೇಕಿತ್ತು. ಇದನ್ನು ಮಾಡಿಲ್ಲ. ಮಾಡುವ ಮನಸ್ಸು ನಿಮ್ಮದಲ್ಲ. ಅಭಿವೃದ್ಧಿ, ಪ್ರವಾಸೋದ್ಯಮ ವಿರೋಧಿ ಮನಸ್ಥಿತಿಯ ನಿಮ್ಮಿಂದ ಇದು ಅಸಾಧ್ಯವೆನ್ನುವುದು ಕಾರ್ಕಳದ ಪ್ರತಿ ಜನತೆಯ ಮನಸ್ಸಿಗೂ ತಿಳಿದಿದೆ ಎಂದಿದ್ದಾರೆ.

ಕಾರ್ಕಳ:ಮದ್ಯ, ಮಾದಕ ದ್ರವ್ಯಗಳಿಂದ ದೂರವಿರಿ: ಅಹ್ಮದ್ ಶರೀಫ್ ಸಅದಿ ಕರೆ

0

ಕಾರ್ಕಳ:ಮದ್ಯ, ಮಾದಕ ದ್ರವ್ಯಗಳಿಂದ ದೂರವಿರಿ: ಅಹ್ಮದ್ ಶರೀಫ್ ಸಅದಿ ಕರೆ
ಕಾರ್ಕಳ:ತಂಬಾಕು,ಮದ್ಯ,ಮಾದಕ ದ್ರವ್ಯ ನಿಮ್ಮಲ್ಲಿರುವ ಮನುಷ್ಯತ್ವ, ದೇಹದ ಸಮತೋಲನ, ಹಾಗೂ
ಮನಸ್ಸಿನ ಸದ್ಭಾವನೆಯನ್ನು ಕೊಂದು ಮನುಷ್ಯನನ್ನು ವಿಕೃತಗೊಳಿಸುತ್ತದೆ ಇವುಗಳಿಂದ ದೂರವಿರಿ ಎಂದು ಸರ್ ಹಿಂದ್ ಇಸ್ಲಾಮಿಕ್ ಅಕಾಡೆಮಿ, ತ್ವೈಭಾ ಗಾರ್ಡನ್ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ಅಹ್ಮದ್ ಶರೀಫ್ ಸಅದಿ ಕರೆ ನೀಡಿದರು.

ಅವರು ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಜೋಡುರಸ್ತೆ ಬಿ ಆರ್ ಕೆ ವೃತ್ತದಲ್ಲಿ ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈವ ಸಲ್ಲಮರ ಜನ್ಮದಿನದ ಅಂಗವಾಗಿ ಹಯಾತುಲ್ ಇಸ್ಲಾಂ ಅಸೋಸಿಯೇಷನ್, ಬಂಗ್ಲೆಗುಡ್ಡೆ , ಸಲ್ಮಾನ್ ಜುಮ್ಮಾ ಮಸ್ಜಿದ್ ,ಸರ್ ಹಿಂದ್ ಅಕಾಡೆಮಿ, ತ್ವೈಭಾ ಗಾರ್ಡನ್ ಶಿಕ್ಷಣ ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ ಬೃಹತ್ ಮಿಲಾದ್ ಸಂದೇಶ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಎಲ್ಲ ಧರ್ಮ ಗ್ರಂಥಗಳು ವಿಶ್ವಕ್ಕೆ ಶಾಂತಿಯ ಸಂದೇಶ ಸಾರಿದೆ.ಇಸ್ಲಾಂ ಶಾಂತಿ , ಸೌಹಾರ್ದತೆ ಸಹೋದರತೆಯ ಸಂಕೇತವಾಗಿದೆ. ಭಯೋತ್ಪಾದನೆ, ಭೀಕರವಾದ, ಅಶಾಂತಿ, ಅಸ್ಪ್ರಶ್ಯತೆ, ಅನೀತಿ, ಅನಾಚಾರ, ಅತ್ಯಾಚಾರ, ಅಕ್ರಮಗಳನ್ನು ಇಸ್ಲಾಂ ಯಾವತ್ತೂ ಒಪ್ಪುದಿಲ್ಲ ಅದು ಇಸ್ಲಾಂ ಸಂಸ್ಕೃತಿಯಲ್ಲ ಎಂದ ಅವರು ಕುರಾನ್ ಮತ್ತು ಪ್ರವಾದಿಯವರ ಇಸ್ಲಾಂ ಸಂದೇಶಗಳ ಮೂಲಕ ಸಮಾಜದಲ್ಲಿ ಅನ್ಯ ದರ್ಮೀಯರೊಂದಿಗೂ ಶಾಂತಿ ಸೌಹಾರ್ದತೆಯಿಂದ ಬಾಳುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಸರ್ ಹಿಂದ್ ಅಕಾಡೆಮಿ, ತ್ವೈಭಾ ಗಾರ್ಡನ್ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶರೀಫ್, ಕರ್ನಾಟಕ ಮುಸ್ಲಿಂ ಜಮಾತ್ ಕಾರ್ಕಳ ತಾಲೂಕು ಅಧ್ಯಕ್ಷ ನಾಸಿರ್ ಶೇಖ್ ಬೈಲೂರು, ಜಲ್ವ ಏ ನೂರ್ ನ ಮೌಲಾನ ಸಹೀದ್ ರಝಾ, ಹಯಾತುಲ್ ಇಸ್ಲಾಂ ಅಸೋಸಿಯೇಷನ್, ಬಂಗ್ಲೆಗುಡ್ಡೆ ನ ಪ್ರಮುಖರಾದ ರಜ್ಜಬ್ ಎ ಕೆ ,ಮಾಜಿ ಅಧ್ಯಕ್ಷರುಗಳಾದ ಬಷೀರ್ ಸಾಣೂರು, ಹನೀಫ್ ಬೆಲ್ಲೂರ್, ರಜಬ್ ಪರನಿರ್, ಮಾಜಿ ಉಪಾಧ್ಯಕ್ಷ ಕೆ ನೂರುದ್ದೀನ್, ಅಬ್ದುಲ್ ರಹಿಮಾನ್, ಸೇವಾದಳದ ಅಧ್ಯಕ್ಷ ಅಬ್ದುಲ್ಲಾ ಶೇಖ್,
ಝೈನುಲ್ ಅಭಿದ್ ಸಖಾಫಿ ಮಾಗುಂಡಿ, ಅಬ್ದುಲ್ ಖಾದರ್ ಮದನಿ ಅಳಕೆ, ಮೆಹಮೂದ್ ಜುಹಾರಿ ಚೆರ್ಕಳ, ಅಷ್ಪಾಕ್ ಅಹಮದ್ ಸಖಾಫಿ, ಶಮೀಮ್ ಸಹದಿ ಸುರತ್ಕಲ್, ಇಸ್ಮಾಯಿಲ್ ಮಾಸ್ಟರ್ ಕೊಣಾಜೆ
ಎಸ್ ವೈ ಎಸ್ ಮುಖಂಡರುಗಳಾದ ದಾವೂದ್ ಪರನಿರ್, ರಫೀಕ್ , ಮುಬೀನ್ ,ಎಸ್ ಎಸ್ ಎಫ್ ಮುಖಂಡರುಗಳಾದ ಅಲ್ತಾಫ್ ಪರನಿರ್, ನವಾಝ್ ಶರೀಫ್ , ಫಯಾಝ್ ಪರನಿರ್, ಮಯ್ಯದಿ, ಕೆ ಹಸನ್ ಉಪಸ್ಥಿತರಿದ್ದರು.

ಬಂಗ್ಲೆಗುಡ್ಡೆ ಸಲ್ಮಾನ್ ಜುಮ್ಮಾ ಮಸೀದಿ ವಠಾರದಲ್ಲಿ ನಡೆದಂತಹ ಧ್ವಜಾರೋಹಣ ಕಾರ್ಯಕ್ರಮವನ್ನು ಹಿರಿಯ ದೀನಿ ವಿದ್ವಾಂಸ ಇಬ್ರಾಹಿಮ್ ಫೈಝಿ ಪುಲಿಕ್ಕೂರು ಉಸ್ತಾದ್ ನೆರವೇರಿಸಿದರು
ಅಲವಿ ಫಜಲಿಲ್ ಅಲ್ ಜೆಫ್ರಿ ತoಘಳ್ ಮಿಲಾದ್ ಸಂದೇಶ ರ್ಯಾಲಿಗೆ ಚಾಲನೆ ನೀಡಿದರು.

ಉಡುಪಿ:ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ:ಜ್ಞಾನಸುಧಾದ ಪ್ರೀತಮ್. ಪಿ. ಎಂ. ರಾಜ್ಯಮಟ್ಟಕ್ಕೆ

0

ಉಡುಪಿ:ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ:ಜ್ಞಾನಸುಧಾದ ಪ್ರೀತಮ್. ಪಿ. ಎಂ. ರಾಜ್ಯಮಟ್ಟಕ್ಕೆ

ಉಡುಪಿ : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ವಿದ್ಯೋದಯ ಪದವಿ ಪೂರ್ವ ಕಾಲೇಜು ಉಡುಪಿ ಇಲ್ಲಿ ಸಂಯುಕ್ತ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದ ಪ್ರೀತಮ್. ಟಿ. ಮನೆಕೋಟೆ ಇವರು ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದರು. ಇವರು ಬಿ.ತಿಪ್ಪೆಸ್ವಾಮಿ ಮತ್ತು ವಿಜಯಲಕ್ಷ್ಮಿ ಟಿ. ದಂಪತಿಗಳ ಸುಪತ್ರರಾಗಿರುತ್ತಾರೆ.

ಇವರ ಸಾಧನೆಗೆ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು, ಸಿ.ಇ.ಒ ಮತ್ತು ಪ್ರಾಂಶುಪಾಲ ದಿನೇಶ್ ಎಂ. ಕೊಡವೂರುರವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.

ಕಾರ್ಕಳ:ತೆಳ್ಳಾರು ಸಂಕದ ಬಳಿ ಬಾವಿಗೆ ಬಿದ್ದ ಹೋರಿ:ಅಗ್ನಿಶಾಮಕ ದಳದ ಸಿಬ್ಬಂದಿ-ಸ್ಥಳೀಯರಿಂದ ರಕ್ಷಣೆ

0

ದುರ್ಗಾ ಪಂಚಾಯತ್ ವ್ಯಾಪ್ತಿಯ ತೆಳ್ಳಾರು ಸಂಕದ ಬಳಿಯ ಸುಮಾರು 30 ಅಡಿ ಆಳದ ನೀರು ತುಂಬಿರುವ ಬಾವಿಯೊಂದಕ್ಕೆ ಹೋರಿಯೊಂದು ಬಿದ್ದ ಘಟನೆ ಇಂದು ಸಂಜೆ 6-00 ಗಂಟೆ ಸುಮಾರಿಗೆ ನಡೆದಿದೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಶ್ರೀ ಲಕ್ಷ್ಮೀ ಗೆಳೆಯರ ಬಳಗದ ಸದಸ್ಯರಾದ ಮಂಜು, ಪವನ್ ಆಚಾರ್ಯ ಮಂದಾರ, ಯೋಗೇಂದ್ರ ಪುಜಾರಿ ಕಾವೇರಡ್ಕ, ದೀಪಕ್ ನಾಯ್ಕ್, ಗೋವರ್ಧನ್ ನಾಯ್ಕ್, ಲಾಯ್ಡ್, ಕೀರ್ತನ್ ಶೆಟ್ಟಿ ಪಲಾಯಿ ಬಾಕ್ಯಾರ್, ಚೇತು ಕಾವೇರಡ್ಕ ಮತ್ತಿತರು ಸೇರಿ ಹೋರಿಗೆ ಹಾನಿಯಾಗದಂತೆ ಕ್ರಮ ಕೈಗೊಂಡರು.

ದುರ್ಗಾ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಹೇಶ್ ರಾವ್ ಸ್ಥಳಕ್ಕೆ ಆಗಮಿಸಿ ಕಾರ್ಕಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ಕೂಡಲೇ ಕೇವಲ ಹದಿನೈದು ನಿಮಿಷಗಳ ಒಳಗೆ ಧಾವಿಸಿ ಬಂದ ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿಯವರು ಬೃಹತ್ ಹೋರಿಯನ್ನು ಬಾವಿಯಿಂದ ಮೇಲೆ ತೆಗೆದು ಅದರ ರಕ್ಷಣೆ ಮಾಡಿದರು.

ಕಾರ್ಕಳ ಅಗ್ನಿಶಾಮಕ ದಳದ ತುರ್ತು ಸ್ಪಂದನೆಗೆ ಹಾಗೂ ಶ್ರೀ ಲಕ್ಷ್ಮೀ ಗೆಳೆಯರ ಬಳಗದ ಪವನ್ ಆಚಾರ್ಯ ಮಂದಾರ ಯೋಗೇಂದ್ರ ಪುಜಾರಿ ಕಾವೇರಡ್ಕ ಮತ್ತು ಮಂಜು ಇವರ ಸಾಹಸಮಯ ಕಾರ್ಯಕ್ಕೆ ಊರಿನವರ ಮುಕ್ತ ಕಂಠದ ಶ್ಲಾಘನೆ ವ್ಯಕ್ತವಾಗಿದೆ.

ರಮೇಶ್ ಶೆಟ್ಟಿ ಅಯೋದ್ಯಾ ನಗರ ರಾಜೇಂದ್ರ ಅಮೀನ್ ಗುಡ್ಡೆಯಂಗಡಿ ಇವರು ಸಹಕರಿಸಿದರು.

ಗಣಹೋಮ ನಡೆಸಿದ ಅಂಗನವಾಡಿ ಕಾರ್ಯಕರ್ತೆಗೆ ಅಮಾನತಿನ ಶಿಕ್ಷೆ ಅನುದಾನವಿಲ್ಲದೆ ಗುದ್ದಲಿಪೂಜೆ ನಡೆಸಿದ ಶಾಸಕರಿಗೆ ಯಾವ ಶಿಕ್ಷೆ ? ಶುಭದರಾವ್

0

ಗಣಹೋಮ ನಡೆಸಿದ ಅಂಗನವಾಡಿ ಕಾರ್ಯಕರ್ತೆಗೆ ಅಮಾನತಿನ ಶಿಕ್ಷೆ
ಅನುದಾನವಿಲ್ಲದೆ ಗುದ್ದಲಿಪೂಜೆ ನಡೆಸಿದ ಶಾಸಕರಿಗೆ ಯಾವ ಶಿಕ್ಷೆ ?
ಶುಭದರಾವ್

ಕಾರ್ಕಳ :ಗಣಹೋಮದ ನಡೆಸಿ ಧಾರ್ಮಿಕತೆ ಮೆರೆದ ಅಂಗನವಾಡಿ ಕಾರ್ಯಕರ್ತೆಗೆ ಶಾಸಕರ ಒತ್ತಡದ ಮೇಲೆ ಅಮಾನತಿನ ಶಿಕ್ಷಯಾದರೆ, ನಾಯಪೈಸೆ ಅನುದಾನ ತಾರದೆ, ನಿಟ್ಟೆಯಲ್ಲಿ ಜವಳಿ ಪಾರ್ಕ್‌ಗೆ ಗುದ್ದಲಿಪೂಜೆ ನಡೆಸಿದ ಶಾಸಕರಿಗೆ ಯಾವ ಶಿಕ್ಷೆಯಾಗಬೇಕು ? ಎಂದು ಬ್ಲಾಕ್ ಕಾಂಗ್ರೇಸ್ ವಕ್ತಾರ ಶುಭದರಾವ್ ಪ್ರಶ್ನಿಸಿದ್ದಾರೆ.

ಪ್ರೋಟೋಕಾಲ್ ಉಲ್ಲಂಘನೆ ಎನ್ನುವ ಕಾರಣ ಸಹಿತ ಕುಕ್ಕುಂದೂರು ಅಂಗನವಾಡಿ ಕಾರ್ಯಕರ್ತೆಯನ್ನು ಶಾಸಕರ ಒತ್ತಡದ ಮೇಲೆ ಅಮಾನತುಗೊಳಿಸಿ ಆದೇಶಿಸಲಾಗಿದೆ. ಇದೇ ಕಾನೂನು ಇತರರಿಗೂ ಅನ್ವಯವಾಗುವುದಾದರೆ, ನಿಟ್ಟೆಯಲ್ಲಿ ಸರಕಾರ ಅನುದಾನವನ್ನೇ ಬಿಡುಗೊಳಿಸದ ಸಂದರ್ಭದಲ್ಲಿ, ಚುನಾವಣೆ ಗಿಮಿಕಿಗಾಗಿ ಗುದ್ದಲಿಪೂಜೆ ನಡೆಸಿದ ಶಾಸಕರು ಹಾಗೂ ಈ ನಿಯಮಬಾಹಿರ ಗುದ್ದಲಿಪೂಜೆಯಲ್ಲಿ ಭಾಗವಹಿಸಿದ ಅಧಿಕಾರಿಗಳಿಗೂ ಸೂಕ್ತ ಶಿಕ್ಷೆಯಾಗಬೇಕು. ನಿಟ್ಟೆಯಲ್ಲಿ ಗುದ್ದಲಿಪೂಜೆ ಸಂದರ್ಭ ಅಂದಿನ ಸರಕಾರ 20 ಕೋಟಿ ರೂ. ಅನುದಾನವನ್ನು ಕಾದಿರಿಸಿದೆ ಎಂದು ಶಾಸಕರು ಹೇಳಿದ್ದರು. ಅಂದಿನ ಸರಕಾರ ಆ ಅನುದಾನವನ್ನು ಕಾದಿರಿಸಿದ್ದು ನಿಜವೇ ? ಎನ್ನುವುದನ್ನು ಪ್ರಶ್ನಿಸುತ್ತಿದ್ದೇವೆ.

ಇತ್ತೀಚಿಗೆ ಕಾಂಗ್ರೆಸ್ ನೇತೃತ್ವದ ಸರಕಾರ ಸಚಿವ ಸಂಪುಟದಲ್ಲಿ 27.97ಕೋಟಿ ರೂ. ಅಂದಾಜು ಮೊತ್ತದಲ್ಲಿ ಅಭಿವೃದ್ದಿಪಡಿಸಲು ಸಚಿವ ಸಂಪುಟದಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿರುತ್ತದೆ. ಹಾಗಾದರೆ ಅಂದಿನ ಸರಕಾರದ ಅವಧಿಯಲ್ಲಿ ಶಾಸಕರು ಕಾದಿರಿಸಿದ 20 ಕೋಟಿ ರೂ. ಅನುದಾನ ಎಲ್ಲಿ ಹೋಗಿದೆ?
ನಿಟ್ಟೆಯಲ್ಲಿ ಕೇವಲ ಗುದ್ದಲಿಪೂಜೆಗೆ ಸೀಮಿತವಾಗಿದ್ದ ಜವಳಿ ಪಾರ್ಕ್ನ ಅಭಿವೃದ್ದಿಗೆ ನಮ್ಮ ಕಾಂಗ್ರೆಸ್ ಸರಕಾರ ಮುಂದಾಗಿದ್ದು, ಅನುದಾನವನ್ನು ನೀಡುವ ಪ್ರಯತ್ನ ನಡೆಸಿರುವುದು ಅಭಿನಂದನೀಯ.

ಅದಕ್ಕಾಗಿ ಸಿದ್ದರಾಮಯ್ಯ ನೇತೃತ್ವದ ಸರಕಾರವನ್ನು ಕಾರ್ಕಳದ ಕಾಂಗ್ರೆಸ್ ಅಭಿನಂದಿಸುತ್ತದೆ. ಆದರೆ ಅನುದಾನವಿಲ್ಲದೆ, ಜನತೆಯನ್ನು ಮರಳು ಮಾಡುವ ಉದ್ದೇಶದಿಂದ ನಡೆದ ಗುದ್ದಲಿಪೂಜೆ ಮತ್ತು ಅದರಲ್ಲಿ ಭಾಗವಹಿಸಿದ ಅಧಿಕಾರಿಗಳ ವಿರುದ್ದ ಸರಕಾರ ಗಂಭೀರವಾಗಿ ಪರಿಗಣಿಸುವಂತೆ ಕಾರ್ಕಳ ಕಾಂಗ್ರೆಸ್ ಒತ್ತಾಯಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.