Home Blog Page 8

ಕ್ರೈಸ್ಟ್ ಕಿಂಗ್: ಮಾದಕ ದ್ರವ್ಯದ ವಿರುದ್ಧ ಜಾಗೃತಿ ಅಭಿಯಾನ ಕಾರ್ಯಕ್ರಮ

0

 

ಮಾದಕ ದ್ರವ್ಯ ಸೇವೆನೆಯಿಂದ ಜೀವನ ಸರ್ವನಾಶ: ಮುರಳೀಧರ ನಾಯ್ಕ್

ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ವ್ಯಸನದ ವಿರುದ್ಧ ಜಾಗೃತಿ ಅಭಿಯಾನ ಕಾರ್ಯಕ್ರಮ ನಡೆಯಿತು.

ಕಾರ್ಕಳ ನಗರ ಠಾಣೆಯ ಸಬ್ ಇನ್ಸ್ಪೆಕ್ಟರ್ ಮುರಳೀಧರ ನಾಯ್ಕ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು “ಹದಿಹರೆಯದಲ್ಲಿ ಆಕರ್ಷಣೆ ಜಾಸ್ತಿ ಇರುತ್ತದೆ. ಆದ್ದರಿಂದ ದುಶ್ಚಟಗಳಿಗೆ ಬೇಗನೆ ಒಳಗಾಗುತ್ತಾರೆ. ಮಾದಕ ದ್ರವ್ಯ ಸೇವನೆಯ ದುಶ್ಚಟಕ್ಕೆ ಬಲಿ ಬಿದ್ದರೆ ಜೀವನವೇ ಸರ್ವನಾಶವಾಗಿ ಹೋಗುತ್ತದೆ. ವಿದ್ಯಾರ್ಥಿಗಳು ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಆದ್ಯತೆಯನ್ನು ನೀಡಬೇಕು. ಮಾದಕ ದ್ರವ್ಯ ಸೇವೆನೆಯು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹಾಳುಮಾಡುತ್ತದೆ. ಮಾದಕ ದ್ರವ್ಯವು ನಮ್ಮ ಜೀವನವನ್ನು ಸರ್ವನಾಶ ಮಾಡುವುದರ ಜೊತೆಗೆ ಸಮಾಜದಲ್ಲಿ ಅಶಾಂತಿ ಅರಾಜಕತೆಗೆ ಕಾರಣವಾಗುತ್ತದೆ. ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತವೆ. ಮಕ್ಕಳು ಮಾದಕ ದ್ರವ್ಯಗಳ ಬಗ್ಗೆ ಜಾಗರೂಕತೆಯಿಂದ ಇರುವುದರ ಜೊತೆಗೆ ಮಾದಕ ದ್ರವ್ಯ ಮಾರಾಟ ಮತ್ತು ಸೇವನೆಯ ಮಾಹಿತಿ ಇದ್ದರೆ ತಕ್ಷಣ ಪೊಲೀಸರಿಗೆ ತಿಳಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ಕಾರ್ಯಚಟುವಟಿಕೆಗಳಿಂದ ದೂರವಿದ್ದು, ಓದಿನ ಕಡೆಗೆ ಗಮನ ನೀಡಿ ಭವಿಷ್ಯವನ್ನು ಚೆನ್ನಾಗಿ ರೂಪಿಸಿಕೊಳ್ಳಬೇಕು” ಎಂದು ಹೇಳಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.

ವೇದಿಕೆಯಲ್ಲಿ ಸಂಸ್ಥೆಯ ಮಾದಕ ದ್ರವ್ಯ ವಿರೋಧಿ ಸಮಿತಿಯ ಅಧ್ಯಕ್ಷರಾದ ಪ್ರಾಚಾರ್ಯ ಲಕ್ಷ್ಮಿ ನಾರಾಯಣ ಕಾಮತ್, ಸಮಿತಿಯ ಉಪನ್ಯಾಸಕ ಸದಸ್ಯರಾದ ರಸಾಯನಶಾಸ್ತ್ರ ಉಪನ್ಯಾಸಕಿ ನಯನ, ಭೌತಶಾಸ್ತ್ರ ಉಪನ್ಯಾಸಕ ಪದ್ಮನಾಭ ನಾಯಕ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ ಮುಂತಾದವರು ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಉಮೇಶ್ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿ ನಿರ್ವಹಿಸಿದರು.

ನಿಟ್ಟೆ : ಆ್ಯಂಟಿ ರ‍್ಯಾಗಿಂಗ್ ಸಮಿತಿ ಸಭೆ

0

 

 

ರ‍್ಯಾಗಿಂಗ್ ಎಂಬುದು ಕ್ರಿಮಿನಲ್ ಅಪರಾಧವಾಗಿದ್ದು, ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಎಲ್ಲರೊಂದಿಗೆ ಸ್ನೇಹದಿಂದ ಬಾಳ್ವೆೆ ನಡೆಸಿ ಸಜ್ಜನರಾಗಿ ಸಾಧನೆ ಮಾಡಬೇಕು ಎಂದು ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಪ್ರಸನ್ನ ಕಿವಿಮಾತು ಹೇಳಿದರು.

ನಿಟ್ಟೆೆ ಎನ್‌ಎಂಎಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ವತಿಯಿಂದ ಮಂಗಳವಾರ ಕಾಲೇಜಿನ ಶಾಂಭವಿ ಸೆಮಿನಾರ್ ಸಭಾಂಗಣದಲ್ಲಿ ಜರಗಿದ ಆ್ಯಂಟಿ ರ‍್ಯಾಗಿಂಗ್ ಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರ‍್ಯಾಗಿಂಗ್ ಎಂಬುದು ನಮ್ಮ ಸಂಸ್ಕೃತಿ ಮತ್ತು ಸಭ್ಯತೆಗೆ ವಿರುದ್ಧವಾಗಿದೆ. ರಾಷ್ಟ್ರದ ಭವಿಷ್ಯ ಇಂದಿನ ವಿದ್ಯಾರ್ಥಿಗಳಲ್ಲಿದೆ. ಎಲ್ಲ ವಿದ್ಯಾರ್ಥಿಗಳು ಓದು ಮತ್ತು ಸಾಧನೆಯ ಕಡೆಗೆ ಗಮನ ಕೊಡಬೇಕು. ಯಾರಾದರೂ ರ‍್ಯಾಗಿಂಗ್ ಗೆ ಪ್ರೇರಣೆ, ರ‍್ಯಾಗಿಂಗ್ ಮೂಲಕ ಕಿರುಕುಳ ನೀಡಿದಲ್ಲಿ ಕಾಲೇಜಿನ ಆ್ಯಂಟಿ ರ‍್ಯಾಗಿಂಗ್ ಸಮಿತಿ ಗಮನಕ್ಕೆೆ ತರಬೇಕು. ಕಾಲೇಜು ಅಧ್ಯಾಪಕರು, ಪೊಲೀಸರು ಇರುವ ಈ ಸಮಿತಿ ವಿದ್ಯಾರ್ಥಿಗಳ ಸುರಕ್ಷತೆಗೆ ಮುತುವರ್ಜಿವಹಿಸಲಿದೆ ಎಂದ ಅವರು, ಮಾದಕ ದ್ರವ್ಯ ವ್ಯಸನಗಳಿಂದ ಆಗುವ ಸಮಸ್ಯೆೆ ಮತ್ತು ಕಾನೂನು ತೊಡಕಿನಲ್ಲಿ ಸಿಲುಕಿಕೊಂಡರೆ ಮುಂದೆ ಆಗಬಹುದಾದ ಅಪಾಯಗಳ ಬಗ್ಗೆೆ ಎಚ್ಚರಿಕೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಆಫ್ ಕ್ಯಾಂಪಸ್ ನ ಅಭಿವೃದ್ದಿ ಹಾಗೂ ನಿರ್ವಹಣಾ ವಿಭಾಗದ ನಿರ್ದೇಶಕ ಎ ಯೊಗೀಶ್ ಹೆಗ್ಡೆೆ ಮಾತನಾಡಿ, ನಿಟ್ಟೆೆ ವಿದ್ಯಾಸಂಸ್ಥೆೆಯಲ್ಲಿ ಉತ್ತಮ ಶಿಕ್ಷಣಕ್ಕೆೆ ಪೂರಕ ವ್ಯವಸ್ಥೆೆಗಳನ್ನು ಹೊಂದಿದ್ದು, ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಕಾಳಜಿಗೆ ಕಾನೂನಾತ್ಮಕವಾಗಿ ಇರುವ ಎಲ್ಲ ಸಮಿತಿ ಮತ್ತು ನಿಯಮಾವಳಿಗಳನ್ನು ವ್ಯವಸ್ಥಿತವಾಗಿ ಪಾಲಿಸಲಾಗುತ್ತದೆ, ವಿದ್ಯಾರ್ಥಿಗಳು ಈ ಬಗ್ಗೆೆ ಹೆಚ್ಚಿನ ಅರಿವು ಹೊಂದಿರಬೇಕು ಎಂದು ನುಡಿದರು.

ವೇದಿಕೆಯಲ್ಲಿ ಕಾರ್ಕಳ ಪೋಲೀಸ್ ನ ಕ್ರೈಮ್ ವಿಭಾಗದ ಠಾಣಾಧಿಕಾರಿ ಸುಂದರ್, ನಿಟ್ಟೆ ಆಫ್ ಕ್ಯಾಂಪಸ್ ನ ಪರಿಕ್ಷಾ ನಿಯಂತ್ರಕ ಡಾ| ಸುಬ್ರಹ್ಮಣ್ಯ ಭಟ್, ಉಪಕುಲಸಚಿವೆ ಡಾ| ರೇಖಾ ಭಂಡಾರ್ಕರ್ ಉಪಸ್ಥಿತರಿದ್ದರು.

ನಿಟ್ಟೆ ತಾಂತ್ರಿಕ ಕಾಲೇಜಿನ ಉಪಪ್ರಾಂಶುಪಾಲ ಡಾ| ನಾಗೇಶ್ ಪ್ರಭು ಸ್ವಾಗತಿಸಿದರು. ಮಾನವಿಕ ವಿಭಾಗದ ಮುಖ್ಯಸ್ಥ ಹಾಗೂ ಹುಡುಗರ ಹಾಸ್ಟೆಲ್ ನ ಚೀಫ್ ವಾರ್ಡನ್ ಡಾ| ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಕಳ : ಎ1 ಸೂಪರ್ ಮಾರ್ಟ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ 5 ದಿನಗಳ ಮಹಾ ಆಫರ್

0

 

ಎ1 ಸೂಪರ್ ಮಾರ್ಟ್ ನಲ್ಲಿ ಇದೀಗ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ 5 ದಿನಗಳ ಮಹಾ ಆಫರ್ ಆರಂಭವಾಗಿದೆ.

ಈ ಆಫರ್ ಆ.13 ರಿಂದ 17ರ ವರೆಗೆ ನಡೆಯಲಿದ್ದು, ವಿಶೇಷ ಆಫರ್ ಗಳು ಇಂತಿವೆ.
ಯುನಿಬಿಕ್ ಕುಕೀಸ್ ಖರೀದಿಯಲ್ಲಿ 50% ಕಡಿತ, 220 ಗ್ರಾಂ ನ ಗ್ರಾನಮ್ಮ ಸ್ನ್ಯಾಕ್ ಒಂದು ಖರೀದಿಯ ಮೇಲೆ ಒಂದು ಉಚಿತ, ಪೆಪ್ಸಿ, ಕೋಕಾಕೋಲಾ 2.25ಲೀ. ಬಾಟಲಿ ಮೇಲೆ 15 ರೂಪಾಯಿ ಕಡಿತ, ಲಾಲ್ ಬಿಸ್ಕೆಟ್ ಹಾಗೂ ಸ್ವೀಟ್ಸ್ ಒಂದು ಖರೀದಿಯ ಮೇಲೆ ಒಂದು ಉಚಿತ, ಮಕ್ಕೇನ್ ವೆಜ್ ಫ್ರೋಜನ್ ಐಟೆಮ್ಸ್ ಖರೀದಿಯಲ್ಲಿ 5% ಕಡಿತ, ಪಾರ್ಲೆ ಬಿಸ್ಕೆಟ್ ಒಂದು ಖರೀದಿಯ ಮೇಲೆ ಒಂದು ಉಚಿತ, ಸ್ವಿಸ್ ಬ್ಯುಟಿ ನೈಲ್ ಕಲರ್ಸ್, ವೆಟ್ ವೈಪ್ಸ್, ಲಿಪ್ ಕಲರ್ಸ್ ಒಂದು ಖರೀದಿಯ ಮೇಲೆ ಒಂದು ಉಚಿತ, 400 ಗ್ರಾಂ ಹಿಮಾಲಯ ಬೇಬಿ ಪೌಡರ್/ಲೋಷನ್/ಶ್ಯಾಂಪೂ ಖರೀದಿಗೆ ಬೇಬಿ ವೈಪ್ಸ್ ಉಚಿತ, ಐಡಿಯಲ್ ಐಸ್ ಕ್ರೀಮ್ ನ 1ಲೀ. ಟಬ್ ಮೇಲೆ 5% ರಿಯಾಯಿತಿ, ಮೋರ್ ಲೈಟ್ ಲಿಕ್ವಿಡ್ ಡಿಟರ್ಜೆಂಟ್ 5ಲೀ. ಪೌಚ್ ನೊಂದಿಗೆ 2ಲೀ. ನ ಉಜಾಲ ಫ್ಯಾಬ್ರಿಕ್ ಕಂಡಿಷನರ್ ನ ಪೌಚ್ ಉಚಿತ, 2ಲೀ. ಲಿಕ್ವಿಡ್ ಡಿಟರ್ಜೆಂಟ್ ನೊಂದಿಗೆ 99 ರೂ. ಮೌಲ್ಯದ ಸಾಫ್ಟ್ ಟಚ್ ಫ್ಯಾಬ್ರಿಕ್ ಕಂಡಿಷನರ್ ಉಚಿತ, ಆಲ್ ಟೈಮ್ ವಿಕ್ಟೋರಿಯಾ 18 ಲೀಟರ್ ಬಕೆಟ್ ಜೊತೆ 1.5 ಲೀ. ಆಲ್ ಟೈಮ್ ಮಗ್ ಉಚಿತವಾಗಿ ದೊರೆಯಲಿದೆ.
ಅಲ್ಲದೆ ಪ್ರತಿ 2.499 ರೂ. ಗಳ ಖರೀದಿಯಲ್ಲಿ ₹239.00 ಮೌಲ್ಯದ 3PC ಸ್ಟೋರೇಜ್ ಬಾಸ್ಕೆಟ್‌ಸೆಟ್ ಸಂಪೂರ್ಣ ಉಚಿತವಾಗಿ ದೊರೆಯಲಿದೆ.

ಎ1 ಸೂಪರ್ ಮಾರ್ಟ್ ನ ದಿನನಿತ್ಯದ ಪ್ರತಿ ಖರೀದಿಯಲ್ಲಿ 2% ವನ್ನು ಎ1 ಸೂಪರ್ ಪಾಯಿಂಟ್ ಆಗಿ ಮರಳಿ ಪಡೆಯಬಹುದಾಗಿದೆ. ಈ ಪಾಯಿಂಟ್ ಗಳು ಮುಂದಿನ 500 ರೂ.ಗಳಿಗೂ ಹೆಚ್ಚಿನ ಖರೀದಿಯಲ್ಲಿ ಗ್ರಾಹಕರಿಗೆ ಕ್ಯಾಶ್ ಬ್ಯಾಕ್ ಆಗಿ ಗ್ರಾಹಕರಿಗೆ ಲಾಭದಾಯಕವಾಗಲಿದೆ.

ಸೂರಾಲು: ಬಾಬು ಮೂಲ್ಯ ನಿಧನ

0

 

ಮಿಯ್ಯಾರು ಗ್ರಾಮದ ಸೂರಾಲು ಕೆಳಗಿನ ಗುತ್ತು ನಿವಾಸಿ ಬಾಬು ಮೂಲ್ಯ(62) ಅವರು ಆಗಸ್ಟ್ 11ರಂದು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸ್ಥಳೀಯ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಇವರು, ಸುಮಾರು ವರ್ಷಗಳಿಂದ ಮಿಯ್ಯಾರು ಗ್ರಾಮ ದೇವಸ್ಥಾನ ಮತ್ತು ದೈವಸ್ಥಾನಗಳಲ್ಲಿ ಇಲಾಲ್ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದರು.

ಮೃತರು ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ನಂದಳಿಕೆ ಶ್ರೀ ಗುರುದುರ್ಗಾ ಮಿತ್ರ ಮಂಡಳಿ, ಮಹಿಳಾ ಮಂಡಳಿ ಆಟಿಡೊಂಜಿ ದಿನ

0

 

15 ನೇ ವರ್ಷದ ಸಂಭ್ರಮದಲ್ಲಿರುವ ನಂದಳಿಕೆ ಶ್ರೀ ಗುರುದುರ್ಗಾ ಮಿತ್ರ ಮಂಡಳಿ ಹಾಗೂ ಮಹಿಳಾ ಮಂಡಳಿ ವತಿಯಿಂದ ಬೋರ್ಡ್ ಶಾಲೆ ಯಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು.

ಬೆಳ್ಮಣ್ಣು ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಈ ಸಾಲಿನ ಅಧ್ಯಕ್ಷರಾದ ವಸಂತ್ ಕುಮಾರ್ ನಂದಳಿಕೆ ಉದ್ಘಾಟಿಸಿ, ಆಟಿಡೊಂಜಿ ದಿನದ ಬಗ್ಗೆ ಮಾತನಾಡಿದರು.

ಗುರುದುರ್ಗಾ ಮಿತ್ರ ಮಂಡಳಿ ಅಧ್ಯಕ್ಷ ಅಶ್ವಥ್ ಶೆಟ್ಟಿ, ಮಹಿಳಾಮಂಡಳಿ ಅಧ್ಯಕ್ಷ ಸುನೀತಾ ನೋರಣ್ಣ ಅಧ್ಯಕ್ಷತೆ ವಹಿಸಿದ್ದರು.

ಮಿತ್ರ ಮಂಡಳಿಯ ಗೌರವ ಅಧ್ಯಕ್ಷರಾದ ಕಿರಣ್ ಚೌಟ, ಮಹಿಳಾ ಮಂಡಳಿಯ ಗೌರವಾಧ್ಯಕ್ಷರಾದ ಜಾಯ್ಸ್ ಟೆಲ್ಲಿಸ್, ಮಿತ್ರ ಮಂಡಳಿಯ ಕಾರ್ಯದರ್ಶಿ ವಿನೋದ್ ಆಚಾರ್ಯ ಉಪಸ್ಥಿತರಿದ್ದರು. ಮಹಿಳಾ ಮಂಡಳಿಯ ಕಾರ್ಯದರ್ಶಿ ವೀಣಾ ಹರೀಶ್ ಪೂಜಾರಿ ವಂದಿಸಿ, ಹರಿಪ್ರಸಾದ್ ನಂದಳಿಕೆ ಕಾರ್ಯಕ್ರಮ ನಿರೂಪಿಸಿದರು.

ಗಣೇಶ ಚತುರ್ಥಿಗೆ ರಾಸಾಯನಿಕ ಬಣ್ಣಗಳಿಂದ ಕೂಡಿದ ವಿಗ್ರಹ ವಿಸರ್ಜನೆ ಸಂಪೂರ್ಣ ನಿಷೇಧ

0

 

ಗೌರಿ ಗಣೇಶ ಹಬ್ಬ ಸಮೀಪಿಸುತಿದ್ದು, ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.

ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತವಾದ ಗೌರಿ ಮತ್ತು ಗಣೇಶ ವಿಗ್ರಹಗಳನ್ನು ರಾಜ್ಯದ ಯಾವುದೇ ಕೆರೆ, ಬಾವಿ, ಕತ್ತೆ ಹಾಗೂ ಇತರೆ ಜಲಮೂಲಗಳಲ್ಲಿ ವಿಸರ್ಜಿಸುವಂತಿಲ್ಲ.

ಮುಂಜಾಗೃತಾ ಕ್ರಮಗಳು

* ಪ್ಲಾಸ್ಟರ್ ಆಫ್ ಪ್ಯಾರಿಸ್ ವಿಗ್ರಹಗಳನ್ನು ತಯಾರಿಸುವ ಮತ್ತು ಮಾರುವ ವ್ಯಕ್ತಿ, ಸಂಸ್ಥೆಗಳಿಗೆ ವ್ಯಾಪಾರ ಪರವಾನಿಗೆ ನೀಡದಿರಲು ಮತ್ತು ಅನಧಿಕೃತವಾಗಿ ತಯಾರಿ ಮಾರುವ ವ್ಯಕ್ತಿ, ಸಂಸ್ಥೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು.

* ರಾಸಾಯನಿಕ ಬಣ್ಣಗಳಿಂದ ಮಾಡಿದ ಮೂರ್ತಿಗಳ ಬದಲಾಗಿ ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಹಾಗೂ ನೈಸರ್ಗಿಕ ಬಣ್ಣ ಲೇಪಿತ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಪೂಜಿಸಿ, ಸಾಮೂಹಿಕವಾಗಿ ಗುರುತಿಸುವ ಸ್ಥಳಗಳಲ್ಲಿ ಕಡ್ಡಾಯವಾಗಿ ವಿಸರ್ಜಿಸಬೇಕು.

* ಮೊಬೈಲ್ ಟ್ಯಾಂಕ್ ಗಳಲ್ಲಿ, ಕಲ್ಯಾಣಿಗಳ ಪಕ್ಕದಲ್ಲಿ ಹಸಿ ಕಸ ಪ್ರತ್ಯೇಕಿಸಿ ವಿಲೇವಾರಿ ಮಾಡಲು ಕ್ರಮವಹಿಸಬೇಕು. ಗೌರಿ ಗಣೇಶ ಹಬ್ಬ ಸಮೀಪಿಸುತಿದ್ದು, ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.

ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತವಾದ ಗೌರಿ ಮತ್ತು ಗಣೇಶ ವಿಗ್ರಹಗಳನ್ನು ರಾಜ್ಯದ ಯಾವುದೇ ಕೆರೆ, ಬಾವಿ, ಕತ್ತೆ ಹಾಗೂ ಇತರೆ ಜಲಮೂಲಗಳಲ್ಲಿ ವಿಸರ್ಜಿಸುವಂತಿಲ್ಲ.

ಮುಂಜಾಗೃತಾ ಕ್ರಮಗಳು

* ಪ್ಲಾಸ್ಟರ್ ಆಫ್ ಪ್ಯಾರಿಸ್ ವಿಗ್ರಹಗಳನ್ನು ತಯಾರಿಸುವ ಮತ್ತು ಮಾರುವ ವ್ಯಕ್ತಿ, ಸಂಸ್ಥೆಗಳಿಗೆ ವ್ಯಾಪಾರ ಪರವಾನಿಗೆ ನೀಡದಿರಲು ಮತ್ತು ಅನಧಿಕೃತವಾಗಿ ತಯಾರಿ ಮಾರುವ ವ್ಯಕ್ತಿ, ಸಂಸ್ಥೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು.

* ರಾಸಾಯನಿಕ ಬಣ್ಣಗಳಿಂದ ಮಾಡಿದ ಮೂರ್ತಿಗಳ ಬದಲಾಗಿ ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಹಾಗೂ ನೈಸರ್ಗಿಕ ಬಣ್ಣ ಲೇಪಿತ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಪೂಜಿಸಿ, ಸಾಮೂಹಿಕವಾಗಿ ಗುರುತಿಸುವ ಸ್ಥಳಗಳಲ್ಲಿ ಕಡ್ಡಾಯವಾಗಿ ವಿಸರ್ಜಿಸಬೇಕು.

* ಮೊಬೈಲ್ ಟ್ಯಾಂಕ್ ಗಳಲ್ಲಿ, ಕಲ್ಯಾಣಿಗಳ ಪಕ್ಕದಲ್ಲಿ ಹಸಿ ಕಸ ಪ್ರತ್ಯೇಕಿಸಿ ವಿಲೇವಾರಿ ಮಾಡಲು ಕ್ರಮವಹಿಸಬೇಕು.

ಕ್ರೈಸ್ಟ್ ಕಿಂಗ್ : ಈಜು ಸ್ಪರ್ಧೆಯಲ್ಲಿ ಶೈನಿ ಡಿ’ಸೋಜ ರಾಜ್ಯಮಟ್ಟಕ್ಕೆ ಆಯ್ಕೆ

0

 

ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಉಪನಿರ್ದೇಶಕರ ಕಛೇರಿ ಉಡುಪಿ ಇವರ ಆಶ್ರಯದಲ್ಲಿ ಮಣಿಪಾಲದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳ 14/17ರ ವಯೋಮಿತಿಯ ಉಡುಪಿ ಜಿಲ್ಲಾಮಟ್ಟದ ಈಜು ಸ್ಪರ್ಧೆಯಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಒಂಬತ್ತನೇ ತರಗತಿಯ ಶೈನಿ ಡಿಸೋಜ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

200 ಮೀ ಫ್ರೀ ಸ್ಟೈಲ್ ನಲ್ಲಿ ಬೆಳ್ಳಿ ಪದಕ, 100 ಮೀ ಫ್ರೀ ಸ್ಟೈಲ್ ಮತ್ತು 100 ಮೀ ಬ್ಯಾಕ್ ಸ್ಟ್ರೋಕ್ ನಲ್ಲಿ ಕಂಚಿನ ಪದಕಗಳನ್ನು ಪಡೆದುಕೊಳ್ಳುವುದರ ಮೂಲಕ ಶೈನಿ ಡಿಸೋಜ ರಾಜ್ಯಮಟ್ಟದ ಪಂದ್ಯಾಟಕ್ಕೆ ಅರ್ಹತೆ ಪಡೆದುಕೊಂಡಿದ್ದಾಳೆ. ಉಳಿದಂತೆ ಒಂಬತ್ತನೇ ತರಗತಿಯ ಶಾನ್ ಡಿಸೋಜ 50ಮೀ ಫ್ರೀ ಸ್ಟೈಲ್ ಮತ್ತು 50ಮೀ ಬ್ರೆಸ್ಟ್ ಸ್ಟ್ರೋಕ್ನಲ್ಲಿ ಕಂಚಿನ ಪದಕ, ಆರನೇ ತರಗತಿಯ ಸಿಯಾ ಜೋನ್ನಾ ಅಂಚನ್ 50ಮೀ ಫ್ರೀ ಸ್ಟೈಲ್ನಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ.

ಕಾರ್ಕಳ: ಶಿಕ್ಷಣದಿಂದ ಗುಣಾತ್ಮಕ ಸಮಾಜ ನಿರ್ಮಾಣ : ರಿಯಾಜ್ ರಾನ್

0

 

‘ಶಿಕ್ಷಣದಿಂದ ವಿದ್ಯಾರ್ಥಿ ಗಳ ಭವಿಷ್ಯ ಬೆಳಗಬೇಕು. ಹೆತವರು ಮತ್ತು ಪೋಷಕರು ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ಕರ್ತವ್ಯವನ್ನು ತಿಳಿಸಿಕೊಡುವ ಪ್ರಯತ್ನ ಮಾಡಬೇಕು. ವಿದ್ಯಾರ್ಥಿಗಳು ಸಮಾಜದ ಒಳಿತನ್ನು ಬಯಸುವ ವಾಹಕಗಳಗಾಗಬೇಕು ಮತ್ತು ಕೆಡುಕುಗಳನ್ನು ಮೆಟ್ಟಿನಿಲ್ಲುವ ಧ್ವನಿಗಳಾಗಬೇಕು. ಹೆತವರು ವಿದ್ಯಾರ್ಥಿಗಳಿಗೆ ಹೆಚ್ಚಿನ ಒತ್ತಡ ನೀಡಬಾರದು. ಮಕ್ಕಳು ವಿದ್ಯೆಯೊಂದಿಗೆ ಒಳ್ಳೆಯ ಗುಣಗಳನ್ನು ಹೊಂದಿ ಸಮಾಜಮುಖಿಗಳಾಗಬೇಕು’ ಎಂದು ಕೆ.ಎಮ್. ಇ. ಎಸ್ ವಿದ್ಯಾಸಂಸ್ಥೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಕರ್ನಾಟಕ ರಾಜ್ಯದ ಮುಸ್ಲಿಂ ಬೋರ್ಡಿನ ಕಾರ್ಯದರ್ಶಿಯಾಗಿರುವ ರಿಯಾಜ್ ರಾನ್ ಅಭಿಪ್ರಾಯಪಟ್ಟರು.

ಕಾಲೇಜು ಪ್ರಾಂಶುಪಾಲರಾದ ಕೆ. ಬಾಲಕೃಷ್ಣ ರಾವ್ ಇವರು ಮಾತನಾಡಿ ‘ಎಲ್ಲಾ ಧರ್ಮದ ಸಾರ ಮತ್ತು ಗುರಿಯೊಂದೆ. ಕೆ.ಎಮ್.ಇ.ಎಸ್. ವಿದ್ಯಾಸಂಸ್ಥೆ ಗುಣಮಟ್ಟದ ವಿದ್ಯಾಭ್ಯಾಸವನ್ನು ನೀಡುತ್ತಾ ಬಂದಿದೆ’ ಎಂದು ಅಧ್ಯಕ್ಷ ಭಾಷಣದಲ್ಲಿ ಹೇಳಿದರು.

ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಲೋಳಿತ ಡಿ ಸಿಲ್ವರವರು ಮಾತನಾಡಿ ‘ನಮ್ಮ ಸಂಸ್ಥೆಯಲ್ಲಿ ಉತ್ತಮ ಶಿಸ್ತು ಇದ್ದು ಉತ್ತಮ ವಿದ್ಯಾಭ್ಯಾಸ ನಡೆಯುತಿದೆ’ ಎಂದರು.

ಇಸ್ಲ್ಯಾಮಿಕ್ ಶಿಕ್ಷಣದ ಅಧ್ಯಾಪಕಿ ಆಸ್ಮಿನ್ ಇವರು ಮಕ್ಕಳಿಂದ ಕುರಾನ್ ಫಠಣ ಮಾಡಿಸಿದರು. ಶಿಕ್ಷಕಿ ರೇಷ್ಮ ಕಾರ್ಯಕ್ರಮ ನಿರ್ವಹಿಸಿದರು. ಅತಿಥಿಗಳಾದ ರಿಹಾನ ಇಕ್ಬಾಲ್, ಮೊಹಮ್ಮದ್ ಅಕ್ರಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮದ ಯಶಶ್ವಿಗೆ ಕಾರಣರಾದರು.

ಅಖಿಲ ಭಾರತ ದೈವಾರಾಧಕರ ಒಕ್ಕೂಟದಿಂದ ಯು.ಟಿ.ಖಾದರ್ ಗೆ ಮನವಿ

0

 

ಅಖಿಲ ಭಾರತ ದೈವಾರಾಧಾಕರ ಒಕ್ಕೂಟ (ರಿ) ಕೇಂದ್ರೀಯ ಉಡುಪಿ ವತಿಯಿಂದ ಆ. 11 ರಂದು ಮಂಗಳೂರಿನಲ್ಲಿ ಕರ್ನಾಟಕ ಸರ್ಕಾರದ ವಿಧಾನಸಭಾಧ್ಯಕ್ಷ ಹಾಗೂ ಉಳ್ಳಾಲ ಕ್ಷೇತ್ರದ ಶಾಸಕರಾದ ಯು. ಟಿ. ಖಾದರ್ ಅವರನ್ನು ಒಕ್ಕೂಟದ ಸದಸ್ಯರು ಭೇಟಿಯಾಗಿ ಮಂಗಳೂರು ಹಾಗೂ ಉಡುಪಿ ಜಿಲ್ಲೆಯಲ್ಲಿ ಸಾವಿರಾರು ವರ್ಷಗಳ ಇತಿಹಾಸ ಇರುವ ದೈವಾರಾಧನೆ ಕ್ಷೇತ್ರದಲ್ಲಿ ಚಾಕ್ರಿ ಮಾಡುವ ಸುಮಾರು 16 ವರ್ಗಗಳಿವೆ ಹಾಗೂ ಸುಮಾರು 20 ಸಾವಿರದ ಜನ ದೈವಚಕ್ರಿಯನ್ನು ಕುಲ ಕಸುಬಾಗಿ ಅವಲಂಬಿಸಿದ್ದಾರೆ.

ದೈವಚಾಕ್ರಿ ವರ್ಗವನ್ನು ಸರ್ಕಾರಕ್ಕೆ ಸಂಬಂಧಪಟ್ಟ ಇಲಾಖೆಗೆ ಸೇರ್ಪಡಿಸುವುದು, 60 ವರ್ಷ ಮೇಲ್ಪಟ್ಟು ದೈವ ಚಾಕ್ರಿ ವರ್ಗದವರಿಗೆ ಪಿಂಚಣಿ ಯೋಜನೆ ಹಾಗೂ ಆರೋಗ್ಯ ವಿಮೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರದಿಂದ ಸ್ಕಾಲರ್ ಶಿಪ್ ಹಾಗೂ ದೈವಾರಾಧನೆ ಅಕಾಡೆಮಿ ಸ್ಥಾಪನೆ ಮಾಡುವುದು, ಪಂಚ ದ್ರಾವಿಡ ಭಾಷೆಯಲ್ಲಿ ಒಂದಾದ ಮಾತೃಭಾಷೆಯದ ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ರಾಷ್ಟ್ರೀಯ ಸ್ಥಾನಮಾನಗೆ ಸೇರ್ಪಡಿಸುವುದು, ಸರ್ಕಾರಿ ಸಮಾರಂಭಗಳಲ್ಲಿ ಹಾಗೂ ಶಾಲಾ ಕಾಲೇಜು ಕಾರ್ಯಕ್ರಮಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಚಲನಚಿತ್ರ ನಾಟಕ ಯಕ್ಷಗಾನಗಳಲ್ಲಿ ದೈವಾರಾಧನೆ ಸಂಬಂಧ ಪಟ್ಟ ಮನೋರಂಜನೆ ಹಾಸ್ಯ ಇತರ ವಿಚಾರ ಬಗ್ಗೆ ಬಿಂಬಿಸುವ ಚಿತ್ರವನ್ನು, ದೃಶ್ಯ ಮೆರವಣಿಗೆಯಲ್ಲಿ ಟಾಬ್ಲೊ ನಿಷೇಧ ಮಾಡುವುದು ಹಾಗೂ ಇದಕ್ಕೆ ಸಂಬಂಧಪಟ್ಟ ಸೂಕ್ತ ಕಾಯ್ದೆ ಕಾನೂನು ತರುವುದು
ಇವೆಲ್ಲರ ಬಗ್ಗೆ ಮನವಿ ಕೊಡಲಾಯಿತು.

ಈ ಸಂದರ್ಭದಲ್ಲಿ ಒಕ್ಕೂಟದ ಕೇಂದ್ರೀಯ ಅಧ್ಯಕ್ಷರಾದ ವಿನೋದ್ ಶೆಟ್ಟಿ, ಗೌರವ ಅಧ್ಯಕ್ಷರಾದ ಗಣೇಶ್ ದೇವಾಡಿಗ, ಪ್ರಧಾನ ಕಾರ್ಯದರ್ಶಿ ದಿನೇಶ ಪೂಜಾರಿ ಸಂಘಟನೆ ಕಾರ್ಯದರ್ಶಿ ರಮೇಶ್ ಪೂಜಾರಿ, ಉಪಾಧ್ಯಕ್ಷರಾದ ಉದಯ ಮೆಂಡನ್, ವಾಸು ಶೇರಿಗಾರ, ಕಾರ್ಯಕಾರಿ ಸಮಿತಿ ಸದಸ್ಯರಾದ ಸಮಿತ ಶೆಟ್ಟಿ, ಕೃಷ್ಣ ಪೂಜಾರಿ ಅಂಜಾರು, ಪ್ರಶಾಂತ್ ಶೆಟ್ಟಿ, ಸುನಿಲ್ ಮಂಚಿ ಪ್ರಮುಖ ಸದಸ್ಯರು ಉಪಸ್ಥಿತರಿದ್ದರು.

ಬಿಹಾರ:ಮನೆ ಸಂಖ್ಯೆ ‘0’:ಮತದಾರರ ಸಂಖ್ಯೆ 2,92,048

0

ಬಿಹಾರ:ಮನೆ ಸಂಖ್ಯೆ ‘0’:ಮತದಾರರ ಸಂಖ್ಯೆ 2,92,048

ಪಾಟ್ನಾ: ಭಾರತದ ಚುನಾವಣಾ ಆಯೋಗವು ವಿವಾದಾತ್ಮಕ ವಿಶೇಷ ತೀವ್ರ ಪರಿಷ್ಕರಣೆಯ ನಂತರ ಸಿದ್ಧಪಡಿಸಿದ ಬಿಹಾರದ ಕರಡು ಮತದಾರರ ಪಟ್ಟಿಯ ವಿಶ್ಲೇಷಣೆಯು, ಬಿಹಾರದಲ್ಲಿ 2,92,048 ಮತದಾರರು ತಮ್ಮ ಮನೆ ಸಂಖ್ಯೆಯನ್ನು ‘0’, ’00’, ಮತ್ತು ‘000’ ಎಂದು ನಮೂದಿಸಿರುವುದನ್ನು ತೋರಿಸುತ್ತದೆ. ಈ ಕರಡು ಪಟ್ಟಿಯನ್ನು ಆಗಸ್ಟ್ 1 ರಂದು ಇಸಿಐ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು ಎಂದು ದಿ ನ್ಯೂಸ್ ಮಿನಿಟ್‌ ವರದಿ ಮಾಡಿದೆ.

ಬಿಹಾರದ ಮುಖ್ಯ ಚುನಾವಣಾ ಅಧಿಕಾರಿಗಳ (ಸಿಇಒ) ಕಚೇರಿಯ ಅಧಿಕಾರಿಯೊಬ್ಬರು, ಇಂತಹ “ತಪ್ಪುಗಳು” ಪಟ್ಟಿಯಲ್ಲಿ ಕಂಡುಬರುವುದು ಸಹಜ ಎಂದು ಒಪ್ಪಿಕೊಂಡಿದ್ದಾರೆ. “ಕೆಲವೊಮ್ಮೆ ಮತದಾರರು ತಮ್ಮ ಮನೆ ಸಂಖ್ಯೆಯನ್ನು ಭರ್ತಿ ಮಾಡುವುದಿಲ್ಲ. ಆದರೂ, ಇಸಿಐ ವೆಬ್‌ಸೈಟ್ ಅಂತಹ ಅರ್ಜಿಗಳನ್ನು ಸ್ವೀಕರಿಸುತ್ತದೆ. ಅದಕ್ಕಾಗಿಯೇ ಮನೆ ಸಂಖ್ಯೆಯ ಡೀಫಾಲ್ಟ್ ಮೌಲ್ಯವನ್ನು ‘0’ ಎಂದು ತೋರಿಸಲಾಗುತ್ತದೆ. ನಾವು ಇದನ್ನು ಸರಿಪಡಿಸಲು ಪ್ರಯತ್ನಿಸುತ್ತೇವೆ,” ಎಂದು ಉಪ ಮುಖ್ಯ ಚುನಾವಣಾಧಿಕಾರಿ ಅಶೋಕ್ ಪ್ರಿಯದರ್ಶಿ ಹೇಳಿದ್ದಾರೆ.

ವಿಶೇಷ ತೀವ್ರ ಪರಿಷ್ಕರಣೆಯು ಮತದಾನದಿಂದ ಸಾಮೂಹಿಕ ಹೊರಗಿಡುವಿಕೆಗೆ ಕಾರಣವಾಗುತ್ತದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ರಾಜ್ಯದ ಕರಡು ಮತದಾರರ ಪಟ್ಟಿಯಲ್ಲಿ 65 ಲಕ್ಷ ಮತದಾರರನ್ನು ಕೈಬಿಡಲಾಗಿದೆ.

ದಿ ನ್ಯೂಸ್ ಮಿನಿಟ್‌ 235 ವಿಧಾನಸಭಾ ಕ್ಷೇತ್ರಗಳಲ್ಲಿ ಹರಡಿರುವ 87,898 ಮತಗಟ್ಟೆಗಳಲ್ಲಿನ 7 ಕೋಟಿಗೂ ಹೆಚ್ಚು ಮತದಾರರ ಕರಡು ಪಟ್ಟಿಯನ್ನು ಪರಿಶೀಲಿಸಿದೆ. ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿನ 2,184 ಮತಗಟ್ಟೆಗಳನ್ನು ದಿ ನ್ಯೂಸ್ ಮಿನಿಟ್‌ ವಿಶ್ಲೇಷಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದೆ. ಏಕೆಂದರೆ ಆಗಸ್ಟ್ 7 ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಗಳೂರಿನ ವಿಧಾನಸಭಾ ಕ್ಷೇತ್ರದಲ್ಲಿ “ವೋಟ್ ಚೋರಿ” (ಮತಗಳ ಕಳ್ಳತನ) ಆರೋಪಿಸಿದ ನಂತರ ಇಸಿಐ ತನ್ನ ವೆಬ್‌ಸೈಟ್‌ನಲ್ಲಿ ಮತದಾರರ ಪಟ್ಟಿಯ ಸ್ವರೂಪವನ್ನು ಯಂತ್ರ-ಓದಲಾಗದ ಸ್ವರೂಪಕ್ಕೆ (non-machine-readable format) ಬದಲಾಯಿಸಿದೆ. ಮತದಾರರ ಪಟ್ಟಿಯನ್ನು ಆರಂಭದಲ್ಲಿ ಯಂತ್ರ-ಓದಲಾಗುವ ಸ್ವರೂಪದಲ್ಲಿ (machine-readable format) ಅಪ್‌ಲೋಡ್ ಮಾಡಲಾಗಿತ್ತು.

ಯಂತ್ರ-ಓದಲಾಗುವ ಸ್ವರೂಪದಲ್ಲಿನ ಡೇಟಾವನ್ನು ಕಂಪ್ಯೂಟರ್‌ಗಳು ಸುಲಭವಾಗಿ ಓದಲು ಮತ್ತು ಪ್ರಕ್ರಿಯೆಗೊಳಿಸಲು ಅನುಕೂಲವಾಗುವಂತೆ ರಚಿಸಲಾಗಿರುತ್ತದೆ. ಇದಕ್ಕೆ ವಿರುದ್ಧವಾಗಿ, ಯಂತ್ರ-ಓದಲಾಗದ ಡೇಟಾ ಸಾಮಾನ್ಯವಾಗಿ ಅಸಂಘಟಿತವಾಗಿರುತ್ತದೆ, ಇದು ಮಾನವ ಹಸ್ತಕ್ಷೇಪವಿಲ್ಲದೆ ಕಂಪ್ಯೂಟರ್‌ಗಳಿಗೆ ಪರಿಣಾಮಕಾರಿಯಾಗಿ ಓದಲು ಅಥವಾ ವಿಶ್ಲೇಷಿಸಲು ಕಷ್ಟಕರ ಅಥವಾ ಅಸಾಧ್ಯವಾಗಿಸುತ್ತದೆ.

ಬಿಹಾರದ ಮಗಧ ಮತ್ತು ಪಾಟ್ನಾ ಪ್ರದೇಶಗಳಲ್ಲಿ ತಮ್ಮ ಮನೆ ಸಂಖ್ಯೆಯನ್ನು “0” ಎಂದು ನಮೂದಿಸಿದ ಮತದಾರರ ಸಂಖ್ಯೆ ಹೆಚ್ಚಿದೆ.

ಔರಂಗಾಬಾದ್ ಜಿಲ್ಲೆಯ ಒಬ್ರಾ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅತಿ ಹೆಚ್ಚು ಅಂತಹ ಮತದಾರರು (6,637) ಕಂಡುಬಂದಿದ್ದಾರೆ. ನಂತರ ಫುಲ್ವಾರಿ (5,905), ಮನೇರ್ (4,602), ಫೋರ್ಬ್ಸ್‌ಗಂಜ್ (4,155), ದಾನಾಪುರ (4,063), ಗೋಪಾಲ್‌ಗಂಜ್ (3,957), ಪಾಟ್ನಾ ಸಾಹಿಬ್ (3,806), ಹಾಜಿಪುರ (3,802), ದರ್ಭಂಗಾ (3,634), ಮತ್ತು ಗಯಾ ಟೌನ್ (3,561) ನಲ್ಲಿ ಹೆಚ್ಚಿದ್ದಾರೆ.

ಫೋರ್ಬ್ಸ್‌ಗಂಜ್, ಹಾಜಿಪುರ ಮತ್ತು ದರ್ಭಂಗಾ ಹೊರತುಪಡಿಸಿ, ಈ ಏಳು ಕ್ಷೇತ್ರಗಳು ರಾಜ್ಯದ ಅತ್ಯಂತ ಅಭಿವೃದ್ಧಿ ಹೊಂದಿದ ಪ್ರದೇಶಗಳಲ್ಲಿ ಒಂದಾದ ಪಾಟ್ನಾ ಪ್ರದೇಶದಲ್ಲಿವೆ.

ಒಟ್ಟು 15 ಕ್ಷೇತ್ರಗಳಲ್ಲಿ 3 ಲಕ್ಷಕ್ಕಿಂತ ಹೆಚ್ಚು ಅಂತಹ ಹೆಸರುಗಳು ಕಂಡುಬಂದಿವೆ. ಭೋಜ್‌ಪುರ ಜಿಲ್ಲೆಯ ಅಗಿಯೋನ್‌ನಲ್ಲಿ ಅತಿ ಕಡಿಮೆ ಅಂತಹ ಮತದಾರರಿದ್ದಾರೆ (47).

ನಕಲಿ ಮತದಾರರ ಪ್ರಕರಣ ಜೂನ್ 24 ರ ಪತ್ರಿಕಾ ಪ್ರಕಟಣೆಯಲ್ಲಿ, ಇಸಿಐ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಉದ್ದೇಶವು ಯಾವುದೇ ಅರ್ಹ ಮತದಾರರನ್ನು ಕೈಬಿಡದಂತೆ ಮತ್ತು ಅನರ್ಹ ಮತದಾರರು ಪಟ್ಟಿಗೆ ಸೇರದಂತೆ ಖಚಿತಪಡಿಸುವುದು ಎಂದು ಹೇಳಿದೆ. ಅಭೂತಪೂರ್ವ ಕ್ರಮದಲ್ಲಿ, ಪ್ರತಿ ಮತದಾರರು ಮತ ಚಲಾಯಿಸಲು ಅವಕಾಶ ನೀಡುವ ಮೊದಲು ತಮ್ಮ ಪೌರತ್ವವನ್ನು ಸಾಬೀತುಪಡಿಸಬೇಕು ಎಂದು ಚುನಾವಣಾ ಸಂಸ್ಥೆ ಹೇಳಿತ್ತು.

ವಿಶೇಷ ತೀವ್ರ ಪರಿಷ್ಕರಣೆಯ ಮೊದಲ ಹಂತದಲ್ಲಿ, ಬೂತ್ ಮಟ್ಟದ ಅಧಿಕಾರಿಗಳು ಪ್ರತಿ ಮತದಾರರ ಬಗ್ಗೆ ಗಣತಿ ಫಾರ್ಮ್‌ಗಳ ನಕಲು ಪಡೆಯಲು ಮನೆ-ಮನೆಗೆ ಹೋಗಬೇಕಾಗಿತ್ತು ಮತ್ತು ಮತದಾರರು ಇರಿಸಿಕೊಳ್ಳಲು ಎರಡನೇ ಪ್ರತಿಯ ಮೇಲೆ ಸ್ವೀಕೃತಿ ರಶೀದಿಗೆ ಸಹಿ ಹಾಕಬೇಕಾಗಿತ್ತು. ಗಣತಿ ಫಾರ್ಮ್‌ಗಳನ್ನು ಸಲ್ಲಿಸಿದವರು ಕರಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ ಮತ್ತು ಈಗ ಅವರು ತಮ್ಮ ಪೌರತ್ವವನ್ನು ಸಾಬೀತುಪಡಿಸಲು ಸೆಪ್ಟೆಂಬರ್ 1 ರೊಳಗೆ ಪೂರಕ ದಾಖಲೆಗಳನ್ನು ಸಲ್ಲಿಸಬೇಕು.

ಜುಲೈ 27 ರ ಪತ್ರಿಕಾ ಪ್ರಕಟಣೆಯ ಪ್ರಕಾರ, ಆಯೋಗವು 91.6 ರಷ್ಟು ಮತದಾರರ ಗಣತಿ ಫಾರ್ಮ್‌ಗಳನ್ನು ಸಂಗ್ರಹಿಸಿದೆ. ಇದು 65 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಹೇಳಿದೆ. ಇವರಲ್ಲಿ, 22 ಲಕ್ಷ ಮೃತರು, 36 ಲಕ್ಷ ಸ್ಥಳಾಂತರಗೊಂಡವರು ಅಥವಾ ಕಂಡುಬರದವರು, ಮತ್ತು 7 ಲಕ್ಷ ನಕಲುಗಳ ಕಾರಣದಿಂದ ಕೈಬಿಡಲಾಗಿದೆ ಎಂದು ಇಸಿಐ ಹೇಳಿದೆ.

ಪಾಸ್‌ಪೋರ್ಟ್, ಬ್ಯಾಂಕ್ ಪಾಸ್‌ಬುಕ್ ಅಥವಾ ಚಾಲನಾ ಪರವಾನಗಿಯಂತಹ ನಿವಾಸದ ಪುರಾವೆಗಳು ಮತದಾರರಾಗಿ ನೋಂದಾಯಿಸಲು ಕಡ್ಡಾಯ ಪುರಾವೆಗಳಾಗಿವೆ, ಆದರೆ, ಪತ್ತೆಹಚ್ಚಲಾಗದ ಮತದಾರರು ಪಟ್ಟಿಗೆ ಸೇರಬಹುದು ಎಂದು ದಿ ನ್ಯೂಸ್ ಮಿನಿಟ್ ಈ ಹಿಂದೆ ವರದಿ ಮಾಡಿತ್ತು. ಉತ್ತರ ಪ್ರದೇಶದ ಮೀರತ್‌ನಲ್ಲಿ, ಎರಡು ಮತಗಟ್ಟೆಗಳಲ್ಲಿ 27 ರಷ್ಟು ನಕಲಿ ಮತದಾರರಿದ್ದರು ಮತ್ತು ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿಗಳು ‘ಅಂತಹ ಮತದಾರರನ್ನು’ ತೊಡೆದುಹಾಕಲು ಯಾವುದೇ ವ್ಯವಸ್ಥೆ ಇಲ್ಲ ಎಂದು ಹೇಳಿದ್ದಾರೆ.