ಕಾರ್ಕಳ:ಬಸ್ ಗೆ ಆಂಬುಲೆನ್ಸ್ ಡಿಕ್ಕಿ ಹೊಡೆದ ಘಟನೆ ಕಾರ್ಕಳ ಕುಕ್ಕುಂದೂರು ಬಳಿನಡೆದಿದೆ.
ಬಸ್ ಚಾಲಕ ಸುಲೇಮಾನ್ ಎಂಬುವವರು ಕುಕ್ಕುಂದೂರು ಗ್ರಾಮದ ದುರ್ಗಾ ಹೈಸ್ಕೂಲ್ ಗ್ಯಾರೇಜ್ ಸ್ಟಾಪ್ ನಲ್ಲಿ ಬಸ್ಸನ್ನು ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿ ಮುಂದಕ್ಕೆ ಹೋಗುತ್ತಿರುವಾಗ ಅಜೆಕಾರು ಕಡೆಯಿಂದ ನೊಂದಣಿ ಸಂಖ್ಯೆ ಇಲ್ಲದ T1024KA2619E ಇರುವ ಅಂಬುಲೆನ್ಸ ವಾಹನವನ್ನು ಅದರ ಚಾಲಕ ಜೋಡುರಸ್ತೆಯ ಕಡೆಗೆ ಅತೀ ವೇಗ ಚಲಾಯಿಸಿ ಕೊಂಡು ಬಂದು ಬಸ್ಸಿನ ಬಲಬದಿಯ ಎದುರುಗಡೆ ಡಿಕ್ಕಿ ಹೊಡೆದು ನಂತರ ರಸ್ತೆಯ ಬದಿಯಲ್ಲಿ ಇರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ರಸ್ತೆಯ ಬದಿಯಲ್ಲಿ ಇದ್ದ ವಿದ್ಯುತ್ ಕಂಬ ತುಂಡಾಗಿದ್ದು, ಬಸ್ ಬಾಗಿಲು ಹಾಗೂ ಬಂಪರ್ ಮತ್ತು ಅಂಬುಲೆನ್ಸ ವಾಹನ ಸಂಪೂರ್ಣ ಜಖಂಗೊಂಡಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.