ಗಿರಿಜಾ ಹೆಲ್ತ್ ಕೇರ್ ಅಂಡ್ ಸರ್ಜಿಕಲ್ಸ್ ಮತ್ತು SCI ಉಡುಪಿ ಟೆಂಪಲ್ ಸಿಟಿ ವತಿಯಿಂದ ಗಿರಿಜಾ ಹೆಲ್ತ್ ಕೇರ್ ಅಂಡ್ ಸರ್ಜಿಕಲ್ಸ್ ನ ಉಡುಪಿ ಶಾಖೆ ಯಲ್ಲಿ ದಾದಿಯರ ದಿನಾಚರಣೆ ಯನ್ನು ಆಚರಿಸಲಾಯಿತು.
ಉಡುಪಿ ಸುತ್ತಮುತ್ತಲಿನ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತಿರುವ ನರ್ಸಿಂಗ್ ಸುಪೆರಿಂಟೆಂಡೆಂಟ್ಸ್ ಮತ್ತು ಹಿರಿಯ ದಾದಿಯರನ್ನು ಅವರು ತಮ್ಮ ಕ್ಷೇತ್ರದಲ್ಲಿ ಮಾಡುತಿರುವ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸುಮಾರು 45 ರಿಂದ 50 ದಾದಿಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಡಾ.ಶ್ರೀಪತಿ ಎಂ ಭಟ್ ಮತ್ತು ಡಾ.ರಂಜಿತಾ ನಾಯಕ್ ಸ್ತ್ರಿರೋಗ ಮತ್ತು ಪ್ರಸೂತಿ ತಜ್ಞರು ಮೆಡಿಕಲ್ ಸೆಂಟರ್ ಕೋರ್ಟ್ ಬ್ಯಾಕ್ ರೋಡ್ ಉಡುಪಿ ಇವರು ಉಪಸ್ಥಿತರಿದ್ದರು.
ಸಂಸ್ಥೆಯ ಪ್ರವರ್ಥಕರಾದ ರವೀಂದ್ರ ಶೆಟ್ಟಿಯವರು ಕಾರ್ಯಕ್ರಮ ನಿರ್ವಹಿಸಿದರು.
ಈ ಸಂದರ್ಭದಲ್ಲಿ SCI ಉಡುಪಿ ಟೆಂಪಲ್ ಸಿಟಿ ಸಂಸ್ಥೆಯ ಅಧ್ಯಕ್ಷರಾದ ಅಲ್ವೆನ್ ಮೆನೆಜಸ್ ಕಾರ್ಯದರ್ಶಿಯಾದ ಟಿಆರ್ ದೊಡ್ಡಮನಿ ಪೂರ್ವಾಧ್ಯಕ್ಷರಾದ ಸುಕುಮಾರ ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು.
ಅದೇ ದಿನ ಮಂಗಳೂರು ಮತ್ತು ಕುಂದಾಪುರ ಶಾಖೆ ಗಳು ಕೂಡ ಆ ಭಾಗದಲ್ಲಿ ಕಾರ್ಯನಿರ್ವಹಿಸುತಿರುವ ದಾದಿಯರುನ್ನು ಅವರ ಕಾರ್ಯ ಸ್ಥಳಕ್ಕೆ ಭೇಟಿ ಕೊಟ್ಟು ಅವರನ್ನು ಸನ್ಮಾನಿಸಿ ಗೌರವಿಸಿದರು.