ಕಾರ್ಕಳ:ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದಲ್ಲಿ ನೂತನ ನಾಗಬಿಂಬ,ರಕ್ತೇಶ್ವರಿ ಪ್ರತಿಷ್ಠೆ
ಕಾರ್ಕಳ:ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ನಾಗಬನದಲ್ಲಿ ಆನೆಗುಂದಿ ಸರಸ್ವತೀ ಪೀಠದ ಕಾಲಹಸ್ತೇ೦ದ್ರ ಸರಸ್ವತೀ ಮಹಾಸ್ವಾಮೀಜಿ ಇವರ ಉಪಸ್ಥಿತಿಯಲ್ಲಿ ಮೇ 25 ರಂದು ಪ್ರಾತಃಕಾಲ ಗಂಟೆ 8.02ರಿಂದ 8.58ವರೆಗಿನ ಅವಧಿಯಲ್ಲಿ ನೂತನ ನಾಗಬಿಂಬ ಹಾಗೂ ರಕ್ತೇಶ್ವರಿ ಪ್ರತಿಷ್ಠೆಯು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವೇlಮೂlಕೆ. ಉಮೇಶ್ ತಂತ್ರಿಯವರ ಆಚಾರ್ಯತ್ವದಲ್ಲಿ ಪ್ರಧಾನ ಅರ್ಚಕ ವಿಠ್ಠಲ್ ಆಚಾರ್ಯ ಹಾಗೂ ವೈದಿಕ ಮಹಾಶಯರ ಸಹಯೋಗದೊಂದಿಗೆ ಜರುಗಲಿದೆ ಎಂದು ದೇಗುಲದ ಆಡಳಿತ ಮೊಕ್ತೇಸರ ಶಿಲ್ಪಿ ರಾಮಚಂದ್ರ ಆಚಾರ್ಯ ಅತ್ತೂರು,ಜತೆ ಮೊಕ್ತೇಸರರಾದ ಪಿ.ರವಿ ಆಚಾರ್ಯ ಪೆರ್ವಾಜೆ ಮತ್ತು ಕೆ ಸುರೇಶ ಆಚಾರ್ಯ ನಿಟ್ಟೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.